



ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ – ಪಟ್ಟಣದ ಜೋಡುಕೆರೆ ಸುತ್ತ ಮುತ್ತ ಮತ್ತು ನೀರೊಳಗಿನ ಪ್ಲಾಸ್ಟಿಕ್ ತ್ಯಾಜ್ಯ ಹೊರತೆಗೆದು ಸ್ವಚ್ಛಗೊಳಿಸುವ ಅಭಿಯಾನ ” ಜೋಡುಕೆರೆ ಕ್ಲೀನ್” ಅಭಿಯಾನದ ಹೆಸರಿನಲ್ಲಿ ಕಳೆದ ಕೆಲವು ದಿನಗಳಿಂದ ಪ್ರಾರಂಭಿಸಿದ್ದು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಮತ್ತಷ್ಟು ವೇಗ ಸಿಕ್ಕಿದೆ.

ಇದೀಗ ಪ್ರತಿ ವಾರದಲ್ಲಿ ಶನಿವಾರ ಬೆಳಗ್ಗೆ ಒಂದು ಗಂಟೆಗಳ ಸ್ವಚ್ಚತಾ ಕಾರ್ಯಕ್ಕಾಗಿ ಶ್ರಮದಾನ ಕೈಗೊಳ್ಳುತ್ತಿದ್ದು ಅದರ ಭಾಗವಾಗಿ ಶನಿವಾರ 20 ಕ್ಕು ಅಧಿಕ ಮಂದಿ ಸ್ವಯಂ ಪ್ರೇರಣೆಯಿಂದ ಸ್ವಚ್ಚತಾ ಕಾರ್ಯಕ್ಕೆ ಕೈ ಜೋಡಿಸಿದರು.

ಪ್ರತಿಧ್ವನಿ ಯಲ್ಲಾಪುರ, ವಿಷನ್ ಜನಪ್ರದೇಶಾಭಿವೃದ್ದಿ ಟ್ರಸ್ಟ್, ನಾಗರಿಕ ವೇದಿಕೆ, ಮಾತೃಭೂಮಿ ಸೇವಾ ಸಂಸ್ಥೆ ಮತ್ತು ಪಟ್ಟಣ ಪಂಚಾಯತ್ ಹಾಗು ಸ್ವಚ್ಚತಾ ಪ್ರೇಮಿಗಳು ಭಾಗವಹಿಸಿ ಪ್ಲಾಸ್ಟಿಕ್ ಬಟ್ಟೆ, ಗಾಜು ಇನ್ನಿತರ ತ್ಯಾಜ್ಯ ಸ್ವಚ್ಚ ಗೊಳಿಸಿದರು.



ಪಟ್ಟಣದ ನಾಗರಿಕರು ವಾರದಲ್ಲಿ ಒಮ್ಮೆ ಇಂತಹ ಸಮಾಜಮುಖಿ ಕಾರ್ಯಗಳಲ್ಲಿ ಭಾಗವಹಿಸಿ ಸಮಾಜಕ್ಕೆ ಉತ್ತಮ ಸಂದೇಶ ರವಾನಿಸಿದಂತಾಗುತ್ತದೆ ಎಂಬುದು ಹಿರಿಯರ ಅಭಿಪ್ರಾಯವಾಗಿದೆ.
