
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ.
ಪ್ರತಿಧ್ವನಿ,ಯಲ್ಲಾಪುರ : ಕಾಂಗ್ರೆಸ್ ಪಕ್ಷ ರಾಜ್ಯದ ಅಧಿಕಾರ ಗದ್ದುಗೆ ಏರುತ್ತಲೆ ಜನ ಮಾನಸದಲ್ಲಿ ಅಂದುಕೊಂಡದ್ದು ಸಿದ್ದರಾಮಯ್ಯ ಮುಖ್ಯಮಂತ್ರಿಯಾದರೆ ಅವರೆ ತಂದ ಮಹತ್ವಾಕಾಂಕ್ಷಿ ಯೋಜನೆಯಾದ ಇಂದಿರಾ ಕ್ಯಾಂಟೀನ್ ಗೆ ಮತ್ತಷ್ಟು ಬಲತುಂಬಿ ರಾಜ್ಯಾದ್ಯಂತ ಇನ್ನಷ್ಟು ಕ್ಯಾಂಟಿನ್ ಗಳು ತಲೆ ಎತ್ತಲಿವೆ ಎನ್ನುವುದಾಗಿತ್ತು. ಆದರೆ ಯಲ್ಲಾಪುರದಲ್ಲಿ ಇರುವ ಕ್ಯಾಂಟಿನ್ ಕಟ್ಟಡ ಮಳೆ ನೀರು ಸೋರಿ ಕಟ್ಟಡವೆಲ್ಲಾ ವಿದ್ಯುತ್ ಪ್ರವಹಿಸಲು ಪ್ರಾರಂಭವಾಗಿ ಒಂದುವಾರಗಳ ಕಾಲ ಮುಚ್ಚಲಾಗಿತ್ತು ಇದೀಗ ಮತ್ತೆ ಪ್ರಾರಂಭಿಸಲಾಗಿದ್ದು ನೀರು ಸೋರದಂತೆ ಪ್ಲಾಸ್ಟಿಕ್ ಟಾರ್ಪಲ್ ಹೊದಿಸಲಾಗಿದೆ.

ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ ಸಿದ್ದರಾಮಯ್ಯ ಮೊದಮೊದಲು ಇಂದಿರಾ ಕ್ಯಾಂಟೀನ್ ರೂಪುರೇಷೆ ಬದಲಿಸಿ ನೂತನ ಮೆನು ಪದ್ದತಿ ಅಳವಡಿಸಿ ಬದಲಾವಣೆಯೊಂದಿಗೆ ಯೋಜನೆಗೆ ಮತ್ತಷ್ಟು ಕಾಯಕಲ್ಪ ನೀಡುವುದಾಗಿ ಹೇಳಿದ್ದರು. ಬಜೆಟ್ ನಲ್ಲಿ ಅದಕ್ಕಾಗಿ 100 ಕೋಟಿ ಅನುದಾನ ಮೀಸಲಿರಿಸಲಾಗಿದೆಯಾದರು ಅನುಷ್ಟಾನಕ್ಕೆ ಬರುವುದು ಯಾವಾಗ ? ಅಲ್ಲಿನ ವರೆಗೆ ವ್ಯವಸ್ಥೆಯ ಸಾಧಕಬಾಧಕಗಳಕಡೆ ಗಮನ ಹರಿಸುವುದು ಯಾರು ? ಎಂಬುದು ಉತ್ತರ ಸಿಗದ ಪ್ರಶ್ನಯಾಗಿದೆ.
ಕ್ಯಾಂಟೀನ್ ನೌಕರರಿಗೆ ಐದಾರು ತಿಂಗಳುಗಳಿಂದ ಸಂಬಳವಾಗಿಲ್ಲ. ಪ್ರತಿನಿತ್ಯದ ಆಹಾರ ಸಾಮಾಗ್ರಿಗಳ ಹಣಕ್ಕಾಗಿ ಏನುಮಾಡಬೇಕು. ಕರೆಂಟ್ ಸಮಸ್ಯೆಯಾಗಿದ್ದು ಸಿಬ್ಬಂದಿಗಳು ತಮ್ಮ ಮನೆ ಕರೆಂಟ್ ಬಳಸಿ ಅಡುಗೆ ಸಿದ್ದತೆಮಾಡಿಕೊಂಡು ಉಪಹಾರ, ಊಟ ತಯಾರಿಸಿಕೊಂಡು ತರುತ್ತಿದ್ದಾರೆ. ಟೆಂಡರ್ ಪಡೆದು ಕ್ಯಾಂಟೀನ್ ಜವಬ್ದಾರಿ ನಿಭಾಯಿಸುತ್ತಿರುವವರು ಸಮಸ್ಯೆಗಳ ಕಡೆ ಗಮನ ಹರಿಸುವುದು ಯಾವಾಗ. ಯೋಜನೆಗೆ ಆಗುವ ಸಮಸ್ಯೆಗಳನ್ನು ಯಾರಬಳಿ ಹೇಳಿಕೊಳ್ಣುವುದು. ಬಡವರ ಹಸಿವನ್ನು ಅಲ್ಪ ಹಣ ಭರಿಸಿ ನಿವಾರಿಸಿಕೊಳ್ಳುವ ಯೋಜನೆಗೆ ಗ್ರಹಣ ಹಿಡಿದಿರುವುದನ್ನು ಬಿಡಿಸಬೇಕಿದೆ. ಇದಕ್ಕೆ ಸಂಬಂಧಿಸಿದ ಇಲಾಖೆಗಳು ಚಿಂತನೆ ನಡೆಸಿ ಕ್ರಮ ಕೈಗೊಳ್ಳಬೇಕಿದೆ.

ಹಲವು ಸಾರ್ವಜನಿಕರ ಅಭಿಪ್ರಾಯದಂತೆ ಇಂದಿರಾ ಕ್ಯಾಂಟೀನ್ ವ್ಯವಸ್ಥೆ ದಂದೆಯ ರೂಪದಲ್ಲಿ ಪರಿಗಣಿಸಿ ಟೆಂಡರ್ ಕರೆದು ಹಾಳು ಮಾಡುವ ಬದಲು ಸರ್ಕಾರದ ಅಡಿಯಲ್ಲೆ ಸ್ಥಳೀಯ ಆಡಳಿತದ ಸುಪರ್ಧಿಗೆ ನೀಡಿದರೆ ಯೋಜನೆ ಸಾರ್ಥಕ ದಿಕ್ಕಿನಲ್ಲಿ ಸಾಗಲಿದೆ. ಸರ್ಕಾರಿ ವಸತಿ ನಿಲಯಗಳಲ್ಲಿ ಅಡುಗೆ ಕೆಲಸಕ್ಕೆ ನೇಮಕವಾಗುವಂತೆ ಕೆಲಸಗಾರರನ್ನು ಬಳಸಿಕೊಂಡು ಹಸಿದವರ ಹಸಿವು ನೀಗಿಸುವ ಕಾರ್ಯ ಉತ್ತಮವಾಗಿ ಮಾಡಬಹುದಾಗಿದೆ ಎನ್ನುತ್ತಾರೆ ಹಲವರು.
ಏನೆ ಆಗಲಿ ಯೋಜನೆ ಉತ್ತಮ ಉದ್ದೇಶದಿಂದ ಪ್ರಾರಂಬಿಸಿದ್ದು ಸರಿಯಾದ ದಿಕ್ಕಿನಲ್ಲಿ ಸಾಗಬೇಕಿದೆ ಎಂಬುದು ತೆರಿಗೆದಾರ ನಾಗರಿಕನ ಆಗ್ರಹವಾಗಿದೆ.