Breaking News

ಯಲ್ಲಾಪುರದ ವಿವಿದೆಡೆ ನಡೆದ ಕನಕದಾಸ ಜಯಂತಿ ಆಚರಣೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ

ಪ್ರತಿಧ್ವನಿ ಯಲ್ಲಾಪುರ : ತಾಲೂಕಾಡಳಿತದ ಕನಕದಾಸ ಜಯಂತಿ ದಾಸಶ್ರೇಷ್ಠರಲ್ಲಿ ಕನಕದಾಸರು ಅಗ್ರಪಂಕ್ತಿಯಲ್ಲಿದ್ದಾರೆ. ಸಮಾಜದಲ್ಲಿನ ಅಸಮಾನತೆಯ ವಿರುದ್ಧ ಧ್ವನಿ ಎತ್ತಿ ತಮ್ಮ ಕೀರ್ತನೆಗಳ ಮೂಲಕ ಜನರ ಮನಸ್ಸಿಗೆ ನಾಟುವಂತೆ ಜಾಗೃತಿ ಮೂಡಿಸುತ್ತಾ ಬಂದಿದ್ದಾರೆ. ಅವರೊಬ್ಬ ಶ್ರೇಷ್ಠ ದಾರ್ಶನಿಕರಾಗಿ ಮಾರ್ಗದರ್ಶನ ಮಾಡಿದ್ದಾರೆ. ಶ್ರೀಕೃಷ್ಣನ ದರ್ಶನ ಭಾಗ್ಯ ಪಡೆದ ದಾಸಶ್ರೇಷ್ಠ ಕನಕದಾಸರ ತತ್ವ , ಸಿದ್ಧಾಂತಗಳು ಪ್ರಸ್ತುತ ದಿನಮಾನಗಳಲ್ಲಿ ಅತ್ಯಗತ್ಯವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಶಾಂತಾರಾಂ ಸಿದ್ದಿ ಹೇಳಿದರು.


ಅವರು ಪಟ್ಟಣದ ತಾಲೂಕಾ ಆಡಳಿತ ಸೌಧದ ಸಭಾಭವನದಲ್ಲಿ ತಾಲೂಕು ಆಡಳಿತ, ತಾ.ಪಂ, ಪ.ಪಂ ಹಾಗೂ ವಿವಿಧ ಸಂಘ ಸಂಸ್ಥೆಗಳ ಅಡಿಯಲ್ಲಿ ಹಮ್ಮಿಕೊಂಡಿದ್ದ 536 ನೇ ಕನಕದಾಸ ಜಯಂತಿ ಆಚರಣೆಯ ನಿಮಿತ್ತ ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.


ತಿರುಪತಿ ತಿಮ್ಮಪ್ಪನಿಂದಲೇ ದೀಕ್ಷೆ ಪಡೆದ ಐತಿಹ್ಯವಿದ್ದು ಭಕ್ತಿ ಮಾರ್ಗದಲ್ಲಿ ಸಮಾಜ ಸುಧಾರಣೆ ಮಾಡಿದ್ದು ಸೈನಿಕನಾದವನು ಬದಲಾಗಿ ಶ್ರೀಕೃಷ್ಣನ ಪರಮ ಭಕ್ತನಾಗಿ ದಾಸಶ್ರೇಷ್ಠರಾದ ಕನಕದಾಸರ ಜೀವನ ವೃತ್ತಾಂತ ಆದ್ಯಾತ್ಮಲೋಕದ ವೈಶಿಷ್ಟಪೂರ್ಣ ಕಥನವಾಗಿದೆ ಎಂದು ಪದವಿಪೂರ್ವ ಕಾಲೇಜು ಉಪನ್ಯಾಸಕ ಮಾಲತೇಶ ಕಂಬಳಿ ಉಪನ್ಯಾಸ ನೀಡಿದರು.
ಕನಕದಾಸರ ಶ್ರೇಷ್ಠ ಪರಂಪರೆ, ದಾಸ ಸಾಹಿತ್ಯ, ಕನ್ನಡ ಸಾಹಿತ್ಯ ಲೋಕಕ್ಕೆ ಕೀರ್ತನೆಗಳ ಮೂಲಕ ನೀಡಿದ ಕೊಡುಗೆ ಕುರಿತು ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿ.ಎಂ ಭಟ್ಟ ಮಾತನಾಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ ಗುರುರಾಜ ಅಧ್ಯಕ್ಷೀಯ ನುಡಿಗಳನ್ನಾಡಿದರು.

ಇದೇ ಸಂದರ್ಭದಲ್ಲಿ ಕನಕದಾಸರ ಕೀರ್ತನೆಗಳ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಪ್ರಸಾದಿನಿ ಭಟ್ಟ , ದ್ವಿತೀಯ ಸ್ಥಾನ ಪಡೆದ ರಾಜೀವ ಗಾಂವ್ಕರ ಹಾಗೂ ತೃತೀಯ ಸ್ಥಾನ ಪಡೆದ ವಿನುತಾ ಸಿದ್ದಿ ಅವರಿಗೆ ಬಹುಮಾನ ನೀಡಲಾಯಿತು. ಹಾಗೂ ಆ ಕೀರ್ತನೆಗಳನ್ನು ಸಭೆಯಲ್ಲಿ ಹಾಡಿಸಲಾಯಿತು.

ಗ್ರಾಮ ಲೆಕ್ಕಾಧಿಕಾರಿ ಶ್ರೀಧರ ಮಡಿವಾಳ ಸ್ವಾಗತಿಸಿ, ನಿರೂಪಿಸಿ , ವಂದಿಸಿದರು. ತಾಲೂಕಿನ ವಿವಿಧ ಸಂಘ ಸಂಸ್ಥೆಗಳು, ಕುರುಬ ಸಮಾಜದ ಹಿರಿಯರು, ಮಹಿಳೆಯರು, ಸಾರ್ವಜನಿಕರು, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರತಿಧ್ವನಿ ಯಲ್ಲಾಪುರ – ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಕನಕದಾಸರ ಜಯಂತಿ ಪ್ರತಿಷ್ಠಿತ ವಿದ್ಯಾ ಸಂಸ್ಥೆ ವೈಟಿಎಸ್ಎಸ್ ನಲ್ಲಿ ಕನಕದಾಸ ಜಯಂತಿ ಆಚರಣೆ ಅತ್ಯಂತ ಸರಳ ಶ್ರದ್ಧೆಯಿಂದ ಆಚರಿಸಲಾಯಿತು.

ಕಾಲೇಜಿನ ಪ್ರಾಂಶುಪಾಲ ಆನಂದ್ ಹೆಗಡೆ ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ದಾಸ ಶ್ರೇಷ್ಟರಾದ ಕನಕದಾಸರು ತಮ್ಮ ಜೀವನದ ಬಹುಪಾಲು ಸಮಾಜ ಸುದಾರಣೆಗಾಗಿ ಸಮಾನತೆಗಾಗಿ ಕಳೆದರು. ಅವರ ಜೀವನದ ಆದರ್ಶಗಳೆಲ್ಲ ಪ್ರಸ್ತುತ ಜೀವನಕ್ಕೆ ದಾರಿ ದೀಪಗಳಾಗಿವೆ ಎಂದರು.

ಈ ಸಂದರ್ಭದಲ್ಲಿ ಪಿಯು ಕಾಲೇಜಿನ ಉಪನ್ಯಾಸಕ ರವೀಂದ್ರ ಗಾಂವ್ಕರ್ ಕನಕದಾಸರ ಕುರಿತುವಜೀವನ ವೃತ್ತಾಂತದ ಬಗ್ಗೆ ಮಾತನಾಡಿದರು.ಕನ್ನಡ ಮಾದ್ಯಮ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಎನ್.ಎಸ್‌.ಭಟ್ , ಆಂಗ್ಲ ಮಾದ್ಯಮ ವಿಭಾಗದ ಮುಖ್ಯಾದ್ಯಾಪಕಿ ಶೈಲಜಾ ಮಾಪ್ಸೇಕರ್ , ವೈಟಿಎಸ್ಎಸ್ ಶಿಕ್ಷಣ ಸಂಸ್ಥೆ ಎಲ್ಲಾ ವಿಭಾಗದ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಪ್ರತಿಧ್ವನಿ ಯಲ್ಲಾಪುರ – ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕನಕದಾಸರ ಜಯಂತಿ ಕನಕದಾಸರು ಕರ್ನಾಟಕ ಕಂಡ ದಾಸ ಶ್ರೇಷ್ಠರು. ತಮ್ಮ ಕೀರ್ತನೆಗಳ ಮೂಲಕ ಸಮಾಜದ ಜಾಗ್ರತಿ ಮೂಡಿಸಲು ಪ್ರಯತ್ನಿಸಿದರು. ಕರ್ನಾಟಕ ಸಂಗೀತಕ್ಕೆ ಅವರ ಕೊಡುಗೆ ಅಪಾರವಾದದ್ದು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯೆ ಭವ್ಯಾ ಸಿ ಹೇಳಿದರು.

ಅವರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾದ ಕನಕದಾಸರ ಜಯಂತಿಯಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಬೋಧಕ ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಐ.ಕ್ಯೂ.ಎ.ಸಿ ಸಹ ಸಂಚಾಲಕಿ ಸವಿತಾ ನಾಯ್ಕ, ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಸುರೇಖಾ ಎಸ್ ತಡವಲ, ರೇಂಜರ್ಸ್ ಸಂಚಾಲಕ ಡಾ. ರುಬೀನಾಖಾತು, ಪತ್ರಾಂಕಿತ ವ್ಯವಸ್ಥಾಪಕ ಎನ್ ಬಿ. ಮೆಣಸುಮನೆ, ದ್ವಿತಿಯ ದರ್ಜೆ ಸಹಾಯಕ ಮಹಾದೇವಪ್ಪ ಹಯಲಕೊಪ್ಪ, ಬೋಧಕೇತರ ಸಿಬ್ಬಂದಿಗಳು, ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ಪ್ರತಿಧ್ವನಿ ಯಲ್ಲಾಪುರ: ವಿಶ್ವ ದರ್ಶನ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಕನಕದಾಸರ ಜಯಂತಿ ಪಟ್ಟಣದ ವಿಶ್ವದರ್ಶನ ಪದವಿ ಪೂರ್ವ ಕಾಲೇಜಿ ನಲ್ಲಿ ಕನಕದಾಸ ಜಯಂತಿ ಆಚರಣೆ ಅಂಗವಾಗಿ ಕನಕದಾಸ ಕೀರ್ತನೆ ಹಾಗೂ ಯಕ್ಷಗಾನದಲ್ಲಿ ಕನಕದಾಸರ ಸಾಹಿತ್ಯ ಕುರಿತು ಯಕ್ಷಗಾನ ದ ಖ್ಯಾತ ಭಾಗವತರಾದ ಅನಂತ ಹೆಗಡೆ ದಂತಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡರು.
ಕೀರ್ತನಾ ಸಾಹಿತ್ಯಕ್ಕೆ ಕನಕದಾಸರ ಕೊಡುಗೆ ಅಪಾರವಾದದ್ದು ಎಂದು ಹೇಳುತ್ತಾ ಯಕ್ಷಗಾನ ಸಾಹಿತ್ಯ ಹಾಗೂ ಕೀರ್ತನಾ ಸಾಹಿತ್ಯ ಸಾಮೀಪ್ಯ ಇದೆ..ಒಬ್ಬ ಶ್ರೇಷ್ಠ ದಾರ್ಶನಿಕ ಹಾಗೂ ಶ್ರೇಷ್ಟ ವ್ಯಕ್ತಿ ಕನಕ ದಾಸರು ಎನ್ನುವುದನ್ನು ಭಾಗವತಿಕೆ ಹಾಗೂ ಅರ್ಥಗಾರಿಕೆ ಎರಡನ್ನೂ ಮಿಶ್ರ ಮಾಡಿ ವಿದ್ಯಾರ್ಥಿಗಳ ಎದುರು ಎಳೆ ಎಳೆ ಯಾಗಿ ಪರಿಚಯಿಸಿದರು.

ಜನಮಾನಸದಲ್ಲಿ ಇರುವ ಅಂಕು_ ಡೊಂಕುಗಳನ್ನು ತಿದ್ದುವ ಕೆಲಸ ಹಾಗೂ ಅವುಗಳ ಮೇಲೆ ಬೆಳಕು ಚೆಲ್ಲುವ ಕಾರ್ಯ ದಾಸ ಸಾಹಿತ್ಯ ಮಾಡಿದೆ.
ಇಂದಿಗೂ ದಾಸ ಶ್ರೇಷ್ಠರು ನೀಡಿರುವ ಕೀರ್ತನೆಗಳು ಅತ್ಯಂತ ಮೌಲ್ಯ ಯುತವಾಗಿದ್ದು ನಾವೆಲ್ಲರೂ ಜೀವನದಲ್ಲಿ ಸೂಕ್ತವಾಗಿ ಅಳವಡಿಸಿಕೊಂಡು ಸುಂದರ ಜೀವನ ನಡೆಸೋಣ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ವ್ಯವಸ್ಥಾಪಕ ಅಜಯ ಭಾರತೀಯ ಮಾತನಾಡಿ ನಮ್ಮ ಇಂದಿನ ಮಕ್ಕಳಿಗೆ ದಾಸ ಪರಂಪರೆ ,ಇತಿಹಾಸ ,
ಸಾಹಿತ್ಯ, ಸಂಗೀತ ಹೀಗೆ ವಿವಿಧ ಆಯಾಮಗಳ ಶಿಕ್ಷಣ ನಮ್ಮ ಸಂಸ್ಥೆಯಲ್ಲಿ ಒದಗಿಸಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಾಣವಾಗಿದೆ ಇದರ ಪ್ರಯೋಜನ ಎಲ್ಲರೂ ಪಡೆದುಕೊಳ್ಳಬೇಕು ಎಂದು ಸಂದೇಶ ನೀಡಿದರು.

ವಿಶ್ವದರ್ಶನ ಶಿಕ್ಷಣ ಸಮೂಹದ ಎಲ್ಲ ವಿಭಾಗದಲ್ಲೂ ಆಚರಣೆ ಅತ್ಯಂತ ಸುಂದರವಾಗಿ ನಡೆಯಿತು.ಪ್ರತಿ ವಿಭಾಗದ ವಿಧ್ಯಾರ್ಥಿಗಳು ಕನಕ ದಾಸರ ವೇಷ ಭೂಷಣ ತೊಟ್ಟು ದಾಸ ಸಾಹಿತ್ಯದ ವಿವಿಧ ಆಯಾಮಗಳನ್ನು ವೇದಿಕೆಯಲ್ಲಿ ಪ್ರಸ್ತುತಪಡಿಸಿದರು. ಹಾಡು,ಭಜನೆ,ಕೀರ್ತನೆಗಳನ್ನು ಹಾಡಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ಶಿಕ್ಷಕ_ಶಿಕ್ಷಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ನಂತರ ಪದವಿ ಪೂರ್ವ ವಿಭಾಗದಲ್ಲಿ ಭಾಷಾ ದಿನ ಆಚರಣೆ ಆಯೋಜನೆಗೊಂಡಿತ್ತು
ಈ ಸಂದರ್ಭದಲ್ಲಿ ವಿಧ್ಯಾರ್ಥಿಗಳು ಕನ್ನಡ, ಇಂಗ್ಲಿಷ್,ಹಿಂದಿ,ಮತ್ತು ಸಂಸ್ಕೃತ ಭಾಷೆಗಳ ತಮ್ಮ ಪ್ರವಿಣ್ಯವನ್ನು ಪ್ರಸ್ತುತಪಡಿಸಿದರು.
ಉಪನ್ಯಾಸಕಿ ಕವಿತಾ ಹೆಬ್ಬಾರ ಮಾತನಾಡಿ ಭಾಷೆ ಮಾನವನ ಭಾವನೆಗಳನ್ನು ವ್ಯಕ್ತಪಡಿಸುವ ಮಾಧ್ಯಮ .
ಎಲ್ಲ ಭಾಷೆಗಳಿಗೂ ಅದರದೇ ಆದ ಸೌಂದರ್ಯ ಹಾಗೂ ಹಿರಿಮೆ ಇದೆ. ಭಾಷೆ ಸಂಸ್ಕೃತಿಯ ಪ್ರತಿಬಿಂಬ,ನಾವು ಆಡುವ ಭಾಷೆ ಸಂಸ್ಕಾರಯುತ ಆಗಿರಲಿ. ಎಲ್ಲ ಭಾಷೆಯನ್ನು ಗೌರವಿಸುವ ಶ್ರೇಷ್ಟ ಗುಣಗಳನ್ನು ಬೆಳೆಸಿಕೊಳ್ಳಿ ಎಂದು ಹೇಳಿದರು. ಪ್ರಾಚಾರ್ಯ ರಾದ
ಡಾಕ್ಟರ್ ದತ್ತಾತ್ರೇಯ ಗಾಂವ್ಕರ್ ಅವರ ಮಾರ್ಗದರ್ಶನದಲ್ಲಿ ಉಪನ್ಯಾಸಕ ಜಗನ್ನಾಥ ಬಾಸುಟ್ಕರ ಅವರ ಸಂಯೋಜನೆಯಲ್ಲಿ ಭಾಷಾ ದಿನ ಸುಂದರವಾಗಿ ಮೂಡಿಬಂದಿತು.
ವಿಧ್ಯಾರ್ಥಿಗಳು ಕಾರ್ಯಕ್ರಮದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರ ಪೊಲೀಸರ ಕಾರ್ಯ ಕ್ಷಮತೆ – ವರ್ಷದ ಹಿಂದಿನ ಡಕಾಯಿತಿ ಪ್ರಕರಣ ಆರೋಪಿಗಳು ಸ್ವತ್ತಿನ ಸಹಿತ ಅಂದರ್.!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ತಾಲೂಕಿನ ಅರಬೈಲ್ ಘಟ್ಟದಲ್ಲಿ ಕಾರು ಅಡ್ಡಗಟ್ಟಿ …

Leave a Reply

Your email address will not be published. Required fields are marked *