Breaking News

ಮಕ್ಕಳಿಗೆ ಆನಂದ ತಂದ ಶಿಕ್ಷಕಿ ಸುನಂದಾ ಪಾಟಣ್ಕರ್ ವೃತ್ತಿಯಿಂದ ನಿವೃತ್ತಿ..

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಪ್ರತಿಧ್ವನಿ ಯಲ್ಲಾಪುರ : ಶಿಕ್ಷಣ ನೀಡುವುದು ಅತ್ಯಂತ ಪವಿತ್ರ ಕಾರ್ಯ. ಮನುಷ್ಯನ ಬದುಕಿನ ಪಥ ನಿರ್ಧರಿಸುವುದು ತಾನು ಪಡೆದ ಸಂಸ್ಕರಾವಂತ ಶಿಕ್ಷಣದಿಂದ ಮಾತ್ರ ಸಾಧ್ಯ. ಇಂತಹ ಶಿಕ್ಷಣ ನೀಡುವ ಶಿಕ್ಷಕ ವೃತ್ತಿಯನ್ನು ಬದುಕಿನ ಧ್ಯೇಯವಾಗಿಸಿಕೊಂಡು ಗುತ್ತಿಗೆ ಆಧಾರದಲ್ಲಿ ಶಿಕ್ಷಕ ವೃತ್ತಿಯಲ್ಲಿ ಪ್ರಾರಂಭಿಸಿದ ಬದುಕು ವರ್ಷಗಳ ಸಾರ್ಥಕ ಸೇವೆಯೊಂದಿಗೆ ನಿವೃತ್ತಿ ಹೊಂದುತ್ತಿರುವ ಶಿಕ್ಷಕಿ ಸುನಂದಾ ಮಕ್ಕಳಲ್ಲಿ ಆನಂದ ತುಂಬುತ್ತಾ ಸದಾ ಹಸನ್ಮುಖಿಯಾಗಿ ಶಿಕ್ಷಕಿ ವೃತ್ತಿಯನ್ನು ನಿಭಾಯಿಸಿದವರು.


1984 ರಲ್ಲಿ ಗುತ್ತಿಗೆ ಆಧಾರದಲ್ಲಿ ಬಿಸಗೋಡು ಕಿ.ಪ್ರಾ.ಶಾಲೆಯಲ್ಲಿೆ ಶಿಕ್ಷಕಿ ವೃತ್ತಿ ಪ್ರಾರಂಭಿಸಿದರು. ನಂತರ ಖಾಯಂ ಆಗಿ 01-06-1985ರಲ್ಲಿ ಸರ್ಕಾರಿ ಸೇವೆಯಲ್ಲಿ ಮುಂದುವರೆದರು. ಪ್ರಾರಂಭದಿಂದಲೂ ಮಕ್ಕಳಲ್ಲಿ ಆಪ್ತತೆ ಹೊಂದಿದ ಶಿಕ್ಷಕಿ ಎಂದೇ ಶೈಕ್ಷಣಿಕ ವಲಯದಲ್ಲಿ ಗುರುತಿಸಿಕೊಂಡ ಸುನಂದಾ ತಮ್ಮ ವೃತ್ತಿ ಬದುಕಿನಲ್ಲಿ ಹಲವು ಶಾಲೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. 1984 -1995ರವರೆಗೆ ಸಹಸ್ರಳ್ಳಿಯ ಕಿ.ಪ್ರಾ.ಶಾಲೆ, 1995-1999ರವರೆಗೆ ಮುಂಡಗೋಡಿನ ಬಡ್ಡೀಗೇರಿಯ ಹಿ.ಪ್ರಾ.ಶಾಲೆ, 1999 -2014ರವರೆಗೆ ಯಲ್ಲಾಪುರದ ಬಾಳಗಿಮನೆಯ ಹಿ.ಪ್ರಾ ಶಾಲೆ, 2014 -2019ರವರೆಗೆ ಗಣಪತಿಗಲ್ಲಿಯ ಹಿ.ಪ್ರಾ.ಶಾಲೆ, 2019-2024ರವರೆಗೆ ಕಾಳಮ್ಮನಗರದ ಹಿ.ಪ್ರಾ.ಶಾಲೆಯಲ್ಲಿ ಪದೋನ್ನತಿ ಮುಖ್ಯಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಹೊಂದುತ್ತಿರುವ 40 ವರ್ಷಗಳ ಶೈಕ್ಷಣಿಕ ಪಯಣ ತಮ್ಮ ಬದುಕಿನ ಪುಸ್ತಕದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವ ವೃತ್ತಿ ಪಯಣವಾಗಿದೆ.

ಶಿಕ್ಷಕಿ ಸುನಂದಾ ತಾವು ಸೇವೆ ಸಲ್ಲಿಸಿದ ಎಲ್ಲ ಶಾಲೆಗಳಲ್ಲೂ ಮಕ್ಕಳು-ಪೋಷಕರಲ್ಲಿ ಪ್ರೀತಿ ಸಂಪಾದಿಸಿದ್ದಾರೆ. ಇವರ ಬಳಿ ಕಲಿತ ಮಕ್ಕಳು ಇಂದು ಸಮಾಜದ ವಿವಿಧ ಸ್ಥರಗಳಲ್ಲಿ ಉನ್ನತ ಕಾಯಕದಲ್ಲಿ ತೊಡಗಿದ್ದಾರೆ.


ಶಿಕ್ಷಕಿ ಸುನಂದಾ 2004ರಲ್ಲಿ ತಾಲೂಕು ಉತ್ತಮ ಶಿಕ್ಷಕಿ ಪ್ರಶಸ್ತಿ ಗಳಿಸಿ 2015-16ರಲ್ಲಿ ಅಂಬೇಡ್ಕರ್ ಸಂಘದ ವತಿಯಿಂದ ತಾಲೂಕು ಉತ್ತಮ ಶಿಕ್ಷಕಿ ಎಂದು ಗುರುತಿಸಿಕೊಂಡಿದ್ದಾರೆ. 2010-11ರಲ್ಲಿ ವಿಶ್ವದರ್ಶನದ ಡಿ.ಇಡಿ ಕಾಲೇಜು ವತಿಯಿಂದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಯಾಗಿ ಸತತ 14 ವರ್ಷಗಳಿಮದ ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕೇಂಧ್ರ ಸಾಹಿತ್ಯ ಪರಿಷತ್ತು, ಬೆಂಗಳೂರು ಇದರ ಯಲ್ಲಾಪುರ ಶಾಖೆಯಲ್ಲಿ ಸಹಕಾರ್ಯದರ್ಶಿಯಾಗಿ ಸಾಹಿತ್ಯ ಕೃಷಿ ಮಾಡುತ್ತಿದ್ದಾರೆ. ನ್ಯಾಷನಲ್ ಎಜುಕೇಷನ್ ಎಕ್ಸೆಲೆನ್ಸ್ ಅಚೀವರ್ಸ್ 2021-22 ಪ್ರಶಸ್ತಿ ಗಳಿಸಿದ್ದಾರೆ.

ಒಟ್ಟಿನಲ್ಲಿ ತಮ್ಮ ಬದುಕಿನ ಬಹುಸಮಯವನ್ನು ಸದಾ ಮಕ್ಕಳೊಂದಿಗೆ ಕಳೆದು ಮಕ್ಕಳಿಗೆ ನೆಚ್ಚಿನ ಶಿಕ್ಷಕಿಯಾಗಿ, ಪೋಷಕರಿಗೆ ಅತ್ಯಾಪ್ತರಾಗಿ ಸಮಾಜದಲ್ಲಿ ಗೌರವಸ್ಥಾನ ಗಳಿಸಿ ಚಿರಪರಿಚಿತರಾದ ಸುನಂದಾ ವೈ ಪಾಟಣಕರ ಅವರು ಸಮಾಜಮುಖಿ ಸೇವೆಯಲ್ಲಿ ತೊಡಗಿರುವ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಯಲ್ಲಾಪುರ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಯಶಸ್ವಿಯಾಗಿ ಇತ್ತೀಚಿಗೆ ಅಧ್ಯಕ್ಷ ಗಾದಿಯಿಂದ ನಿರ್ಗಮಿಸಿದ ಸುರೇಶ್ ಬೋರಕರ ಅವರ ಪತ್ನಿಯಾಗಿದ್ದು ಸಮಾಜಸೇವಾ ಮನೋಭಾವದ ಜೋಡಿಯಾಗಿದ್ದಾರೆ. ಇಂತಹ ಶಿಕ್ಷಕಿಯ ವೃತ್ತಿಯಿಂದ ನಿವೃತ್ತಿ ಹೊಂದುತ್ತಿದ್ದು ಭವಿಷ್ಯದ ದಿನಗಳು ಉಜ್ವಲವಾಗಿ ಶಾಂತಿ ಮತ್ತು ಸಂತಸದಿಂದಿರಲೆಂದು ಶೈಕ್ಷಣಿಕ, ಸಾಹಿತ್ಯ ಕ್ಷೇತ್ರದ ಎಲ್ಲ ಬಂಧುಗಳು ಆಶಿಸುತ್ತಿದ್ದಾರೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರ ಪೊಲೀಸರ ಕಾರ್ಯ ಕ್ಷಮತೆ – ವರ್ಷದ ಹಿಂದಿನ ಡಕಾಯಿತಿ ಪ್ರಕರಣ ಆರೋಪಿಗಳು ಸ್ವತ್ತಿನ ಸಹಿತ ಅಂದರ್.!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ತಾಲೂಕಿನ ಅರಬೈಲ್ ಘಟ್ಟದಲ್ಲಿ ಕಾರು ಅಡ್ಡಗಟ್ಟಿ …

Leave a Reply

Your email address will not be published. Required fields are marked *