
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ : ಮುಂಬಯಿ ನಲ್ಲಿ ರವಿವಾರ ನಡೆದ ಅಖಿಲ ಭಾರತ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಕಾರ್ಯಕ್ರಮದಲ್ಲಿ ಯಲ್ಲಾಪುರದ ಸಮಾಜ ಸೇವಕ ಶಂಕರ್ ನಾಯಕ್ ಗೆ ” ಶರಣ ಸಂಕುಲ ರತ್ನ ರಾಷ್ಟ್ರೀಯ” ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಮಾಜಿ ಅಧ್ಯಕ್ಷ ಕರ್ನಾಟಕ ಸಂಘ ಮುಂಬಯಿ ಮನೋಹರ ಎಂ ಕೋರಿ ಪ್ರಶಸ್ತಿ ಪ್ರದಾನ ಮಾಡಿದರು.

ಶಂಕರ ಈಶಪ್ಪ ನಾಯಕ
ಇವರು ಬಳ್ಳಾರಿ ಜಿಲ್ಲೆಯ ಕೊಡ್ಲಗಿ ತಾಲ್ಲೂಕಿನ ದೂಪದಹಳ್ಳಿ ಗ್ರಾಮದವರು.1973 may 30 ರಂದು ಜನಿಸಿದರು..ತಂದೆ ಏಶಪ್ಪ,ತಾಯಿ ಸೀತಾಬಾಯಿಯ ದ್ವಿತೀಯ ಪುತ್ರ.
ಬಳ್ಳಾರಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದರು.ಹುಬ್ಬಳ್ಳಿಯಲ್ಲಿ
ಹೈಸ್ಕೂಲ್ ನಿಂದ ಡಿಗ್ರಿವರೆಗೆ ಹಾಗೂ cped,Bped ಮುಗಿಸಿದವರು.
ಕೆಲ ವರ್ಷ ಹೈಸ್ಕೂಲ್ ದೈಹಿಕ ಶಿಕ್ಷಕರಾಗಿ ಸೇವೆಸಲ್ಲಿದವರು.
ಇವರಿಗೆ ಸ್ವತಂತ್ರವಾಗಿ ಸ್ವಯಂ ಕೆಲಸ ಮಾಡುವ ಹುಮ್ಮಸ್ಸು.
ರಿಯಲ್ ಎಸ್ಟೇಟ್ ಕೆಲಸ…
ಶಂಕರ ನಾಯಕರು ಕ್ರಿಯಾಶೀಲ ಮತ್ತು ಸೃಜನಶೀಲ ವ್ಯಕ್ತಿ.
ಸಮಾಜಿಕ ಕಳಕಳಿ ಹೊಂದಿದ ಇವರು ಅನೇಕ ಪ್ರತಿಭಾನ್ವಿತ ಹಾಗೂ ಕಲಿಕೆಯಲ್ಲಿ ವಂಚಿತರಾದ ಬಡ ಮಕ್ಕಳಿಗೆ ಓದಲು ತನು,ಮನ,ಧನ ಸಹಾಯ ಪ್ರಚಾರ ಬಯಸದ ಇವರು ಸಹಾಯ ಅರಸಿ ಬಂದವರಿಗೆ ಕೈಲಾದಷ್ಟು ಮಾಡಿರಿವರು.ಅನ್ಯಾಯದ ವಿರುದ್ಧ ಧ್ವನಿಯೆತ್ತಿ ನ್ಯಾಯ ಕೊಡಿಸುವಲ್ಲಿ ಸಂಪೂರ್ಣ ಸಹಕಾರ ನೀಡಿದವರು.ಎಲ್ಲಿಯೂ ತಮ್ಮ ಬಗ್ಗೆ ಹೊಗಳಿಕೆ ಬಯಸದ ಹಾಗೂ ತೆರೆಯ ಹಿಂದೆ ದುಡಿಯುವ ಮನಸ್ಸಿನವರು.ಕಾರ್ಯಕ್ರಮ ಸಂಘಟನೆಯ ಸಂಪೂರ್ಣ ಜವಾಬ್ದಾರಿ ಹೊತ್ತು ಅಚ್ಚುಕಟ್ಟಾಗಿ ನಡೆಸಿಕೊಡುವಲ್ಲಿ ಮೊದಲಿಗರು.ತಾಳ್ಮೆ,ಸಹಕಾರ ಸಂಯಮದ ಜೊತೆ ಸಹೃದಯಿ, ಮಿತಭಾಷಿ,ಇವರ ಈ ಗುಣಗಳೊಂದಿಗೆ ಸದಾ ಜೊತೆಯಾಗಿ ಇರುವವರು. ಇವರ ಧರ್ಮಪತ್ನಿ ಸಾಹಿತಿ ಶಿಕ್ಷಕಿಯಾದ ಶ್ರೀಮತಿ ಶಿವಲೀಲಾ ಹುಣಸಗಿಯವರು.ಇವರು ಹೆಂಡತಿಯ ಸಾಹಿತ್ಯ ಪ್ರಪಂಚಕ್ಕೆ ಪ್ರೋತ್ಸಾಹ ನೀಡುತ್ತ ಬೆನ್ನೆಲುಬಾಗಿ ನಿಂತವರು. ಇಬ್ಬರೂ ಪುತ್ರಿಯರು ಸ್ನೇಹಾ,ಸ್ವಾತಿ ತಂದೆಯ ಜೊತೆಯಾಗಿ ಇದೇ ಮನೋಭಾವ ಬೆಳೆಸಿಕೊಂಡವರು.
ಎಲೆಮರೆಯ ಕಾಯಿಯಂತೆ ಸಕ್ರಿಯವಾಗಿ ತೊಡಗಿಕೊಂಡಿರುವ ಶಂಕರ ಏಶಪ್ಪ ನಾಯಕ ರವರಿಗೆ ಮುಂಬಯಿ ನಲ್ಲಿ ಅಖಿಲ ಭಾರತ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯಲ್ಲಿ ಶರಣ ಸಂಕುಲ ರತ್ನ ರಾಷ್ಟ್ರೀಯ ಪ್ರಶಸ್ತಿ ಸಂಘಟನೆಯ ವಿಭಾಗದಲ್ಲಿ ಪ್ರಶಸ್ತಿ ಪಡೆದು ಕೀರ್ತಿ ತಂದಿದ್ದಾರೆ.




