
ಯಲ್ಲಾಪುರ : ತಾಲೂಕಿನ ಸವಣಗೆರಿ ನಿವಾಸಿ 78 ವರ್ಷ ವಯಸ್ಸಿನ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಫಕೀರ ತುಕರಾಮ ಗೊಂದಳಿ ಮಾ,27 ರಂದು ನಿಧನರಾಗಿದ್ದು ಶುಕ್ರವಾರ ಅಂತ್ಯಕ್ರಿಯೆ ನೆರವೇರಿಸಲಾಯಿತು.
1965 ರಲ್ಲಿ ಆರ್ಮಿಗೆ ಸೇರಿದ ಫಕೀರ ಅವರು 17 ವರ್ಷಗಳ ಕಾಲ ಸೇವೆ ಸಲ್ಲುಸಿ ನಿವೃತ್ತಿ ಹೊಂದಿದ್ದರು.ವಯೋ ಸಹಜ ಮರಣ ಹೊಂದಿದ್ದು ಪತ್ನಿ ಇಬ್ಬರು ಪುತ್ರರು ಮೂರು ಹೆಣ್ಣು ಮಕ್ಕಳನ್ನು ಹಾಗು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಫಕೀರ ಅವರ ನಿಧನಕ್ಕೆ ಶಾಸಕ ಶಿವರಾಮ ಹೆಬ್ಬಾರ್ ಪರಿಷತ್ ಸದಸ್ಯ ಶಾಂತಾರಾಮ್ ಸಿದ್ದಿ ಸೇರಿದಂತೆ ಅಖಿಲ ಕರ್ನಾಟಕ ಮಾಜೀ ಸೈನಿಕರ ಸಂಘ ಯಲ್ಲಾಪುರ ತಾಲೂಕು ಘಟಕದವರು ಸಂತಾಪ ಸೂಚಿಸಿದ್ದಾರೆ.