Breaking News

ಶಂಕರರು ನಮ್ಮಲ್ಲಿಯೇ ಭಗವಂತನಿದ್ದಾನೆ ಎಂಬ ಅದ್ಭುತ ಸಂದೇಶ ಸಾರಿದ್ದಾರೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ

.

ಯಲ್ಲಾಪುರ : ಶಂಕರರ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ಶಂಕರಾಚಾರ್ಯರು ಹುಟ್ಟಿದ ಕಾಲಟಿಯಿಂದ ಹೊರಟು ಕೇರಳ ಮತ್ತು ಕರ್ನಾಟಕದಾದ್ಯಂತ ಸಂಚರಿಸುತ್ತಿರುವ ಶಂಕರರ ‘ ಮಹಪಾದುಕಾ ರಥ’ ಶುಕ್ರವಾರ ಸಂಜೆ ಪಟ್ಟಣದ ನಾಯಕನಕೆರೆಯ ಶ್ರೀದತ್ತ ಮಂದಿರಕ್ಕೆ ಆಗಮಿಸಿತು. ರಥಕ್ಕೆ ಪೂಜೆ ಸಲ್ಲಿಸಿ, ಪ್ರಸಾದ ವಿತರಿಸಲಾಯಿತು.


ಈ ಸಂದರ್ಭದಲ್ಲಿ ಸಂಕಲ್ಪ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ‘ ಆದಿ ಶಂಕರರು ಬ್ರಹ್ಮ ಸತ್ಯವಾದ ಅದ್ವೈತ್ ತತ್ವವನ್ನು ಜಗತ್ತಿಗೆ ಸಾರಿದ್ದಾರೆ. ನಮ್ಮಲ್ಲಿಯೇ ಭಗವಂತನಿದ್ದಾನೆ ಎಂಬ ಅದ್ಭುತ ಸಂದೇಶ ಸಾರಿದ ಶಂಕರರು, ಆತ್ಮ, ಪರಮಾತ್ಮ ಎರಡೂ ಒಂದೇ. ಬಿಂಬಕ್ಕೆ ದೇವರ ಸ್ವರೂಪದಲ್ಲಿ ಪ್ರತಿಬಿಂಬವನ್ನು ಕಾಣುವ ಸಂದೇಶ ಸಾರಿದ್ದಾರೆ. ಕೇವಲ 32 ವರ್ಷದ ಜಿವಿತಾವಧಿಯಲ್ಲಿ ಇಡೀ ದೇಶ ಸಂಚಾರವನ್ನು ಮಾಡಿ ಹರಿದು ಹಯಂಚಿಹೊಗಿದ್ದ ಹಿಂದೂ
ಧರ್ಮವನ್ನು ಒಗ್ಗೂಡಿಸುವ ಮೂಲಕ ಸಾಮರಸ್ಯವನ್ನು ಸಾರಿ ಭಗವಂತನಿಗೆ ಮೂರ್ತಿ ಸ್ವರೂಪವನ್ನು ನೀಡಿದ ಮಹಾನ್ ದಾರ್ಶನಿಕ ಸಂತರು ಶಂಕರರು’ ಎಂದರು.
ಈ ಸಂದರ್ಭದಲ್ಲಿ ದತ್ತಮಂದಿರ ಸಮಿತಿಯ ಪ್ರಮುಖರಾದ ಶಾಂತಾರಾಮ ಹೆಗಡೆ, ಪ್ರಶಾಂತ ಹೆಗಡೆ, ನಾಗರಾಜ ಮದ್ಗುಣಿ, ನಾಗೇಶ ಯಲ್ಲಾಪುರಕರ, ಅಶೋಕ ಹೆಗಡೆ, ನಾರಾಯಣ ನಾಯಕ, ವಿ.ಪಿ.ನಾಯ್ಕ, ಶಿವಾನಂದ ಕೊಂಡದಕುಳಿ, ಮಂಜುನಾಥ ಹೆಗಡೆ, ಅನಂತ ಬಾಂದೇಕರ್, ನಿತ್ಯಾನಂದ ಬಾಂದೇಕರ್, ಸಂಧ್ಯಾ ಹೆಗಡೆ, ವಿಶಾಲಾಕ್ಷಿ ಭಟ್ಟ, ತ್ರಿವೇಣಿ , ಪ್ರಶಾಂತಿ ಭಟ್ಟ, ರಥದ ಉಸ್ತುವಾರಿಗಳಾದ ಎಸ್.ವಿ.ಹೆಗಡೆ ಧಾರವಾಡ.ಶ್ರೀಧರ ಹೆಗಡೆ
ಬಾಳಗೋಡು ಸಿದ್ದಾಪುರ ಇತರರು ಉಪಸ್ಥಿತರಿದ್ದರು. ರಮೇಶ ಹೆಗಡೆ ನಿರೂಪಿಸಿದರು.
ಈ ರಥ ಯಾತ್ರೆ ಸಿದ್ದಾಪುರದ ಬಾನ್ಕುಳಿ ಮಠದಲ್ಲಿ ಮೇ 1 ರಿಂದ 4 ರವರೆಗೆ ವಿವಿದ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿರುವ ಶಂಕರ ಜಯಂತಿ ಕಾರ್ಯಕ್ರಮದಲ್ಲಿ ಸಂಪನ್ನಗೊಳ್ಳಲಿದೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರ ಪೊಲೀಸರ ಕಾರ್ಯ ಕ್ಷಮತೆ – ವರ್ಷದ ಹಿಂದಿನ ಡಕಾಯಿತಿ ಪ್ರಕರಣ ಆರೋಪಿಗಳು ಸ್ವತ್ತಿನ ಸಹಿತ ಅಂದರ್.!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ತಾಲೂಕಿನ ಅರಬೈಲ್ ಘಟ್ಟದಲ್ಲಿ ಕಾರು ಅಡ್ಡಗಟ್ಟಿ …

Leave a Reply

Your email address will not be published. Required fields are marked *