Breaking News

ಸಾರ್ಥಕ ಸೇವೆಗೆ ಸಂದ ಗೌರವ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ


ಪ್ರತಿಧ್ವನಿ,ಯಲ್ಲಾಪುರ-ತಮ್ನ ಓದಿನಲ್ಲಿ ಬಂಗಾರದ ಪದಕ ಪಡೆದರು ಹಮ್ಮು ಬಿಮ್ಮು ಇಲ್ಲದೆ ತಮ್ಮ ಕರ್ತವ್ಯವೆ ನಮಗೆಲ್ಲಾ ಎಂಬ ಪ್ರಾಮಾಣಿಕತೆ ಇದ್ದುದರಿಂದಲೆ ಇಷ್ಟೊಂದು ಜನಪ್ರಿಯತೆ ಗಳಿಸಲು ಸಾದ್ಯವಾಗಿದೆ. ಸದಾ ಕ್ರಿಯಾಶೀಲ ವ್ಯಕ್ತಿತ್ವ ಪಾದರಸದಂತಹ ಬದುಕು. ಸಂಸ್ಕಾರವಂತ ಕುಟುಂಬ ಇಂತಹ ಮೇರುವ್ಯಕ್ತಿತ್ವದ ಡಾ,ಸುಬಾಸ ಜಿ ಕಾಮತ್ ಅವರು ಪಶು ವೈದ್ಯರಾಗಿ ಸೇವೆಸಲ್ಲಿಸಿ ನಿವೃತ್ತಿಯಾದ ನಂತರವು ಸಮಾಜಮುಖಿ ಸೇವಾ ಕಾರ್ಯದಲ್ಲಿ ತೊಡಗಿಕೊಂಡಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ರಾಜ್ಯ ವಿಕೇಂದ್ರೀಕರಣ ಯೋಜನ ಸಮಿತಿ ಉಪಾಧ್ಯಕ್ಷ ಪ್ರಮೋದ್ ಹೆಗಡೆ ಹೇಳಿದರು.
     ಅವರು ಪಟ್ಟಣದ ಕಾಳಮ್ಮ ದೇವಾಲಯದ ಸಭಾಭವಲ್ಲಿ ನಿವೃತ್ತ ಪಶುವೈದ್ಯ ಹಾಗು ಸಮಾಜ ಸೇವಕ ಡಾ,ಸುಭಾಸ ಜಿ ನಾಯಕ್ ರವರಿಗೆ ತ್ರಿಶೂಲ ಬಳಗ ,  ಕಾಳಮ್ಮದೇವಿ ದೇವಾಲಯದ ವತಿಯಿಂದ ಹಮ್ಮಿಕೊಂಡ ಅಭಿವಂದನಾ ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದರು.
      ವೇದಿಕೆಯಲ್ಲಿ ಡಾ,ಸುಭಾಸ್ಲ ಜಿ ಕಾಮತ್ ಮತ್ತು ಪತ್ನಿ ಸುಷ್ಮಾ ಕಾಮತ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.


ಸನ್ಮಾನ ಸ್ವೀಕರಿಸಿ ಮಾತನಾಡಿದ ಕಾಮತ್ ಅವರು. ಯಾವುದೆ ವ್ಯಕ್ತಿ ತಮ್ಮ ವೃತ್ತಿಯನ್ನು ಕರ್ತವ್ಯ ಎಂದುಕೊಳ್ಳಬೇಕೆ  ವಿನಃ  ತ್ಯಾಗ ಎಂಬ ಪದಕ್ಕೆ ಅವಕಾಶವಿಲ್ಲ. ನನ್ನ ವೃತ್ತಿ ಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡರು ನಿಮ್ಮೆಲ್ಲರ ಪ್ರೀತಿ ಪ್ರೇಮಗಳು ಅವೆಲ್ಲವನ್ನು ಸಿಹಿಯಾದ ನೆನಪಾಗಿಸಿದೆ. ತಮ್ಮೆಲ್ಲರ ಜೀವನದಲ್ಲಿ ನಿಮ್ಮ ಮಕ್ಕಳ ಭವಿಷ್ಯ ಉತ್ತಮವಾಗಿ ರೂಪಿಸುವಲ್ಲಿ ಶ್ರಮಿಸಿ ಅದರ ಪ್ರತಿಫಲ ಸಿಕ್ಕೆಸಿಗುತ್ತದೆ ಎಂದು ಹೇಳಿದರು.


   ಡಾ, ಸುಭಾಸ ಜಿ ಕಾಮತ್ ಅವರ ಕುರಿತು ಹಿರಿಯ ವಕೀಲ ವಿ.ಪಿ.ಭಟ್ ಕಣ್ಣಿ , ಪ್ರತಿಷ್ಟಿತ ಶಿಕ್ಷಣ ಸಂಸ್ಥೆ ವೈಟಿಎಸ್ಎಸ್ ಅಧ್ಯಕ್ಷ ರವಿ ಶಾನಬಾಗ್, ಗ್ರಾಮದೇವಿ ದೇವಸ್ಥಾನದ ಮ್ಯಾನೇಜಿಂಗ್ ಟ್ರಸ್ಟಿ ರಾಜೇಂದ್ರ ಪ್ರಸಾದ್ ಭಟ್ ಮಾತನಾಡಿದರು.
ವೇದಿಕೆಯಲ್ಲಿ ಡಾ,ಸುಭಾಸ್ ಜಿ ಕಾಮತ್ ಮತ್ತು ಅವರ ಧರ್ಮ ಪತ್ನಿ ಅವರನ್ನು ಗೌರವಿಸಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.


     ಕಾಳಮ್ಮ ದೇವಸ್ಥಾನ ಕಮಿಟಿ ಅಧ್ಯಕ್ಷ ಉದಯ ನಾಯ್ಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಸಾದ್ ಹೆಗಡೆ ಸ್ವಾಗತಿಸಿದರು.ಮಾನ್ಯ ಸೂರಜ್ ಶೆಟ್ಟಿ ಸನ್ಮಾನಿತರ ಅಭಿವಂದನ ಪತ್ರ ವಾಚಿಸಿದರು. ಸಂಜೀವ್ ಹೊಸ್ಕೇರಿ ನಿರೂಪಿಸಿದರು

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರ ಪೊಲೀಸರ ಕಾರ್ಯ ಕ್ಷಮತೆ – ವರ್ಷದ ಹಿಂದಿನ ಡಕಾಯಿತಿ ಪ್ರಕರಣ ಆರೋಪಿಗಳು ಸ್ವತ್ತಿನ ಸಹಿತ ಅಂದರ್.!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ತಾಲೂಕಿನ ಅರಬೈಲ್ ಘಟ್ಟದಲ್ಲಿ ಕಾರು ಅಡ್ಡಗಟ್ಟಿ …

Leave a Reply

Your email address will not be published. Required fields are marked *