
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ : ಡಾ.ಬಾಬಾ ಸಾಹೇಬ ಅಂಬೇಡ್ಕರ್ ಸೇವಾ ಸಂಘವು ಕಳೆದೆರಡು ದಶಕಗಳಿಗಿಂತ ಅಧಿಕ ಸಮಯದಿಂದ ತಾಲೂಕಿನಲ್ಲಿ ಕ್ರಿಯಾಶೀಲ ಸಂಘಟನೆಯಾಗಿ ಮುಂದುವರೆಯುತ್ತಿದ್ದು ಅಧ್ಯಕ್ಷ ಸ್ಥಾನ ತೆರವಾದ ಕಾರಣದಿಂದ ನೂತನ ಅಧ್ಯಕ್ಷನನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದು ಭವಿಷ್ಯದ ದಿನಗಳಲ್ಲಿ ಸಂಘದ ಚಟುವಟಿಕೆಯನ್ನು ಮತ್ತಷ್ಟು ಕ್ರಿಯಾಶೀಲವಾಗಿ ನಿರ್ವಹಿಸುತ್ತಾ ಹಿರಿಯರ, ಸಮಾಜದ ಬಂಧುಗಳ ಮತ್ತು ನಿರ್ಗಮಿತ ಪದಾಧಿಕಾರಿ ಮಂಡಳಿಯ ಸಲಹೆ ಸ್ವೀಕರಿಸಿ ಉತ್ತಮ ರೀತಿಯಲ್ಲಿ ಮುಂದುವರೆಸಿಕೊಂಡು ಹೋಗುತ್ತೇನೆಂದು ಯಲ್ಲಾಪುರ ಡಾ.ಬಾಬಾಸಾಹೇಬ ಅಂಬೇಡ್ಕರ್ ಸೇವಾ ಸಂಘದ ಅಧ್ಯಕ್ಷ ಲೋಕೇಶ ನೀಲಪ್ಪ ಪಾಟಣಕರ ಹೇಳಿದರು.

ಅವರು ಪಟ್ಟಣದ ಅಂಬೇಡ್ಕರ್ ನಗರದಲ್ಲಿರುವ ಕಾರ್ಯಾಲಯದಲ್ಲಿ ನೂತನ ಆಡಳಿತ ಮಂಡಳಿಯನ್ನು ಪರಿಚಯಿಸುವ ಮತ್ತು ನಿರ್ಗಮಿತ ಅಧ್ಯಕ್ಷ-ಉಪಾಧ್ಯಕ್ಷರನ್ನು ಗೌರವಿಸುವ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಧೀರ್ಘಕಾಲದಿಂದ ಅಂ.ಸೇ.ಸಂ ಅಧ್ಯಕ್ಷನಾಗಿ ಉತ್ತಮ ರೀತಿಯಲ್ಲಿ ಸಂಘಟಿಸಿ ಸಂಘವನ್ನು ಗೌರವಯುತವಾಗಿ ಮುನ್ನೆಡೆಸಿದ್ದು ವೈಯಕ್ತಿಕ ಕಾರಣಗಳಿಂದಾಗಿ ಅಧ್ಯಕ್ಷ ಗಾದಿಯ ಅವಧಿ ಪೂರ್ವದಲ್ಲೇ ಸ್ವ-ಇಚ್ಛೆಯಿಂದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ಬರಲಿರುವ ನೂತನ ಅಧ್ಯಕ್ಷರು ಸಂಘದ ಶ್ರೇಯೋಭಿವೃದ್ಧಿಗೆ ಶ್ರಮಿಸಿ ಸಂಘದ ಗೌರವವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲೆಂದು ಆಶಿಸುತ್ತೇನೆ. ಸಹಕರಿಸಿದ ಸರ್ವರಿಗೂ ಕೃತಜ್ಞತೆಗಳು ಎಂದು ನಿರ್ಗಮಿತ ಅದ್ಯಕ್ಷ ಜಗನ್ನಾಥ ವಿ ರೇವಣಕರ ಹೇಳಿದರು.

ನಿರ್ಗಮಿತ ಅಧ್ಯಕ್ಷ ಜಗನ್ನಾಥ್ ರೇವಣಕರ ಅವರು ಸಂಘದ ಜವಾಬ್ದಾರಿಯನ್ನು ನೂತನ ಅಧ್ಯಕ್ಷರಿಗೆ ಕಡತವನ್ನು ಹಸ್ತಾಂತರಿಸಿದರು.

ನಿರ್ಗಮಿತ ಅಧ್ಯಕ್ಷ ಜಗನ್ನಾಥ ವಿ ರೇವಣಕರ ಹಾಗೂ ಉಪಾಧ್ಯಕ್ಷ ಜನಾರ್ಧನ ಮಾದೇವ ಪಾಟಣಕರ ಅವರಿಗೆ ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ನೂತನ ಆಡಳಿತ ಮಂಡಳಿಯ ಉಪಾಧ್ಯಕ್ಷ ಅನಿಲ್ ಪಿ ಮರಾಠೆ, ಪ್ರಧಾನ ಕಾರ್ಯದರ್ಶಿ ಸಂತೋಷ ಶಂಕರ ಪಾಟಣಕರ, ಸಹಕಾರ್ಯದರ್ಶಿ ಈಶ್ವರ ಪರಶುರಾಮ ಪಾಟಣಕರ, ಖಜಾಂಚಿ ರೂಪಾ ಜನಾರ್ಧನ ಪಾಟಣಕರ ಉಪಸ್ಥಿತರಿದ್ದರು.



