




ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಕನ್ನಡಗಲ್ ಗ್ರಾಮದ ಕೃಷಿ ಜಮೀನಿಗೆ ಅಕ್ರ.ವಾಗಿ ನುಗ್ಗಿದ ಮೂವರು ಮುಗ್ದ ರೈತರೋರ್ವರಿಗೆ ಬೆದರಿಸಿ ಹಣ ಮತ್ತು ಬಂಗಾರದ ಉಂಗುರ ದೋಚಿದ ಘಟನೆಗೆ ಸಂಬಂಧಿಸಿದಂತೆ ಯಲ್ಲಾಪುರ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪಟ್ಟಣದ ನಿವಾಸಿಗಳಾದ ಶಂಶುದ್ದೀನ್ ಮಾರ್ಕರ್, ತಾರಾನಾಥ ನಾಯ್ಕ, ವಿನಾಯಕ ಭೋವಿ ವಡ್ಡರ್ ಇದುವರೆಗು ಆರೋಪಿಗಳ ಬಂಧನವಾಗಿಲ್ಲ ಇದರಿಂದ ಗ್ರಾಮದಲ್ಲಿ ರೈತಾಪಿ ವರ್ಗದ ಮಂದಿ ಭಯದ ವಾತಾವರಣದಲ್ಲೆ ದಿನದೂಡುತ್ತಿದ್ದಾರೆ. ತಕ್ಷಣ ಇಂತಹ ಸಮಾಜ ಘಾತುಕ ಶಕ್ತಿಗಳಿಗೆ ಕಡಿವಾಣ ಹಾಕಬೇಕಿದೆ ಮತ್ತು ತಾಲೂಕಿನಿಂದ ಗಡಿಪಾರು ಮಾಡಲೇಬೇಕು ಇಲ್ಲವಾದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿ ಉಗ್ರ ಪ್ರತಿಭಟನೆ ಮಾಡುವುದಾಗಿ ಮತ್ತು ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಮತದಾನದಿಂದ ದೂರ ಉಳಿದು ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಸಿ ಮನವಿಯಲ್ಲಿ ಉಲ್ಲೇಖಿಸಿ ಶಾಸಕರು,ಜಿಲ್ಲಾಧಿಕಾರಿ, ತಹಶಿಲ್ದಾರ,ಪಿ.ಐ ಯಲ್ಲಾಪುರ,ಅಧಕ್ಷರು/ಪಿಡಿಒ ಕಣ್ಣಿಗೇರಿ ಪಂಚಾಯತ ಇವರಿಗೆ ಮನವಿ ಸಲ್ಲಿಸುವ ಪ್ರಕ್ರಿಯೆ ನಡೆಯಿತು.


ಮನವಿ ಸ್ವೀಕರಿಸಿದ ಶಾಸಕ ಶಿವರಾಮ್ ಹೆಬ್ಬಾರ್ ಮಾತನಾಡಿ ಸಮಾಜ ಘಾತುಕ ಶಕ್ತಿಗಳ ಹುಟ್ಟಡಗಿಸಲೆಬೇಕಿದೆ. ಈ ವಿಚಾರದಲ್ಲಿ ಯಾವುದೇ ಪಕ್ಷ ಪಂಗಡದ ಮಾತಿಲ್ಲ ಮತ್ತು ನನ್ನ ಹೆಸರೇಳಿ ಇಂತಹ ಕೃತ್ಯದಲ್ಲಿ ಭಾಗಿಯಾಗಿದ್ದರೆ ಶಿಕ್ಷೆಯ ಪ್ರಮಾಣ ಹೆಚ್ಚಾಗಿ ನೀಡಲಿ ಎಂದರು. ಇತ್ತೀಚೆಗೆ ಯಲ್ಲಾಪುರದಲ್ಲಿ ಇಂತಹ ಪುಂಡರು ಆರೇಳು ಮಂದಿ ಹುಟ್ಟಿಕೊಂಡಿದ್ದು ಕಾನೂನಿನ ಅಡಿಯಲ್ಲಿ ಹೆಡೆಮುರಿ ಕಟ್ಟಬೇಕಿದೆ. ಇಂತಹ ಸಮಸ್ಯೆಗಳನ್ನು ಜನರು ಪಕ್ಷಾತೀತವಾಗಿ ಎದುರಿಸಬೇಕಿದೆ ಯಾವುದೇ ರೈತರು ದೃತಿಗೆಡುವ ಅಗತ್ಯವಿಲ್ಲ ಸಂಭಂದಿಸಿದ ಅಧಿಕಾರಿಗಳಿಗೆ ಇಲಾಖೆಗೆ ಹೇಳುತ್ತೇನೆ ಎಂದು ಧೈರ್ಯದ ಮಾತಗಳನ್ನಾಡಿದರು.

ಸೇರಿದ್ದ ನೂರಾರು ರೈತರು , ಕೂಲಿಕಾರ್ಮಿಕರು ದಿಡೀರ್ ಮೆರವಣಿಗೆ ಮೂಲಕ ತೆರಳಿ ತಹಶಿಲ್ದಾರ, ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದರು.
Prathidvani Yellapura