
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ


ಪ್ರತಿಧ್ವನಿ,ಯಲ್ಲಾಪುರ : ಶಾಸಕ ಶಿವರಾಮ ಹೆಬ್ಬಾರ್ ಅವರ ಹುಟ್ಟುಹಬ್ಬ ಅಭಿಮಾನಿ ಕಾರ್ಯಕರ್ತರಲ್ಲಿ ಸಂಭ್ರಮಕ್ಕೆಡೆ ಮಾಡಿತ್ತು. ಮುಂಜಾನೆಯಿಂದಲೇ ಹೆಬ್ಬಾರ್ ಸ್ವಗೃಹದ ಮುಂದೆ ನೆಚ್ಚಿನ ನಾಯಕನನ್ನು ಕಂಡು ಶುಭ ಹಾರೈಸಲು ಅಭಿಮಾನಿಗಳು, ಕಾರ್ಯಕರ್ತರ ದಂಡು ಕಾತರದಿಂದ ಕಾಯುತ್ತಿತ್ತು. ಪ್ರತಿದಿನದಂತೆ ದೇವರ ಪೂಜೆ ನೆರವೇರಿಸಿ ಹೆಬ್ಬಾರ್ ಮನೆಯಿಂದ ಹೊರಗಡಿಯಿಡುತ್ತಲೇ ಅಭಿಮಾನಿಗಳು, ಕಾರ್ಯಕರ್ತರು ಹೂಗುಚ್ಛ ನೀಡಿ , ಸಿಹಿ ತಿನಿಸಿ ಹುಟ್ಟುಹಬ್ಬಕ್ಕೆ ಶುಭ ಕೋರಿದರು.

ಹೆಬ್ಬಾರ್ ಆಪ್ತರು, ಹಿರಿಯರು, ಜನಪ್ರತಿನಿಧಿಗಳು, ಅಧಿಕಾರಿ ವರ್ಗದವರು ಹೂಗುಚ್ಛ ನೀಡಿ ಹುಟ್ಟುಹಬ್ಬದ ಶುಭಾಶಯ ಕೋರಿದರು. ಕಾರ್ಯಕರ್ತರು ಮತ್ತು ಅಭಿಮಾನಿಗಳು ಬಲು ಆಸೆಯಿಂದ ತಂದ ಕೇಕುಗಳನ್ನು ಕತ್ತರಿಸಿ ಅವರಿಗೂ ತಿನಿಸಿ ತಾವೂ ತಿಂದು ಸರಳತೆಯೊಂದಿಗೆ ಯಾರಿಗೂ ಬೇಸರ ಮೂಡಿಸದೇ ಹೆಬ್ಬಾರ್ ಹುಟ್ಟುಹಬ್ಬ ಆಚರಿಸಿಕೊಂಡರು.




ಹುಟ್ಟುಹಬ್ಬದ ನಿಮಿತ್ತ ಹೆಬ್ಬಾರ್ ಅಭಿಮಾನಿ ಬಳಗ, ತಾಲೂಕು ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು-ಹಣ್ಣು ಹಂಚಿದರು. ನಂತರ ಪಟ್ಟಣದ ಬಾಳಗಿಮನೆಯಲ್ಲಿರುವ ಶ್ರೀ ರಾಘವೇಂದ್ರ ಹಿರಿಯ ನಾಗರೀಕರು ಮತ್ತು ಬುದ್ದಿಮಾಂದ್ಯ ಮಕ್ಕಳ ವಸತಿಯುತ ವಿಶೇಷ ಶಾಲೆಯಲ್ಲಿ ಹೊದಿಕೆ ಮತ್ತು ಆಹಾರ ಸಾಮಗ್ರಿಗಳನ್ನು ವಿತರಿಸಿ ಹೆಬ್ಬಾರ್ ಹುಟ್ಟುಹಬ್ಬವನ್ನು ಸಾರ್ಥಕವಾಗಿಸಿದರು.

ಈ ಸಂದರ್ಭದಲ್ಲಿ ಪುತ್ರ ವಿವೇಕ್ ಹೆಬ್ಬಾರ್, ಬಿಜೆಪಿ ಮಂಡ¯ ಉಪಾಧ್ಯಕ್ಷ ಶಿರೀಶ್ ಪ್ರಭು, ಖಜಾಂಚಿ ಮುರಳೀ ಹೆಗಡೆ, ಪ.ಪಂ ಸದಸ್ಯ ಅಮಿತ್ ಅಂಗಡಿ, ವಿನೋದ ತಳೇಕರ , ಗಿರೀಶ್ ಹೆಗಡೆ, ಗಣೆಶ ಹೆಗಡೆ ಪಣತಗೇರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.





Prathidvani Yellapura