





ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ರವೀಂದ್ರನಗರದಲ್ಲಿ ಪ್ರಾರಂಭಿಸಿ ವರ್ಷ ಕಳೆದ ” ಸಂಸ್ಕೃತಿ ಮಹಿಳಾ ಸೌಹಾರ್ದ ಸಹಕಾರಿ ಸಂಘದ “ ಪ್ರಥಮ ವಾರ್ಷಿಕೋತ್ಸವ ಸಂಭ್ರಮ ಅರ್ಥಪೂರ್ಣವಾಗಿ ನೆರವೇರಿತು.

ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಸಾಮಾಜಿಕ ಕಾರ್ಯಕರ್ತ ವಿಜಯ್ ಮಿರಾಶಿ ದೀಪ ಬೆಳಗಿ ಉದ್ಘಾಟಿಸಿ ಶುಭ ಕೋರಿದರು.

ಕಾರ್ಯಕ್ರಮದಲ್ಲಿ ಬಡಕುಟುಂಬದ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕತಗಳನ್ನು ವಿತರಿಸಲಾಯಿತು. ಇಬ್ಬರು ಮಹಿಳೆಯರು ಹಾಗೂ ಪತ್ರಕರ್ತ ಕೆ.ಎಸ್ ಭಟ್ಟ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಎ.ಸಿ.ಎಫ್ ಹಿಮವತಿ ಭಟ್ಟ, ಡಾ. ಸೌಮ್ಯಾ ಕೆ.ವಿ ಹಾಗೂ ಪತ್ರಕರ್ತ ಕೆ.ಎಸ್ ಭಟ್ಟ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸವಿತಾ ನಾಯ್ಕ ವಹಿಸಿದ್ದರು.

ಸಂಘದ ನಿರ್ದೇಶಕರಾದ ಗೀತಾ ಪಾವಸ್ಕರ, ಪುಷ್ಪ , ಲತಾ ತಾರಿ, ತಮನ್ನ ಸೈಯದ್, ಅಮೀನಾಬಿ ಹಾಗೂ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷೆ ಸವಿತಾ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಜ್ಯೋತಿ ಪಾಟಣಕರ ಸ್ವಾಗತಿಸಿದರು. ರೇಷ್ಮಾ ದೇವಿಕೆರೆ ವಂದಿಸಿದರು. ಮಂಗಲಾ ಅಂಕೋಲೇಕರ ಕಾರ್ಯಕ್ರಮ ನಿರೂಪಿಸಿದರು.