


ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ದತಿಧ್ವನಿ ಯಲ್ಲಾಪುರ : ಪ್ರತಿ ಚುನಾವಣೆಯಲ್ಲಿ ನಮ್ಮ ಅಲ್ಪ ಸಂಖ್ಯಾತ ಮುಸ್ಲಿಂ ಸಮಾಜ ಕಾಂಗ್ರೆಸ್ ಪಕ್ಷದ ದೊಡ್ಡ ಶಕ್ತಿಯಾಗಿ ಬೆನ್ನಿಗೆ ನಿಂತಿದೆ. ಪಕ್ಷದ ಗೆಲುವಿನಲ್ಲಿ ಮುಸ್ಲಿಂ ಸಮುದಾಯದ ಪಾತ್ರ ಬಹಳ ದೊಡ್ಡದಿದೆ ಈ ಹಿನ್ನೆಲೆಯಲ್ಲಿ ಪಕ್ಷವು ಸಹ ಸಮುದಾಯದ ಋಣ ತೀರಿಸುವ ನಿಟ್ಟಿನಲ್ಲಿ ಉನ್ನತ ಸ್ಥಾನಮಾನ ನೀಡುವಲ್ಲಿ ಮುಂದಾಗಬೇಕಿದೆ. ಈ ದಿಸೆಯಲ್ಲಿ ನಮ್ಮ ಸಮುದಾಯದ ಕ್ರಿಯಾಶೀಲ ಮುಖಂಡರಾದ ಅಬ್ದುಲ್ ಮಜೀದ್ ಶೇಖ್ ಅವರಿಗೆ ನಿಗಮ ಮಂಡಳಿ ಸ್ಥಾನಮಾನ ನೀಡುವಂತೆ ಅಲ್ಪ ಸಂಖ್ಯಾತ ವಿಭಾಗದ ಯಲ್ಲಾಪುರ ತಾಲೂಕು ಪ್ರಮುಖ ಅಬ್ದುಲ್ ರೆಹಮಾನ್ ಸೈಯದ್ ( ಫೈರೋಝ್) ಪಕ್ಷದ ವರಿಷ್ಟರಿಗೆ ಮನವಿ ಸಲ್ಲಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಸ್ಲೀಮರಿಗೆ ಕಾಂಗ್ರೆಸ್ ಪಕ್ಷದಲ್ಲಿ ಇದುವರೆಗು ಯಾವುದೇ ಮಹತ್ವದ ಸ್ಥಾನಮಾನ ನೀಡಿರುವುದಿಲ್ಲ. ನಿಗಮಮಂಡಳಿ ಸೇರಿದಂತೆ ಯಾವುದೇ ಸರಕಾರದ ಸಮಿತಿಯಲ್ಲು ಸ್ಥಾನಮಾನ ನೀಡಿರುವುದಿಲ್ಲ.
ಕೆಪಿಸಿಸಿಯಿಂದ ಜಿಲ್ಲೆಯ ಮುಸ್ಲಿಮ್ ಸಮಾಜದವರಿಗೆ ಯಾವುದೇ ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಮುಂತಾದ ಉನ್ನತ ಹುದ್ದೆ ನೀಡಿರುವುದಿಲ್ಲ. ಇನ್ನಾದರು ಮನಸ್ಸು ಮಾಡಬೇಕಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲೀಮ ಸಮಾಜ ಕಾಂಗ್ರೆಸ್ ಪಕ್ಷವನ್ನು ನೂರಕ್ಕೆ ನೂರು ಬೆಂಬಲಿಸಿದೆ. ಜಿಲ್ಲೆಯಲ್ಲಿ 1.80 ಲಕ್ಷ ಮುಸ್ಲೀಮ ಮತದಾರರಿದ್ದಾರೆ.
ಕಾಂಗ್ರೆಸ್ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಅಲ್ಪಸಂಖ್ಯಾತರ ವಿಭಾಗದ ಪದಾಧಿಕಾರಿಗಳು ಮಹತ್ವದ ಪಾತ್ರ ನಿರ್ವಹಿಸಿ, ಅತೀ ಹೆಚ್ಚಿನ ಸದಸ್ಯರನ್ನು ನೋಂದಣಿ ಮಾಡಿರುತ್ತಾರೆ.
ಕೋವಿಡ್ ಸಂದರ್ಭದಲ್ಲಿ ಈ ಜಿಲ್ಲೆಯ ಮುಖಂಡರ ಜೊತೆಗೆ ಆರ್ ವಿ ದೇಶಪಾಂಡೆ, ಮಂಕಾಳ ವೈದ್ಯ, ಆಗಿನ ಜಿಲ್ಲಾ ಅಧ್ಯಕ್ಷರಾದ ಭೀಮಣ್ಣ ನಾಯ್ಕ, ಶಾಸಕ ಸತೀಶ ಸೈಲ್ ಅವರ ಆದೇಶದಂತೆ ಇಡೀ ಜಿಲ್ಲೆಯಲ್ಲಿ ಹಲವಾರು ರೀತಿ ಸಮಾಜಮುಖಿ ಕೆಲಸ ಮಾಡಿರುತ್ತೇವೆ. ಅದೇ ರೀತಿಯಲ್ಲಿ ಬಿ ಕೆ ಹರಿಪ್ರಸಾದ ಅವರು ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡು ಆರೋಗ್ಯ ಹಸ್ತ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಅವರ ಜೊತೆಯಲ್ಲಿ ನಮ್ಮ ಜಿಲ್ಲೆಯ ಆಗಿನ ಅಲ್ಪಸಂಖ್ಯಾತರ ಜಿಲ್ಲಾಧ್ಯಕ್ಷರಾಗಿದ್ದ ಅಬ್ದುಲ್ ಮಜೀದಶೇಕ್ ಅವರು ಇಡೀ ಜಿಲ್ಲೆಯಲ್ಲಿ ಪ್ರವಾಸ ಮಾಡಿದ್ದು ಇರುತ್ತದೆ.
ಹಾಗೆ ಈ ಜಿಲ್ಲೆಯಲ್ಲಿ ಜಿಪಂ, ಎಂ ಎಲ್ ಎ, ಎಂಎಲ್ ಸಿ ಹುದ್ದೆಯನ್ನು ಮುಸ್ಲೀಂ ಸಮಾಜಕ್ಕೆ ನೀಡಿದ್ದ ಉದಾಹರಣೆಗಳಿಲ್ಲ .
ಇನ್ನಾದರೂ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಕ್ರಿಯಾಶೀಲ ಮುಸ್ಲಿಂ ಮುಖಂಡರಾದ ಅಬ್ದುಲ್ ಮಜೀದ್ ಶೇಖ ಅವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ನೀಡಿ ಮುಸ್ಲೀಮ ಸಮಾಜಕ್ಕೆ ಮನ್ನಣೆ ನೀಡಬೇಕೆಂದು ಜಿಲ್ಲೆಯ ಶಾಸಕರು, ಸಚಿವರು ಮುಖಂಡರು ಮತ್ತು ರಾಜ್ಯ ಅಧ್ಯಕ್ಷರಿಗೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಜೀ, ಮುಸ್ಲೀಂ ಸಮಾಜದ ಮುಖಂಡರಾದ ಸಲೀಂ ಅಹ್ಮದ್ ಜೀ ಅವರಿಗೆ ಮಾಧ್ಯಮದ ಮೂಲಕ ಒತ್ತಾಯಿಸುತ್ತೇವೆ. ಎಂದು ಪಕ್ಷದ ಅಲ್ಪಸಂಖ್ಯಾತ ವಿಭಾಗದ ತಾಲೂಕು ಪ್ರಮುಖ ಅಬ್ದುಲ್ ರೆಹಮಾನ್ ಸೈಯದ್ ( ಫೈರೋಝ್ ) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.



Prathidvani Yellapura