

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ – ಪಟ್ಟಣದ ಮೀನುಗಾರಿಕೆ ಇಲಾಖೆಯ ಆವಾರದಲ್ಲಿ ಫಲಾನುಭವು ರೈತರಿಗೆ ಸಾಕಾಣಿಕೆಗಾಗಿ ಉಚಿತವಾಗಿ ಮೀನುಮರಿಗಳನ್ನು ವಿತರಿಸಲಾಯಿತು.

ತಾಲ್ಲೂಕಿನ ಎಲ್ಲಾ ಪಂಚಾಯತ್ ಗಳಿಂದ ಸುಮಾರು 48 ಅರ್ಜಿಗಳು ಬಂದಿದ್ದು ಅವುಗಳಲ್ಲಿ 30 ಮಂದಿ ಫಲಾನುಭವಿಗಳಿಗೆ 45 ದಿನಗಳ ಉತ್ತಮವಾದ 500 ಗೌರಿ ತಳಿಯ ಮೀನಿನ ಮರಿಗಳನ್ನು ವಿತರಿಸಲಾಯಿತು.

ರೈತರ ಆರ್ಥಿಕ ಮಟ್ಟ ಉನ್ನತೀಕರಣಕ್ಕೆ ಮೀನುಸಾಕಾಣಿಕೆ ವರದಾನವಾಗಿದ್ದು ಕಾಲ ಕಾಲಕ್ಕೆ ಆಹಾರ ಒದಗಿಸಿ ವ್ಯವಸ್ಥಿತವಾಗಿ ನೋಡಿಕೊಂಡರೆ ಇವುಗಳ ಆದಾಯ ನಿಮಗೆ ಲಭಿಸಲಿಸಲಿದೆ ಎಂದು ಇಲಾಖೆಯ ಅಧಿಕಾರಿ ಚೇತನ್ ಕುಮಾರ್ ಹೇಳಿದರು.
