Breaking News

ಬದುಕಿದ್ದಾಗ ನನ್ನ ತೆರಿಗೆ ಹಣ ಸದ್ಬಳಕೆ ಶೂನ್ಯ – ಸತ್ತಾಗಲು ಶೂನ್ಯವೇ…??

ಯಲ್ಲಾಪುರ ಗ್ರಾಮದೇವಿ‌ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಸಾರಥ್ಯದಲ್ಲಿ ಪ್ರತಿಧ್ವನಿ ಯಲ್ಲಾಪುರ


ಯಲ್ಲಾಪುರ : ಬದುಕಿದ್ದಾಗ ವ್ಯವಸ್ಥೆಯ ಅವ್ಯವಸ್ಥೆ ಕಂಡು ನೊಂದ ಜೀವ ಸತ್ತಾಗಲಾದರು ನೆಮ್ಮದಿಯಾಗಿ ದಹನ ಕಾರ್ಯ ನಡೆಯಲಿ ಎಂದುಕೊಂಡರೆ ಅದು ಸಾದ್ಯವಾಗಲಿಲ್ಲ ಕಾರಣ ಪಟ್ಟಣದಲ್ಲಿನ ಹಿಂದುಗಳ ಏಕೈಕ ಚಿತಾಗಾರದಲ್ಲಿ ಮೃತದೇಹ ಇಟ್ಟು ಸುಡುವ ಕಾರ್ಯ ನಡೆಸುವ ಸ್ಟಾಂಡ್ ತುಂಡಾಗಿ ಬಿದ್ದಿದ್ದು ಎಂತಹ ದುರ್ಗತಿ ಬಂತು ಸ್ಥಳೀಯ ಆಡಳಿತಕ್ಕೆ ಎಂದು ಹಿಡಿ ಶಾಪ ಹಾಕುತ್ತಿದ್ದಾರೆ ಸಾರ್ವಜನಿಕರು. 

       
    ಪಟ್ಟಣದ ಹೊರವಲಯದಲ್ಲಿನ ಹುಬ್ಬಳ್ಳಿ ಕಡೆಗೆ ಸಾಗುವ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೆ ಇರುವ ಹಿಂದುಗಳ ಚಿತಾಗಾರ ಅವ್ಯವಸ್ಥೆಯ ಆಗರವಾಗಿದ್ದನ್ನು ಈ ಹಿಂದೆ ಹಲವು ಪತ್ರಿಕೆಗಳು ಸುದ್ದಿ ಮಾಡಿದ್ದವು ಇದರ ಪರಿಣಾಮ ಪಟ್ಟಣ ಪಂಚಾಯತ ಸಾಮಾನ್ಯ ಸಭೆಯಲ್ಲಿ ನಿರ್ಧರಿತವಾದ ಹಿನ್ನೆಲೆಯಲ್ಲಿ ಚಿತಾಗಾರದೊಳಗಿನ ಅವ್ಯವಸ್ಥೆ ಸರಿಪಡಿಸಿ ವ್ಯವಸ್ಥಿತವಾಗಿ ದಹನ ಕಾರ್ಯಕ್ಕೆ ಅನುವಾಗುವಂತೆ ಕೆಲವು ಕೆಲಸಗಳಿಗೆ ಟೆಂಡರ್ ಕರೆಯಲಾಗಿತ್ತು. ದುರಾದೃಷ್ಟ ಎಂಬಂತೆ ಮತ್ತದೆ ರಾಗ ಹೊರಟಿದೆ ಚಿತಾಗಾರದ ಒಳಗೆ ಕೆಲವು ಕೆಲಸಗಳು ನಡೆಯುತ್ತಿದ್ದು ಬಹುಮುಖ್ಯವಾಗಿ  ಆಗಬೇಕಾದ ಕಾರ್ಯ ಹೆಣ ಸುಡುವ ಸ್ಟ್ಯಾಂಡ್ ದುರಸ್ತಿ ಅಥವ ಹೊಸ ಸ್ಟಾಂಡ್ ಅಳವಡಿಕೆ ಆದರೆ ಆ ಕೆಲಸವಾಗದೆ ಕಳೆದೆರಡು ದಿನಗಳ ಹಿಂದೆ ಮೃತದೇಹವನ್ನು ಸುಡುವ ವೇಳೆ ಸ್ಟಾಂಡ್ ಕಳಚಿ ಬಿದ್ದಿದೆ.


     ಹಿಂದು ಧರ್ಮಿಯರಲ್ಲಿ ಇಂತಹ ವಿಚಾರಗಳು ಭಾವನಾತ್ಮಕವಾಗಿದ್ದು ಕೆಲವೊಮ್ಮೆ ಇದನ್ನೆ ಅಪಶಕುನ ಎಂದುಕೊಂಡು ನೊಂದುಕೊಳ್ಳುತ್ತಾರೆ.


    ಸ್ಥಳೀಯ ಆಡಳಿತ ಮತ್ತದೇ ರಾಗಗಳನ್ನು ಹಾಡದೆ ಸಮಸ್ಯೆ ಬಗೆಹರಿಸಬೇಕಿದೆ. ಪಟ್ಟಣದಲ್ಲಿ ವಾಸಮಾಡುವ  ಹಿಂದುಗಳ ಏಕೈಕ ಚಿತಾಗಾರ ಇದಾಗಿದ್ದು ಅತ್ಯಂತ ಜರೂರು ಕೆಲಸವೆಂದು ಭಾವಿಸಿ ನೂತನ ಸ್ಟ್ಯಾಂಡ್ ಅಳವಡಿಸಬೇಕಿದೆ ಎಂಬುದು ಹಿಂದುಗಳ ಕಳಕಳಿಯ ಆಗ್ರಹವಾಗಿದೆ.

ಕಳೆದ ಕೆಲವು ತಿಂಗಳ ಹಿಂದೆ ಹಿಂದು ರುಧ್ರಭೂಮಿ ಚಿತಗಾರದ ಅವ್ಯವಸ್ಥೆ ಸರಿಪಡಿಸುವಂತೆ ಸಂಘಟನೆ ವತಿಯಿಂದ ಮನವಿ ಸಲ್ಲಿಸಲಾಗಿತ್ತು. ಇದನ್ನು ಗಮನಿಸಿದ ಜಿಲ್ಲಾಧಿಕಾರಿಗಳು ರುಧ್ರಭೂಮಿಯ ಕೆಲಸಗಳು ಆಗಿವೆ ಎಂದು ಪ್ರತಿಕ್ರಿಯಿಸಿ ಪತ್ರ ಕಳಿಸಿದ್ದಾರೆ ಆದರೆ ಯಾವುದು ಸಮರ್ಪಕ ಕಾರ್ಯವಾಗಿಲ್ಲ. ಮೊನ್ನೆದಿನ ಹೆಣ ಸುಡುವ ವೇಳೆ ಸ್ಟಾಂಡ್ ಕಳಚಿ ಬಿದ್ದಿದೆ ಇದು ಅಕ್ಷಮ್ಯವಾಗಿದೆ ಈ ಕೂಡಲೆ ಸರಿಪಡಿಸುಂತೆ ಸ್ಥಳೀಯ ಆಡಳಿತಕ್ಕೆ ಆಗ್ರಹಿಸುತ್ತೇನೆ.
ಜಗನ್ನಾಥ್ ರೇವಣ್ಕರ್
ಅಂಬೇಡ್ಕರ್ ಸೇವಾಸಮಿತಿ ಅಧ್ಯಕ್ಷ


    ಚಿತಾಗಾರವಿರುವ ಹಿಂದು ರುದ್ರಭೂಮಿ ಕುರಿತು ಪಟ್ಟಣ ಪಂಚಾಯತ ಸಾಮಾನ್ಯ ಸಭೆಯಲ್ಲಿ ಪದೇಪದೇ ವಿಷಯ ಪ್ರಸ್ತಾಪಿಸಿ ಕೊನೆಗು ದುರಸ್ತಿ ಕಾರ್ಯಕ್ಕೆ ಟೆಂಡರ್ ಕರೆದು ನೀಡಲಾಗಿತ್ತು ಆದರೆ ಅಲ್ಲಿನ ಕೆಲಸಕಾರ್ಯಗಳ ಪ್ರಗತಿ ಕೇಳಿದರೆ ಮುಖ್ಯಾಧಿಕಾರಿಗಳಾಗಲಿ ಅಥವ ಅಭಿಯಂತರರಾಗಲಿ ಸಮರ್ಪಕ ಉತ್ತರ ನೀಡುತ್ತಿಲ್ಲ ಸಾರ್ವಜನಿಕರು ಸದಾ ನನಗೆ ಕರೆ ಮಾಡಿ ಸಮಸ್ಯೆ ಹೇಳುತ್ತಿದ್ದಾರೆ. ಈ ಕುರಿತು ಮತ್ತೊಮ್ಮೆ ಗಂಭೀರವಾಗಿ ಅಧಿಕಾರಿಗಳಿಗೆ ಮಾತನಾಡುತ್ತೇನೆ.
ಸತೀಶ್ ಶಿವಾನಂದ ನಾಯ್ಕ್
ಮಂಜುನಾಥ ನಗರ ವಾಡ್೯ ಸದಸ್ಯ

ಪಟ್ಟಣ ಪಂಚಾಯತ ವತಿಯಿಂದ ಈ ಕೆಲಸಕ್ಕೆ ಟೆಂಡರ್ ಕರೆದು ಕೆಲಸ ನೀಡಿದ್ದು ಗುತ್ತಿಗೆದಾರ ವಿಳಂಬ ಮಾಡುತ್ತಿದ್ದಾನೆ ಈ ಕುರಿತು ಆತನಿಗೆ ನೋಟಿಸ್ ನೀಡಲಾಗಿದೆ. ಮೇಲಾಧಿಕಾರಿಗಳಿಗೆ ಮತ್ತೊಮ್ಮೆ ತಿಳಿಸಿ ಕ್ರಮ ಕೈಗೊಂಡು ಆಗಬೇಕಾದ ಕೆಲಸವನ್ನು ಆದಷ್ಟು ಶೀಘ್ರದಲ್ಲೇ ಸಂಪೂರ್ಣ ಗೊಳಿಸುತ್ತೇವೆ.
ಹೇಮ ಚಂದ್ರ ನಾಯ್ಕ್
ಪಟ್ಟಣ ಪಂಚಾಯತ ಅಭಿಯಂತರ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರ ಪೊಲೀಸರ ಕಾರ್ಯ ಕ್ಷಮತೆ – ವರ್ಷದ ಹಿಂದಿನ ಡಕಾಯಿತಿ ಪ್ರಕರಣ ಆರೋಪಿಗಳು ಸ್ವತ್ತಿನ ಸಹಿತ ಅಂದರ್.!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ತಾಲೂಕಿನ ಅರಬೈಲ್ ಘಟ್ಟದಲ್ಲಿ ಕಾರು ಅಡ್ಡಗಟ್ಟಿ …

Leave a Reply

Your email address will not be published. Required fields are marked *