




ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ – ಪಟ್ಟಣದಲ್ಲಿ ಶುಕ್ರವಾರ ಸುರಿದ ಮಳೆಗೆ ನೂತನ ನಗರದಲ್ಲಿರುವ ಉರ್ದು ಪ್ರಾಥಮಿಕ ಶಾಲೆ ಕೊಠಡಿ ತುಂಬಾ ನೀರು ತುಂಬಿ ನೀರಿನ ತೊಟ್ಟಿಯಾಗಿದೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ತಹಶಿಲ್ದಾರ ಅಶೋಕ್ ಭಟ್ ಪರಿಶೀಲಿಸಿ ಸಂಬಂಧ ಪಟ್ಟ ಇಲಾಖೆಗೆ ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಿದ್ದಾರೆ.

ಪುಟ್ಟ ಮಕ್ಕಳು ತಂಡಿಯಾದ ನೆಲದ ಮೇಲೆ ಪಾಠ ಕೇಳುವ ಪ್ರಮೇಯ ಒದಗಿ ಬಂದಿದ್ದು ಶಿಕ್ಷಕಿ ಕೂಡ ನೀರಿನಲ್ಲಿ ನಿಂತು ಪಾಠ ಮಾಡುವ ದುರ್ಗತಿ ಬಂದೊದಗಿದೆ.

ತಾತ್ಕಾಲಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ಮಾರ್ಗ ಕಂಡು ಕೊಳ್ಳಬೇಕಿದೆ ಎಂಬುದು ಸ್ಥಳೀಯ ಪ್ರಮುಖ ಶಫಿ ಎಮ್ ಶೇಖ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸುನಿಲ್ ಸುಭಾಶ್ ಗಾವಡೆ ನೀರಿನಲ್ಲೆ ಕುಳಿತು ಪಾಠ ಕೇಳುವ ಮಕ್ಕಳ ಸ್ಥಿತಿ ಕಂಡು ತಾತ್ಕಾಲಿಕವಾಗಿ ಶಾಲೆಗೆ ಟಾರ್ಪಾಲ್ ವ್ಯವಸ್ಥೆ ಮಾಡಲಿದ್ದು ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಪಂಚಾಯತ ಇಂಜಿನಿಯರ್ ವಿಭಾಗದವರಿಗು ಮಾಹಿತಿ ನೀಡಲಿದ್ದೇನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಶಾಲೆಯ ಮೇಲ್ಚಾವಣಿ ನಿರ್ಮಿಸುವುದು ಅಥವ ದುರಸ್ತಿ ಕಾರ್ಯ ನಡೆಸಲೇಬೇಕಿರುವ ಕಟ್ಟಡಗಳ ಪಟ್ಟಿಯಲ್ಲಿ ನೂತನ ನಗರದ ಉರ್ದುಶಾಲೆ ಹೆಸರನ್ನು ಸೇರಿಸಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ ಪ್ರತಿಕ್ರಿಯಿಸಿದ್ದಾರೆ.