
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ

ಪ್ರತಿದ್ವನಿ,ಯಲ್ಲಾಪುರ-ವಿಧಾನಸಭಾ ಕ್ಷೇತ್ರದ ಇತಿಹಾಸದಲ್ಲಿ ಅಭಿವೃದ್ಧಿ ಪರ್ವದ ಸುವರ್ಣದಿನಗಳನ್ನು ಕಾಣಿಸಿದವರೆಂದರೆ ಅದು ಅರಬೈಲ್ ಶಿವರಾಮ ಹೆಬ್ಬಾರ್. ಅವರೊಬ್ಬ ರಾಜಕಾರಣಿ ಅನ್ನುವುದಕ್ಕಿಂತ ಬಡವರ ಬಗ್ಗೆ ಪ್ರೀತಿ ಅಪ್ಯಾಯತೆ ತೋರುವ ಮಾನವೀಯ ಮೌಲ್ಯದ ಸಾಮಾನ್ಯ ಕಾರ್ಮಿಕ. ಅದಕ್ಕೆಂದೆ ಸತತ ನಾಲ್ಕನೆ ಬಾರಿ ಕ್ಷೇತ್ರದ ಜನರ ಆಶಿರ್ವಾದ ದೊರೆತಿದೆ. ವಿಶೇಷವಾಗಿ ಮೊನ್ನೆ ತಾನೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸುನಾಮಿ ಅಲೆಯ ಮದ್ಯೆ ಮತ್ತೆ ಗೆಲುವಿನ ನಗೆ ಬೀರಿದ ಶಿವರಾಮ ಹೆಬ್ಬಾರ್ ಯಶಸ್ಸಿನ ಹಿಂದೆ ಪುತ್ರ ವಿವೇಕ್ ಹೆಬ್ಬಾರ್ ಶ್ರಮವು ಕೂಡ ಅತ್ಯಂತ ಪ್ರಾಮುಖ್ಯತೆ ಪಡೆದಿದೆ.

ಕಳೆದ ಚುನಾವಣೆಗಳಲ್ಲಿ ಕ್ಷೇತ್ರ ರಾಜಕೀಯದಲ್ಲಿ ಅಷ್ಟೊಂದು ತೊಡಗಿಸಿಕೊಳ್ಳದ ವಿವೇಕ್ ಹೆಬ್ಬಾರ್ ಈ ಬಾರಿ ಚುನಾವಣೆಯಲ್ಲಿ ತಂದೆ ಶಿವರಾಮ ರ ಅರ್ಧ ಬಾರ ಹೆಗಲಮೇಲೆ ಹೊತ್ತು ಹಗಲು ರಾತ್ರಿ ಕಾಲಿಗೆ ಚಕ್ರ ಕಟ್ಟಿಕೊಂಡು ತಮ್ಮ ವ್ಯವಹಾರವನೆಲ್ಲಾ ಬಿಟ್ಟು. ಕ್ಷೇತ್ರಾದ್ಯಂತ ಸಂಚರಿಸಿ ಚುನಾವಣೆಯಲ್ಲಿ ಶ್ರಮಿಸಿದ್ದಾರೆ.

ಇಷ್ಟು ಸಾಕಲ್ಲವೆ ಭವಿಷ್ಯದಲ್ಲಿ ನಾಯಕನಾಗುವ ಎಲ್ಲಾ ಲಕ್ಷಣಗಳನ್ನು ಅಳವಡಿಸಿಕೊಳ್ಳುತ್ತಾ ಸಾಗುತ್ತಿದ್ದಾರೆ.

ಸದ್ಯ ಹೆಬ್ಬಾರ್ ಗರಡಿಯಲ್ಲಿ ಪಳಗುತ್ತಿರುವ ಯುವ ನಾಯಕ ವಿವೇಕ್ ಹೆಬ್ಬಾರ್ ಅವರಿಗೆ ಇಂದು ಜನುಮ ದಿನದ ಸಂಭ್ರಮ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಮತದಾರರು ಅದರಲ್ಲು ಶಾಸಕ ಶಿವರಾಮ ಹೆಬ್ಬಾರ್ ಅಭಿಮಾನಿಗಳು ಭವಿಷ್ಯದ ಜನನಾಯಕ ವಿವೇಕ್ ಹೆಬ್ಬಾರ್ ಗೆ ಶುಭಕೊರಿದ್ದಾರೆ.





