




ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ ,ಯಲ್ಲಾಪುರ – ಸಂಘಗಳನ್ನು ಸ್ಥಾಪಿಸುವುದು ಕಷ್ಟವಲ್ಲ ಠೇವಣಿ ಸಂಗ್ರಹ ಕೂಡ ಕಷ್ಟವಾಗದು ಆದರೆ ಒಳ್ಳೆಯ ಸಾಲಗಾರರನ್ನು ಹುಡುಕುವುದೆ ಕಷ್ಟವಾಗಿದೆ. ಸಂಘದ ಸ್ಥಾಪನೆ ನಂತರ ಬದ್ದತೆಯಿಂದ ನಡೆಸಿಕೊಂಡು ಹೋಗುವುದು ಸಹ ಒಂದು ಅಗ್ನಿಪರೀಕ್ಷೆಯಂತೆ. ನಿಮ್ಮ ಸಾರ್ಥಕ ಪ್ರಯತ್ನ ಯಶಸ್ವಿಯಾಗಲಿ. ಹಾಗು ನನ್ನ ಸಂಪೂರ್ಣ ಬೆಂಬಲವು ನಿಮಗಿದ್ದು ಜಿಲ್ಲಾ ಮದ್ಯವರ್ತಿ ಬ್ಯಾಂಕ್ ನ ಸಹಕಾರವು ನಿಮಗಿರಲಿದೆ ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.

ಅವರು ಪಟ್ಟಣದ ಮುಂಡಗೋಡು ರಸ್ತೆ ರವೀಂದ್ರ ನಗರದಲ್ಲಿ ನೂತನವಾಗಿ ” ಸಂಸ್ಕೃತಿ ಮಹಿಳಾ ಸೌಹಾರ್ದ ಸಹಕಾರಿ ಸಂಘ ” ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಪಂಚಾಯತ ಮಾಜಿ ಅಧ್ಯಕ್ಷೆ ಭವ್ಯಾ ಶೆಟ್ಟಿ ಮಾತನಾಡಿ ಹಣವೆಂದರೆ ಲಕ್ಷ್ಮೀ ಪ್ರತಿರೂಪವೆಂದೇ ಭಾವಿಸುತ್ತೇವೆ. ಹೆಣ್ಣಿಗೆ ಅಷ್ಟೊಂದು ಶ್ರೇಷ್ಟತೆ ಇದೆ. ತೊಟ್ಟಿಲು ತೂಗುವ ಕೈಗಳು ದೇಶ ಕಟ್ಟಬಲ್ಲವು ಎಂಬುದಕ್ಕೆ ಮಾಜಿ ಪ್ರದಾನಿ ದಿವಂಗತ ಇಂದಿರಾಗಾಂಧಿ ಸಾಕ್ಷಿಯಾಗಿದ್ದಾರೆ. ಸಹಕಾರಿ ಸಂಸ್ಥೆಯು ಸಹ ಮಹಿಳೆಯರಿಂದಲೆ ಸ್ಥಾಪಿಸಲ್ಪಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಆರ್ಥಿಕ ವಹಿವಾಟು ಉತ್ತಮವಾಗಿರಲು ಉತ್ತಮ ಆಡಳಿತ ವ್ಯವಸ್ಥೆ ನಿಮ್ಮದಾಗಬೇಕಿದೆ ನೂತನವಾದ ದೊಡ್ಡ ಪ್ರಯತ್ನಕ್ಕೆ ನನ್ನ ಅಭಿನಂದನೆಗಳು ಎಂದರು.

ಸಮಾಜದಲ್ಲಿ ಹೆಣ್ಣು ಎಲ್ಲ ರಂಗದಲ್ಲಿ ತನ್ನ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದಗದಾಳೆ. ಅವಳ ನಂಬಿಕೆ ಬದ್ದತೆ ಶ್ರದ್ದೆಯೆ ಆಕೆಯ ಘನತೆ ಗೌರವವನ್ನು ಹೆಚ್ಚಿಸಿದೆ ನೂತನವಾಗಿ ಪ್ರಾರಂಭವಾದ ಆರ್ಥಿಕ ಸಂಸ್ಥೆ ಯಶಸ್ವಿಯಾಗಲಿ ಎಂದು ಪಟ್ಟಣ ಪಂಚಾಯತ ಮಾಜಿ ಅಧ್ಯಕ್ಷೆ ಸುನಂದದಾಸ್ ಹೇಳಿದರು.

ಹೆಣ್ಣು ಸಮಾಜದ ಕಣ್ಣು ಹಿಂದೆ ಆಕೆಗೆ ಯಾವ ರಂಗದಲ್ಲಿಯು ಹೆಚ್ಚಿನ ಪ್ರಾಶಸ್ತ್ಯ ಸಿಗುತ್ತಿರಲಿಲ್ಲ ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲ ಕ್ಷೇತ್ರದಲ್ಲಿಯು ತನ್ನ ಸಾಮರ್ಥ್ಯ ದೃಡೀಕರಿಸುತ್ತ ಸಾಗುತ್ತಿದ್ದಾಳೆ ಶುಭಾರಂಭವಾದ ಹಣಕಾಸು ಸಂಸ್ಥೆ ಯಶಸ್ವಿಯಾಗಲಿ ಎಂದು ಪಟ್ಟಣ ಪಂಚಾಯತ ಮಾಜಿ ಉಪಾಧ್ಯಕ್ಷೆ ಶಾಮಿಲಿ ಪಾಟಣ್ಕರ್ ಹೇಳಿದರು.
ವೇದಿಕೆಯಲ್ಲಿ ಸಾಮಾಜಿಕ ಕಾರ್ಯಕರ್ತ ವಿಜಯ್ ಮಿರಾಶಿ, ವಿಕಾಸ ಅರ್ಬನ್ ಬ್ಯಾಂಕ್ ಅಧ್ಯಕ್ಷ ಮುರಳಿ ಹೆಗಡೆ , ಸಂಸ್ಥೆಯ ಲೆಕ್ಕಪರಿಶೋಧಕ ಆರ್.ಎನ್.ಹೆಗಡೆ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಕೋರಿದರು.

ಸಂಸ್ಕೃತಿ ಮಹಿಳಾ ಸೌಹಾರ್ದ ಸಹಕಾರಿ ಸಂಘ ನಿಯಮಿತ. ಶುಭಾರಂಭದ ದ್ಯೋತಕವಾಗಿ ಸಂಘದ ವತಿಯಿಂದ ಶಾಸಕ ಶಿವರಾಮ ಹೆಬ್ಬಾರ್ ಸೇರಿದಂತೆ ವೇದಿಕೆಯ ಗಣ್ಯರಿಗೆ ಶಾಲು ಹೊದಿಸಿ ಗೌರವಿಸಿ ಸನ್ಮಾನಿಸಿದರು.

ವಿಕಾಸ ಬ್ಯಾಂಕ್ ಅಧ್ಯಕ್ಷ ಮುರಳಿ ಹೆಗಡೆ, ಸಾಮಾಜಿಕ ಕಾರ್ಯಕರ್ತ ವಿಜಯ ಮಿರಾಶಿ, ಆಂತರಿಕ ಲೆಕ್ಕ ಪರಿಶೋಧಕ ಆರ್.ಎನ್.ಹೆಗಡೆ ವೇದಿಕೆಯಲ್ಲಿದ್ದರು.
ಸಂಸ್ಥಾಪಕ ಅಧ್ಯಕ್ಷೆ ಸವಿತಾ ನಾಯ್ಕ ಸ್ವಾಗತಿಸಿದರು. ರಾಜೀವಿ ನಾಯ್ಕ ಪ್ರಾರ್ಥಿಸಿ, ಕಾರ್ಯಕ್ರಮ ನಿರ್ವಹಿಸಿದರು. ಅನಸೂಯಾ ಹೊನ್ನಾವರಕರ್ ವಂದಿಸಿದರು. ಸಂಘದ ಆಡಳಿತ ಮಂಡಳಿಯ ಸದಸ್ಯರು ಮತ್ತು ಸಿಬ್ಬಂದಿಗಳು, ಗ್ರಾಹಕರು ಉಪಸ್ಥಿತರಿದ್ದರು.

