

ಪ್ರತಿಧ್ವನಿ,ಯಲ್ಲಾಪುರ – ಪಟ್ಟಣದಲ್ಲಿ ನಡೆಯುವ ವಾರದ ಸಂತೆಯಲ್ಲಿ ಮಾರ್ಕೆಟ್ ರಾಣಿಯಾಗಿ ಟೊಮ್ಯಾಟೊ ಮೆರೆಯುತ್ತಿದ್ದರೆ ಇತರೆ ತರಕಾರಿಗಳು ನಾವು ಕಡಿಮೆ ಇಲ್ಲ ಎಂಬಂತೆ ಪೈಪೋಟಿಗೆ ಬಿದ್ದಂತಿದೆ ನಿದಾನವಾಗಿ ಇತರೆ ತರಕಾರಿಗಳು ದುಬಾರಿಯಾಗಿವೆ. ಇದರಿಂದ ಜನ ಸಾಮಾನ್ಯರು ಕಂಗಾಲಾಗಿದ್ದು ಹೊಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ.

ಎಣ್ಣೆಬೆಲೆ ಹೆಚ್ಚಾಯ್ತು. ತರಕಾರಿ ಬೆಲೆ ಹೆಚ್ಚಾಯ್ತು. ಗ್ಯಾಸ್ ಬೆಲೆ ಹೆಚ್ಚಾಯ್ತು ಎಂದು ಹೊಟೆಲ್ ತಿಂಡಿತಿನಿಸುಗಳ ಬೆಲೆ ಏಕಾಏಕಿ ಹೆಚ್ಚಿಸಲು ಬರುವುದಿಲ್ಲ. ಹಾಗೆಂದು ನಿತ್ಯ ಲುಕ್ಸಾನ ಅನುಭವಿಸಲು ಸಾದ್ಯವಿಲ್ಲ. ಬೆಲೆ ಕಡಿಮೆಯಾಗುವವರೆಗೆ ಬಾಗಿಲು ಮುಚ್ಚಲು ಬರುವುದಿಲ್ಲ ವ್ಯವಹಾರ ಸಾಗುತ್ತಿರಲೇಬೇಕು ಇಲ್ಲವಾದಲ್ಲಿ ಆರ್ಥಿಕ ವಹಿವಾಟು ಸಂಕಷ್ಟಕ್ಕೆ ಸಿಲುಕುತ್ತದೆ. ಹೊಟೆಲ್ ಉದ್ಯಮದ ಕತೆ ಅತ್ತ ದರಿ ಇತ್ತ ಪುಲಿ ಎಂಬಂತಾಗಿದೆ.

ಟೊಮ್ಯಾಟೊ ಸಾರ್ವಕಾಲಿಕ ದಾಖಲೆ ಬೆರಯುತ್ತ ಮುನ್ನುಗುತ್ತಿದ್ದು ಸದ್ಯ ಯಲ್ಲಾಪುರ ಮಾರುಕಟ್ಟೆಯಲ್ಲಿ ಕೆ.ಜಿ ಟೊಮ್ಯಾಟೊ 120-150 ಇದೆ ಉಳಿದ ತರಕಾರಿಗಳು ಸಹ 80-100 ದುಬಾರಿ ಯಾಗಿದ್ದು ಕೊಳ್ಳುವ ಗ್ರಾಹಕ ತಲೆಮೇಲೆ ಕೈ ಹೊತ್ತು ಮುಂದೇನು ಎಂಬಂತಾಗಿದೆ.

ಬೆಲೆ ಈ ರೀತಿ ಗಗನಕ್ಕೇರುತ್ತಿದ್ದರೆ ಸಾಮಾನ್ಯ ಜನರು ಜೀವನ ಸಗಿಸುವುದೇ ದುಸ್ತರವಾಗಲಿದೆ ಸರ್ಕಾರದ ಉಚಿತ ಯೋಜನೆಗಳ ಜೊತೆಯಲ್ಲಿ ಹೊಸ ಹೊಸ ಸ್ವರೂಪದ ಉಚಿತ ಯೋಜನೆಗಳು ಮತ್ತಷ್ಟು ಜೀವನ ನಿರ್ವಹಣೆಗೆ ಜಾರಿಯಾಗಬೇಕೇನೊ ಎನಿಸುತ್ತಿದೆ ಎನ್ನುತ್ತಿದ್ದಾರೆ ಸಾರ್ವಜನಿಕರು.