

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ : ಜಿಲ್ಲೆಯಲ್ಲಿ ಸದ್ದು ಮಾಡಿದ ಯಲ್ಲಾಪುರ ತಾಲೂಕು ಇಂಡಗುಂದಿ ಗ್ರಾಮ ಪಂಚಾಯತ ವ್ಯಾಪ್ತಿಯ ಹುಟುಕಮನೆ ಗುಡ್ಡ ನೆಲಸಮ ಪ್ರಕರಣ ಬಗೆಹರಿಯದೆ ಕಗ್ಗಂಟಾಗುತ್ತಲೆ ಸಾಗಿದೆ.

ಈ ಮೊದಲು ಈ ಪ್ರದೇಶದಲ್ಲಿ ಕೇವಲ ಗೇರು ಗಿಡಗಳಿದ್ದವೇ ಹೊರತು ಮರಗಳಿರಲಿಲ್ಲ ಎಂಬುದು ಇಡಗುಂದಿ ವಲಯ ಅರಣ್ಯಾಧಿಕಾರಿ ಎಮ್.ಹೆಚ್.ನಾಯ್ಕ್ ಅವರ ಹೆಳಿಕೆಯಾಗಿದ್ದು ಅಲ್ಲಿನ ಕಾಮಗಾರಿ ಮುನ್ನದ ಸ್ಯಾಟಲೈಟ್ ಚಿತ್ರಗಳು ಲಭ್ಯವಿದೆ ಎನ್ನುತ್ತಿರುವ ಕುರಿತು ಪ್ರಕರಣದ ದೂರುದಾರ ಮಂಜುನಾಥ ಹೆಗಡೆ ತೀವ್ರ ಅಸಮದಾನ ವ್ಯಕ್ತ ಪಡಿಸಿದ್ದು ಅಧಿಕಾರಿ ಸುಳ್ಳು ಹೇಳುತ್ತಿದ್ದು ಸತ್ಯ ಸಾಭೀತಾಗಲಿ ಎಂದು ಆಗ್ರಹಿಸಿದ್ದಾರೆ.
ಅವರೇ ಹೇಳಿದಂತೆ ಗುಡ್ಡ ತೆರವಿಗು ಮುನ್ನದ 4 ಎಕರೆ ಮಾಲ್ಕಿ ಮತ್ತು 2 ಎಕರೆ ಅರಣ್ಯ ಜಾಗದ ಸ್ಯಾಟಲೈಟ್ ಚಿತ್ರಗಳನ್ನು ಪತ್ರಿಕೆಗಳಿಗೆ ಬಿಡುಗಡೆಗೊಳಿಸಿ ಸಾರ್ವಜನಿಕವಾಗಿ ಬಹಿರಂಗ ಪಡಿಸಲಿ ಎಂದು ಆಗ್ರಹಿಸಿ ಮಾದ್ಯಮ ಹೇಳಿಕೆ ನೀಡಿದ್ದಾರೆ.




