

ಪ್ರತಿಧ್ವನಿ,ಯಲ್ಲಾಪುರ : ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಸಾಗಿಸುತ್ತಿದ್ದ ಅಂದಾಜು 3೦,೦೦೦ರೂ ಮೌಲ್ಯದ ಜಾನುವಾರುಗಳನ್ನು ಯಲ್ಲಾಪುರ ಪೊಲೀಸರು ಧಾಳಿ ಮಾಡಿ ಹಿಡಿದ ಘಟನೆ ತಾಲೂಕಿನ ಗುಳ್ಳಾಪುರ ಗ್ರಾಮದಲ್ಲಿ ಹಾದುಹೋಗಿರುವ ಕಾರವಾರ-ಬಳ್ಳಾರಿ ರಾಷ್ಟೀಯ ಹೆದ್ದಾರಿಯಲ್ಲಿ ನಡೆದಿದೆ.

ತಾಲೂಕಿನ ಕಿರವತ್ತಿ ಗಣಪತಿ ಗಲ್ಲಿ ನಿವಾಸಿ ಜಗದೀಶ ಸುಭಾಷ ದಿಂಡವಾಲ್(37), ಕಲಘಟಗಿ ತಾಲೂಕು ಬಸವೇಶ್ವರರ ನಗರದ ನಿವಾಸಿ ಬಸಪ್ಪ ಸಹದೇವಪ್ಪ ಕೋಟೆ(48), ಕಲಘಟಗಿ ಮಿಶ್ರಿಕೋಟೆಯ ನಿವಾಸಿ ಇಮಾಮ್ ಕಾಶಿಂ ಮಾಬುಸಾಬ ಗುಡಿಹಾಳ ಎಂಬ ಮೂವರೇ ಅಕ್ರಮ ಜಾನುವಾರುಗಳನ್ನು ಸಾಗಿಸುತ್ತಿದ್ದವರಾಗಿದ್ದಾರೆ.


ಜಗದೀಶ ಎಂಬುವನು ತನ್ನ ಮಹೇಂದ್ರ ಪಿಕ್ ಅಪ್ ವಾಹನ ಹಾಗೂ ಬಸಪ್ಪ ಹಾಗೂ ಇಮಾಮ್ ಕಾಶಿಂ ಇಬ್ಬರೂ ತಮ್ಮ ಸೂಪರ್ ಕ್ಯಾರಿ ವಾಹನದ ಹಿಂದಿನ ಇಕ್ಕಟ್ಟಾದ ಬಾಡಿಯಲ್ಲಿ ಅಕ್ರಮವಾಗಿ ರೂ.3೦,೦೦೦ ಮೌಲ್ಯದ ಜಾನುವಾರುಗಳನ್ನು ಯಾವುದೇ ಅನುಮತಿ ಇಲ್ಲದೆ ಹಿಂಸಾತ್ಮಕವಾಗಿ ಗೋಕರ್ಣದಿಂದ ಕಲಘಟಗಿಗೆ ಸಾಗಿಸಲು ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ಅತಿವೇಗವಾಗಿ ಚಲಾಯಿಸಿಕೊಂಡು ಬರುವಾಗ ತಾಲೂಕಿನ ಗುಳ್ಳಾಪುರ ಗ್ರಾಮದಲ್ಲಿ ಹಾದುಹೋಗಿರುವ ಕಾರವಾರ-ಬಳ್ಳಾರಿ ರಾಷ್ಟೀಯ ಹೆದ್ದಾರಿಯಲ್ಲಿ ಯಲ್ಲಾಪುರ ಪೊಲೀಸರು ದಾಳಿ ನಡೆಸಿ 3೦,೦೦೦ ಮೌಲ್ಯದ ಎರಡು ಎತ್ತುಗಳು, ಒಂದು ಹೋರಿ, 1೦,೦೦೦ ಮೌಲ್ಯದ ಮೂರು ಹೋರಿ ಕರುಗಳು, 4ಲಕ್ಷ ಮೌಲ್ಯದ ಮಹೇಂದ್ರ ಪಿಕ್ ಅಪ್ ವಾಹನ, 1ಲಕ್ಷ ಮೌಲ್ಯದ ಸೂಪರ್ ಕ್ಯಾರಿ ವಾಹನವನ್ನು ವಶಪಡಿಸಿಕೊಂಡಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ.






Prathidvani Yellapura