
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
.
ಯಲ್ಲಾಪುರ : ಶಂಕರರ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ಶಂಕರಾಚಾರ್ಯರು ಹುಟ್ಟಿದ ಕಾಲಟಿಯಿಂದ ಹೊರಟು ಕೇರಳ ಮತ್ತು ಕರ್ನಾಟಕದಾದ್ಯಂತ ಸಂಚರಿಸುತ್ತಿರುವ ಶಂಕರರ ‘ ಮಹಪಾದುಕಾ ರಥ’ ಶುಕ್ರವಾರ ಸಂಜೆ ಪಟ್ಟಣದ ನಾಯಕನಕೆರೆಯ ಶ್ರೀದತ್ತ ಮಂದಿರಕ್ಕೆ ಆಗಮಿಸಿತು. ರಥಕ್ಕೆ ಪೂಜೆ ಸಲ್ಲಿಸಿ, ಪ್ರಸಾದ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸಂಕಲ್ಪ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ‘ ಆದಿ ಶಂಕರರು ಬ್ರಹ್ಮ ಸತ್ಯವಾದ ಅದ್ವೈತ್ ತತ್ವವನ್ನು ಜಗತ್ತಿಗೆ ಸಾರಿದ್ದಾರೆ. ನಮ್ಮಲ್ಲಿಯೇ ಭಗವಂತನಿದ್ದಾನೆ ಎಂಬ ಅದ್ಭುತ ಸಂದೇಶ ಸಾರಿದ ಶಂಕರರು, ಆತ್ಮ, ಪರಮಾತ್ಮ ಎರಡೂ ಒಂದೇ. ಬಿಂಬಕ್ಕೆ ದೇವರ ಸ್ವರೂಪದಲ್ಲಿ ಪ್ರತಿಬಿಂಬವನ್ನು ಕಾಣುವ ಸಂದೇಶ ಸಾರಿದ್ದಾರೆ. ಕೇವಲ 32 ವರ್ಷದ ಜಿವಿತಾವಧಿಯಲ್ಲಿ ಇಡೀ ದೇಶ ಸಂಚಾರವನ್ನು ಮಾಡಿ ಹರಿದು ಹಯಂಚಿಹೊಗಿದ್ದ ಹಿಂದೂ
ಧರ್ಮವನ್ನು ಒಗ್ಗೂಡಿಸುವ ಮೂಲಕ ಸಾಮರಸ್ಯವನ್ನು ಸಾರಿ ಭಗವಂತನಿಗೆ ಮೂರ್ತಿ ಸ್ವರೂಪವನ್ನು ನೀಡಿದ ಮಹಾನ್ ದಾರ್ಶನಿಕ ಸಂತರು ಶಂಕರರು’ ಎಂದರು.
ಈ ಸಂದರ್ಭದಲ್ಲಿ ದತ್ತಮಂದಿರ ಸಮಿತಿಯ ಪ್ರಮುಖರಾದ ಶಾಂತಾರಾಮ ಹೆಗಡೆ, ಪ್ರಶಾಂತ ಹೆಗಡೆ, ನಾಗರಾಜ ಮದ್ಗುಣಿ, ನಾಗೇಶ ಯಲ್ಲಾಪುರಕರ, ಅಶೋಕ ಹೆಗಡೆ, ನಾರಾಯಣ ನಾಯಕ, ವಿ.ಪಿ.ನಾಯ್ಕ, ಶಿವಾನಂದ ಕೊಂಡದಕುಳಿ, ಮಂಜುನಾಥ ಹೆಗಡೆ, ಅನಂತ ಬಾಂದೇಕರ್, ನಿತ್ಯಾನಂದ ಬಾಂದೇಕರ್, ಸಂಧ್ಯಾ ಹೆಗಡೆ, ವಿಶಾಲಾಕ್ಷಿ ಭಟ್ಟ, ತ್ರಿವೇಣಿ , ಪ್ರಶಾಂತಿ ಭಟ್ಟ, ರಥದ ಉಸ್ತುವಾರಿಗಳಾದ ಎಸ್.ವಿ.ಹೆಗಡೆ ಧಾರವಾಡ.ಶ್ರೀಧರ ಹೆಗಡೆ
ಬಾಳಗೋಡು ಸಿದ್ದಾಪುರ ಇತರರು ಉಪಸ್ಥಿತರಿದ್ದರು. ರಮೇಶ ಹೆಗಡೆ ನಿರೂಪಿಸಿದರು.
ಈ ರಥ ಯಾತ್ರೆ ಸಿದ್ದಾಪುರದ ಬಾನ್ಕುಳಿ ಮಠದಲ್ಲಿ ಮೇ 1 ರಿಂದ 4 ರವರೆಗೆ ವಿವಿದ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿರುವ ಶಂಕರ ಜಯಂತಿ ಕಾರ್ಯಕ್ರಮದಲ್ಲಿ ಸಂಪನ್ನಗೊಳ್ಳಲಿದೆ.



