
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ – ಪಟ್ಟಣದ ಶಕ್ತಿ ದೇವತೆ ಕಾಳಮ್ಮ ದೇವಿ ಸಾನಿದ್ಯದಲ್ಲಿ ಕಾರ್ತಿಕ ದೀಪೋತ್ಸವ ಅತ್ಯಂತ ಶ್ರದ್ದಾ ಭಕ್ತಿಯಿಂದ ಭಕ್ತಾದಿಗಳ ಪಾಲ್ಗೊಳ್ಳುವಿಕೆಯಿಂದ ಸಂಭ್ರಮ ಸಡಗರದಿಂದ ಜರುಗಿತು.


ದೇವಿಯ ಸಾನಿದ್ಯದಲ್ಲಿ ನೂರಾರು ಹಣತೆಗಳನ್ನು ಹಚ್ಚುವ ಮೂಲಕ ದೇವಾಲಯಕ್ಕೆ ಕಳೆ ಬಂದಂತಾಗಿತ್ತು. ಬಣ್ಣಬಣ್ಣದ ಚಿತ್ತಾರ ತುಂಬಿದ ಸುಂದರವಾದ ರಂಗೋಲಿಗಳು ದೇವಾಲಯದ ಆವರಣಕ್ಕೆ ಕಳೆ ತಂದಂತಾಗಿತ್ತು. ವಿಶೇಷವಾಗಿ ಕಾರ್ತಿಕೋತ್ಸವದ ಪ್ರಯುಕ್ತ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಗಾಗಿ ಬಿಡಿಸಿದ ರಂಗೋಲಿಗಳು ನೋಡುಗರ ಕಣ್ಮನ ಸೆಳೆಯುತ್ತಿತ್ತು.

ಭಕ್ತಿ ಭಾವದಲ್ಲಿ ಜಗನ್ಮಾತೆ ಕಾಳಮ್ಮದೇವಿ ದರ್ಶನ ಪಡೆದ ಭಕ್ತರು ತಮ್ಮ ಇಷ್ಟಾರ್ಥ ನೆರವೇರಿಕೆಗೆ ಕೋರಿ ದೀಪ ಬೆಳಗಿದರು. ದೇವಾಲಯದ ಆವರಣ ದೀಪಗಳಿಂದ ಕಂಗೊಳಿಸುತ್ತಾ ಇನ್ನಷ್ಟು ಹೆಚ್ಚು ಆದ್ಯಾತ್ಮ ಸಂತೃಪ್ತಿಗೆ ಕಾರಣವಾಯಿತು ನೂರಾರು ಸಾರ್ವಜನಿಕರು ಕಾರ್ತಿಕೋತ್ಸವದಲ್ಲಿ ಪಾಲ್ಗೊಂಡು ತಾಯಿ ಪ್ರಸಾದ ಸ್ವೀಕರಿಸಿ ಧನ್ಯರಾದರು.
Prathidvani Yellapura