




ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಜಿಲ್ಲಾ ಪಂಚಾಯತ ಇಂಜಿನಿಯರಿಂಗ್ ಉಪವಿಭಾಗ ಕಚೇರಿ ಎದುರಿನಲ್ಲಿ ಕೇಸರಿ,ಬಿಳಿ,ಹಸಿರು ಬಣ್ಣದ ವೃತ್ತಾಕಾರದ ತೊಟ್ಟಿ ಇಟ್ಟು ನೀರು ತುಂಬಿಸಲಾಗಿದೆ.

ದಿನೇ ದಿನೇ ಬಿಸಿಲಿನ ಝಳ ಹೆಚ್ಚಾಗುತ್ತಿದ್ದು ಮನುಷ್ಯರಾದ ನಾವೆ ನಲುಗಿ ಹೋಗುತ್ತಿರುವಾಗ ಮೂಕ ಪ್ರಾಣಿ ಪಕ್ಷಿಗಳ ಪಾಡೇನು. ಈ ಪರಿಸ್ಥಿತಿ ಮನಗಂಡು ಜಿ.ಪಂ.ಇಂ.ಉ.ವಿ ಸಹಾಯಕ ಕಾರ್ಯಪಾಲಕ ಇಂಜನಿಯರ್ ಅಶೋಕ್ ಬಂಟ್ ತಮ್ಮ ಕಚೇರಿ ಮುಂಬಾಗದಲ್ಲಿ ಸಿಮೆಂಟ್ ತೊಟ್ಟಿಯೊಂದನ್ನು ನಿರ್ಮಿಸಿ ಪ್ರತಿನಿತ್ಯ ನೀರುತುಂಬಿಸುವ ವ್ಯವಸ್ಥೆ ಮಾಡಿದ್ದಾರೆ. ಇದರಿಂದ ಹಲವಾರು ಹಸು,ಕರು,ಎಮ್ಮೆಪಕ್ಷಿಗಳು ದಾಹತಣಿಸಿಕೊಳ್ಳುತ್ತಿವೆ.

ಅಶೋಕ್ ಬಂಟ್ ಆಧ್ಯಾತ್ಮ ಮತ್ತು ಸಮಾಜಸೇವೆಯ ತುಡಿತ ಉಳ್ಳವರಾಗಿದ್ದಾರೆ. ಇವರಿಂದ ಇತರ ಇಲಾಖೆಗಳು ಮತ್ತು ಅಧಿಕಾರಿಗಳು ಮನಸ್ಸು ಮಾಡಿ ತಮ್ಮತಮ್ಮ ಇಲಾಖೆ ಆವರಣದಲ್ಲಿ ಇಂತಹದ್ದೊಂದು ನೀರಿನ ವ್ಯವಸ್ಥೆ ಕಲ್ಪಿಸಿದರೆ ಮೂಕಪ್ರಾಣಿ ಮತ್ತು ಪಕ್ಷಿಗಳಿಗೆ ದಾಹ ನೀಗಿಸಿದ ಪುಣ್ಯ ಲಭಿಸಲಿದೆ ಎಂಬುದು ಪ್ರಾಣಿಪ್ರಿಯರ ಅನಿಸಿಕೆಯಾಗಿದೆ



Prathidvani Yellapura