
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ

ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನ ಶಕ್ತಿಪೀಠ ಯಲ್ಲಾಪುರ ಗ್ರಾಮದೇವಿ ಸಾನಿಧ್ಯದಲ್ಲಿ 28 ನೇ ವರ್ಷದ ವಾರ್ಷಿಕ ವರ್ಧಂತಿ ಉತ್ಸವ ಪೂಜಾ ವಿಧಿ ವಿಧಾನಗಳೊಂದಿಗೆ ಸಾಂಗವಾಗಿ ನೆರವೇರಿತು.

ಶಕ್ತಿ ಮಾತೆಯರಾದ ಕಾಳಮ್ಮ-ದುರ್ಗಮ್ಮ ಗ್ರಾಮದೇವಿ ದೇವಾಲಯದ ವಾರ್ಷಿಕ ವರ್ಧಂತಿ ಉತ್ಸವ ಆಡಳಿತ ಮಂಡಳಿಯ ಪ್ರಮುಖರಾದ ರಾಜೇಂದ್ರಪ್ರಸಾದ ಬಿ ಭಟ್ಟ, ಮನು ಹೆಗಡೆ, ನಾಗೇಶ್ ಭಾಗ್ವತ ನೇತೃತ್ವದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.


ನಂತರ ದೇವಿಯ ಸಾನಿದ್ಯದಲ್ಲಿ ಅನ್ನ ಸಂತರ್ಪಣಾ ಕಾರ್ಯಕ್ರಮ ಜರುಗಿತು.

ನೂರಾರು ನಾಗರೀಕರು ದೇವಿಯ ದರ್ಶನ ಪಡೆದು ಪೂಜೆಯಲ್ಲಿ ಪಾಲ್ಗೊಂಡು ಅನ್ನ ಪ್ರಸಾದ ಸ್ವೀಕರಿಸಿ ಕೃತಾರ್ಥರಾದರು.
ಉತ್ತಮ ವಿದ್ಯಾಸಬ್ಯಾಸ ಉತ್ತಮ ಸಂಸ್ಕಾರಕ್ಕಾಗಿ ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ತಾಲೂಕಿನ ಪ್ರತಿ ಮನೆಯ ವಿದ್ಯಾ ಸಂಸ್ಥೆಯಾಗಿರುವ ವೈಟಿಎಸ್ಎಸ್ ಗೆ ನಿಮ್ಮ ಮಕ್ಕಳನ್ನು ಸೇರಿಸಿ




