
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ – ಪಟ್ಟಣದ ಪ್ರತಿಷ್ಟಿತ ವಿದ್ಯಾಸಂಸ್ಥೆ ವೈಟಿಎಸ್ಎಸ್ ಆಂಗ್ಲ ಮಾಧ್ಯಮ ವಿಭಾಗದ ಕ್ರೀಡೋತ್ಸವ ಶನಿವಾರ ವಿದ್ಯುಕ್ತವಾಗಿ ಚಾಲನೆ ಪಡೆಯಿತು.

ಶಿಕ್ಷಣ ಇಲಾಖೆ ಸಂತೋಷ್ ಜಿಗಳೂರ್ ಕ್ರೀಡಾಧ್ವಜಾರೋಹಣ ನೆರವೇರಿಸಿದರು.

ಮಾನಸಿಕ ಸದೃಡತೆ ಅಂತರ್ ಶಕ್ತಿ ಬಲಪಡಿಸುವಲ್ಲಿ ಕ್ರೀಡೆ ಸಹಕಾರಿಯಾಗಬಲ್ಲದಾಗಿದೆ. ರಾಜ್ಯ ಮಟ್ಟದ ಕ್ರೀಡೋತ್ಸವಕ್ಕೆ ಮಾಡುವಂತಹ ಸಿದ್ದತೆ, ಕ್ರೀಡಾಪಟುಗಳ ಶಿಸ್ತು ಪಾಲನೆ ಈ ಕ್ರೀಡೋತ್ಸವದಲ್ಲಿ ಕಂಡು ಬರುತ್ತಿದ್ದು ಸಂಸ್ಥೆಗೆ ಹಾಗು ಶ್ರಮಿಸಿದ ದೈಹಿಕ ಶಿಕ್ಷಕ ತಾಂಡುರಾಯನ್ ಅವರಿಗೆ ಅಭಿನಂದನೆಗಳು ಎಂದು ಯಲ್ಲಾಪುರ ಉಪ ವಿಭಾಗದ ಎಸಿಎಫ್ ಆನಂದ್ ಹೇಳಿದರು.

ಕ್ರೀಡಾ ಚಟುವಟಿಕೆಗಳಲ್ಲಿ ವಿವಿಧ ಹಂತದಲ್ಲಿ ಪ್ರಶಸ್ತಿ ಪಡೆದ ಕ್ರೀಡಾಪಟುಗಳು ಕ್ರೀಡಾ ಜ್ಯೋತಿ ಹೊತ್ತು ತಂದು ಅತಿಥಿ ಅಭ್ಯಾಗತರಿಗೆ ಹಸ್ತಾಂತರಿಸಿ ನಂತರ ಕ್ರೀಡಾ ಜ್ಯೋತಿ ಬೆಳಗಿಸಿದರು.

ಸಂಸ್ಥೆಯ ನಿರ್ದೇಕರಾದ ರಾಜನ್ ಬಾಳಗಿ ಮತ್ತು ಎಸಿಎಫ್ ಆನಂದ್ ಪಾರಿವಾಳಗಳನ್ನು ಆಗಸಕ್ಕೆ ಹಾರಿ ಬಿಟ್ಟು ಕ್ರೀಡೋತ್ಸವಕ್ಕೆ ಶುಭಕೋರಿದರು.

ದೈಹಿಕ ಶಿಕ್ಷಕ ಜಿ.ಎಂ ತಾಂಡುರಾಯನ್ ಕ್ರೀಡಾ ಪ್ರತಿಜ್ಞಾ ವಿಧಿ ಭೋದಿಸಿದರು.

ವೈಟಿಎಸ್ಎಸ್ ಕ್ರೀಡಾಂಗಣದಲ್ಲಿ ಒಲಂಪಿಕ್ ರಿಂಗ್, ಅಂತರಾಷ್ಟ್ರೀಯ ಖ್ಯಾತಿ ಪಡೆದ ಭಾರತೀಯ ಕ್ರೀಡಾಪಟುಗಳ ಭಾವಚಿತ್ರದ ಫ್ಲೆಕ್ಸ್, ಜ್ಯೋತಿ ಬೆಳಗಿದ ರೀತಿ, ಕ್ರೀಡಾಂಗಣದ ತುಂಬಾ ರಂಗುರಂಗಿನ ಬಲೂನ್ ಗಳು ಮೈದಾನವನ್ನು ರಂಗಾಗಿಸಿದ್ದವು ಈ ಶಿಸ್ತು ಬದ್ದ ಆಯೋಜನೆ ದೈಹಿಕ ಶಿಕ್ಷಕ ತಾಂಡುರಾಯನ್ ನೇತೃತ್ವದಲ್ಲಿ ನಡೆದಿರುವುದು ವಿಶೇಷವಾಗಿತ್ತು.

ನೇತಾಜಿ ಸುಭಾಷ್, ಸರ್ದಾರ್ ವಲ್ಲಬಬಾಯಿ, ರಾಣಾ ಪ್ರತಾಪ್, ಲಾಲ್ ಬಹದ್ದೂರ್ ಎಂಬ ಮಹಾ ಪುರುಷರ ಹೆಸರಿನ ನಾಲ್ಕು ತಂಡಗಳು ಉದ್ಘಾಟನೆ ಕಾರ್ಯಕ್ರಮದಲ್ಲಿ ಶಿಸ್ತುಬದ್ದ ಪಥಸಂಚಲನ ನಡೆಸಿದವು.
ವೇದಿಕೆಯಲ್ಲಿ ಶಿಕ್ಷಣ ಇಲಾಖೆಯ ಸಂತೋಷ್ ಜಿಗಳೂರು ಸಂಸ್ಥೆಯ ಪ್ರಾಂಶುಪಾಲರಾದ ಆನಂದ್ ಹೆಗಡೆ, ಆಂಗ್ಲ ಮಾಧ್ಯಮ ವಿಭಾಗದ ಮುಖ್ಯ ಶಿಕ್ಷಕಿ ಶೈಲಜ ಮಾಪ್ಸೇಕರ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಶ್ರಾವ್ಯ ಜೋಷಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಮುಖ್ಯೋಪಾದ್ಯಾಯಿನಿ ಶೈಲಜ ಮಾಪ್ಸೇಕರ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿದರು ಶಿಕ್ಷಕಿ ಶೀಥಲ್ ವಂದಿಸಿದರು ಶಿಕ್ಷಕಿ ದಿವ್ಯಾ ಹೆಗಡೆ ನಿರೂಪಿಸಿದರು.

ವಿದ್ಯಾರ್ಧಿಗಳ ಸ್ಯಾರಿ ನೃತ್ಯ ನೆರೆದಿದ್ದ ಎಲ್ಲರ ಗಮನ ಸೆಳೆಯಿತು

