




ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ

ಪ್ರತಿಧ್ವನಿ ಯಲ್ಲಾಪುರ : ಕಳೆದ ಎರಡು ತಿಂಗಳಿನಿಂದ ನಿರಂತರವಾಗಿ ” ಕ್ಲೀನ್ ಜೋಡುಕೆರೆ “ ಎಂಬ ಪ್ರತಿಧ್ವನಿ ಅಭಿಯಾನದಡಿಯಲ್ಲಿ ವಿವಿಧ ಸಂಘ ಸಂಸ್ಥೆಗಳ ಮತ್ತು ಪರಿಸರ ಕಾಳಜಿ ಸಮಾನ ಮನಸ್ಕರ ಸಹಯೋಗದಲ್ಲಿ ಪಟ್ಟಣ ಪಂಚಾಯತ್ ಸಹಕಾರದಲ್ಲಿ ನಿರಂತರವಾಗಿ ಸ್ವಚ್ಚತಾ ಕಾರ್ಯದಲ್ಲಿ ತೊಡಗಿಕೊಂಡು ಸ್ವಯಂ ಪ್ರೇರಣೆಯಿಂದ ಪ್ಲಾಸ್ಟಿಕ್ ಮತ್ತು ತ್ಯಾಜ್ಯ ಮುಕ್ತ ಕೆರೆಯ ಪರಿಸರಕ್ಕಾಗಿ ಶ್ರಮಿಸುತ್ತಿದ್ದರೆ ಹೊಟ್ಟೆಗೆ ಅನ್ನ ತಿನ್ನದವರು ಕೆರೆಗೆ ವಿಷವಿಕ್ಕುವರು ಮತ್ತೆ ಮತ್ತೆ ಪ್ಲಾಸ್ಟಿಕ್, ಬಟ್ಟೆ,ಗಾಜು,ತಗಡು ಹಾಗು ಇನ್ನಿತರ ವಿಷಕಾರಿ ತ್ಯಾಜ್ಯ ತಂದು ಸುರಿಯುತ್ತಿರುವುದು ಪ್ರಜ್ಞಾವಂತ ಸಮಾಜ ತಲೆ ತಗ್ಗಿಸುವಂತಿದೆ.

ಕೆಲವರ ಮನಸ್ಥಿತಿ ಹೇಗಿದೆ ಎಂದರೆ ನನ್ನ ಮನೆಯೊಳಗೆ ಸ್ವಚ್ಚವಿದ್ದರೆ ಸಾಕು ಸಮಾಜದ ಹಂಗು ನನಗೇಕೆ ಎನ್ನುವಂತಿದೆ. ಅದರಲ್ಲು ಕೆಲವರಿಗಂತು ಇಂತಹ ಸಾರ್ವಜನಿಕ ಕೆರೆ ಮತ್ತು ಇತರೆ ಸ್ಥಳಗಳು ತಮಗೆ ಯಾವುದೆ ಸಂಬಂದವೇ ಇಲ್ಲ ಇದರಲ್ಲಿ ಎಂತಹ ಕಚಡ ತ್ಯಾಜ್ಯವನ್ನು ತಂದು ಸುರಿಯಬಹುದು ಮತ್ತು ಯಾರು ಪ್ರಶ್ನಿಸುವಂತಿಲ್ಲ ಎಂಬ ದಾಷ್ಟ್ಯ ಮನಸ್ಥಿತಿಗೆ ಬಂದಿರುವುದು ಅಕ್ಷಮ್ಯವಾಗಿದೆ ದುರಂತ ಎಂದರೆ ಇಂತಹವರೆ ಸಮಾಜದ ಸ್ವಾಸ್ಥ್ಯ, ಪರಿಸರ ಸ್ವಚ್ಚತೆ ಬಗ್ಗೆ ಇತರರ ಬಳಿ ಪುಂಕಾನುಪುಂಕವಾಗಿ ಮಾತನಾಡುತ್ತಾರೆ.

ಬಹುಶಃ ಇಂತಹ ನೀಚ ಕೆಲಸ ಮಾಡುವವರಿಗೆ ಸತ್ಯದ ಅರಿವಿಲ್ಲ ಎನಿಸುತ್ತಿದೆ ಕಾರಣ ಯಲ್ಲಾಪುರದಲ್ಲಿ ನದಿ,ಹಳ್ಳ, ಡ್ಯಾಂ ಯಾವುದೆ ನೀರಿನ ಪೂರೈಕೆ ಇಲ್ಲ ಇಂದಿಗು ಪಟ್ಟಣದ ಜನರ ನೀರಿನ ಅವಶ್ಯಕತೆ ಪೂರೈಸುತ್ತಿರುವುದು ಕೊಳವೆ ಬಾವಿ ಮತ್ತು ತೆರೆದ ಬಾವಿಗಳು ಅದಕ್ಕೆ ನೀರಿನ ಪೂರೈಕೆ ಇಂತಹ ಜೀವ ಗಂಗೆಯಂತಹ ಕೆರೆಗಳು ಇವುಗಳಿಂದಲೆ ಅಂತರ್ಜಲ ಮಟ್ಟ ಹೆಚ್ಚಿಸಿಕೊಂಡು ಪಟ್ಟಣದ ಜನರ ನೀರಿನ ಅವಶ್ಯಕತೆ ನೀಗುತ್ತಿದೆ. ಇಂತಹ ಕೆರೆಗಳಿಗೆ ವಿಷವಿಕ್ಕಿದರೆ ಜಗನ್ಮಾತೆ ಗಂಗಾಮಾತೆಯ ಶಾಪಕ್ಕು ಗುರಿಯಾಗುವುದು ಶತಸಿದ್ದ.
ಸತ್ಯವೆಂದರೆ ಕೆರೆಗೆ ಪ್ಲಾಸ್ಟಿಕ್ ತ್ಯಾಜ್ಯ, ವಿಷಕಾರಿ ತ್ಯಾಜ್ಯ ಸುರಿಯುವವರಲ್ಲಿ ಬಹುಪಾಲು ಹಿಂದುಗಳೆ ಎಂಬುದು ಇನ್ನಷ್ಟು ತಲೆ ತಗ್ಗಿಸುವ ಸಂಗತಿಯಾಗಿದೆ ಸ್ವಚ್ಚತಾ ಕಾರ್ಯ ಮಾಡುವಾಗ ಅತಿಹೆಚ್ಚು ತ್ಯಾಜ್ಯ ಸಿಕ್ಕಿರುವುದು ಒಡೆದು ಹೋದ ದೇವರ ಫೋಟೋ, ಭಿನ್ನವಾದ ದೇವರ ವಿಗ್ರಹಗಳು ಅವು ಕೂಡ ಪ್ಲಾಸ್ಟರ್ ಆಫ್ ಪ್ಯಾರಿಸ್ , ಕರ್ಪೂರ, ಊದುಬತ್ತಿ , ಕುಂಕುಮ , ತೆಂಗಿನಕಾಯಿ ಪ್ಲಾಸ್ಟಿಕ್ ನಲ್ಲಿ ಕಟ್ಟಿರುವುದು, ಕೆಲವರ ಮನೆಯಲ್ಲಿ ಧಾರ್ಮಿಕ ಕಾರ್ಯ ನಡೆಸಿ ನಂತರದಲ್ಲಿ ತೆಗೆದ ತ್ಯಾಜ್ಯ ದೊಡ್ಡದಾದ ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ಕಟ್ಟಿ ಸುರಿದಿರುವುದು ಇಷ್ಟೇ ಅಲ್ಲದೆ ಚೊಂಬು,ಲೋಟ,ಪಾತ್ರೆ,ಬಟ್ಟೆ ಮನೆಯಲ್ಲಿರುವ ಕಚರ ಪೂರ್ಣ ಜೋಡುಕೆರೆಗೆ ತಂದು ಸುರಿದಿರುವುದು ಕಾಣಬಹುದು.

ಗೋವನ್ನು ದೇವರೆಂದು ಪೂಜಿಸುತ್ತೇವೆ ಅಂತೆಯೆ ಪರಿಸರದ ಚರಾಚರಗಳನ್ನು ಸಹ ಭಕ್ತಿಯಿಂದ ಕಾಣುತ್ತೇವೆ ಅಂತಹದರಲ್ಲಿ ನಮ್ಮ ಬದುಕಿನುದ್ದಕ್ಕು ಜೀವಾಳವಾಗಿರುವ ನೀರಿನ ಬಗ್ಗೆ ಏಕಿಷ್ಟು ತಾತ್ಸಾರ ದೈವ ಸ್ವರೂಪಿ ಸಾಕ್ಷಾತ್ ಗಂಗಮಾತೆಯಂತಿರುವ ಕೆರೆಯ ನೀರಿಗೆ ವಿಷಕಾರಿ ತ್ಯಾಜ್ಯ ಸುರಿಯುವುದು ಮಹಾಪಾಪದ ಕೆಲಸ ದೈವ ದ್ರೋಹಿಗಳಾಗಿ ಶಾಪಕ್ಕೆ ಗುರಿಯಾಗುವಿರಿ ಎಚ್ಚರವಿರಲಿ.

ಪಟ್ಟಣ ಪಂಚಾಯತ್ ವತಿಯಿಂದ ಪ್ರತಿ ನಿತ್ಯ ಮನೆ ಬಾಗಿಲಿಗೆ ಬಂದು ಕಸ ಸಂಗ್ರಹಿಸುತ್ತಾರೆ ಆ ಸಮಯಕ್ಕೆ ಕೊಡದೆ ಮನೆಯಲ್ಲಿ ಹಾಗೆ ಇಟ್ಟು ಗಬ್ಬೆದ್ದು ನಾರುವಾಗ ಅದನ್ನು ಮನೆಯ ಸದಸ್ಯರ ಬಳಿ ಹೊರ ಹಾಕುವಂತೆ ಕಳಿಸುತ್ತಾರೆ ಅದರ ಫಲವೆ ಕೆರೆಯಂಗಳದಲ್ಲಿ ಕಸದ ರಾಶಿಗೆ ಕಾರಣ ಎನ್ನಬಹುದು.
ಏನೆ ಇರಲಿ ಜಗತ್ತಿನಲ್ಲಿ ಭಾರತ ವಿಶ್ವ ಗುರು ಸ್ಥಾನಕ್ಕೆ ತಲುಪುತ್ತಿದೆ ಎನ್ನುವುದು ಕೇವಲ ಮಾತಿಗೆ ಸೀಮಿತವಾಗದೆ ಕೃತಿಯಲ್ಲಿರಬೇಕಿದೆ. ನಮ್ಮ ಸ್ವಚ್ಚತೆ ನಮ್ಮ ಮನೆಯೊಳಗಿದ್ದರೆ ಮಾತ್ರ ಸಾಲದು ಪರಿಸರದ ಸ್ವಚ್ಚತೆ ಬಲು ಮುಖ್ಯ. ಕನಿಷ್ಟಪಕ್ಷ ನಿಮ್ಮ ಕೈಯಲ್ಲಿ ಸ್ವಚ್ಚತಾ ಕಾರ್ಯ ಮಾಡಲಾಗದಿದ್ದರು ಚಿಂತೆ ಇಲ್ಲ ಇಂತಹ ಪುಣ್ಯ ಕಾರ್ಯದಲ್ಲಿ ತೊಡಗಿ ಸ್ವಚ್ಚತಾ ಕಾಯಕದಲ್ಲಿ ಶ್ರಮಿಸುವವರನ್ನು ಗೌರವಿಸಿ.