



ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ – ಮಳೆಗಾಲದ ಸಂದರ್ಭದಲ್ಲಿ ಎಲ್ಲೆಡೆ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರಲ್ಲಿ ಸ್ವಚ್ಚತೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ಶುಕ್ರವಾರ ಡೆಂಗ್ಯೂ ಲಾರ್ವ ನಾಶ ಪಡಿಸುವ ದಿನವಾಗಿ ಪರಿಗಣಿಸಿದ್ದು ಯಲ್ಲಾಪುರ ತಾಲೂಕು ದಂಡಾಧಿಕಾರಿ ಅಶೋಕ್ ಭಟ್ ಚಾಲನೆ ನೀಡಿದರು.

ಮನೆಗಳ ಸುತ್ತಮುತ್ತಲಿನ ಪರಿಸರ ಸ್ವಚ್ಚತೆ ಕಾಪಾಡುವುದರ ಜೊತೆಯಲ್ಲಿ ಎಲ್ಲಿಯು ನೀರು ನಿಲ್ಲದಂತೆ ಸೊಳ್ಳೆಗಳ ವಾಸ ಸ್ಥಾನ ನಿರ್ಮಾಣವಾಗದಂತೆ ಕಟ್ಟೆಚ್ಚರಿಕೆ ವಹಿಸಲು ಮನೆಮನೆಗೆ ತೆರಳಿ ತಿಳಿಸಿಕೊಡಲಾಯಿತು.

ಡೆಂಗ್ಯೂ ಜ್ವರದಲ್ಲಿ ಬಳಲುತ್ತಿರುವ ರೋಗಿಗಳ ಮನೆಗೆ ತಾಲೂಕು ದಂಡಾಧಿಕಾರಿ ಅಶೋಕ್ ಭಟ್ ಭೇಟಿ ನೀಡಿ ಆರೋಗ್ಯ ವಿಚಾರಿಸಿ ದೈರ್ಯ ತುಂಬಿದರು.

ಪಟ್ಟಣದ ನೂತನ ನಗರದ ಮನೆಗಳಿಗೆ ತೆರಳಿ ಜನರಲ್ಲಿ ನೈರ್ಮಲ್ಯದ ಕುರಿತು ಜಾಗೃತಿ ಮೂಡಿಸಿ ಕೊಳಕು ನೀರು ಹೊರ ಚೆಲ್ಲಿ ತಿಳಿ ಹೇಳಲಾಯಿತು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸುನಿಲ್ ಸುಭಾಷ್ ಗಾವಡೆ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಟಿ.ಭಟ್, ಹಿರಿಯ ಆರೋಗ್ಯ ನಿರೀಕ್ಷಕ ಮಹೇಶ್ ತಾಳಿಕೋಟೆ, ಯು.ಜೋಸೆಫ್, ವಿರುಪಾಕ್ಷ ಶಿರೂರ, ನಾಗರಾಜ ಕಳಸದ, ಪ್ರವೀಣ್ ಇನಾಮದಾರ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಸಮುದಾಯ ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದರು.
