Breaking News

ಪರೋಕ್ಷವಾಗಿ ಹೆಬ್ಬಾರ್ ಗೆ ಪಂಥಾಹ್ವಾನ ನೀಡಿದ ಕಾರವಾರ ಮಾಜಿ ಶಾಸಕಿ ರೂಪಾಲಿ ನಾಯಕ್ – ಕೆಂಡಾಮಂಡಲರಾದ ಹೆಬ್ಬಾರ್ ಅಭಿಮಾನಿ ಬಳಗದ ತಿರುಗೇಟು.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಪ್ರತಿಧ್ವನಿ ಯಲ್ಲಾಪುರ :ಪಟ್ಟಣದ ಎಪಿಎಂಸಿ ರೈತಭವನದಲ್ಲಿ ಬುಧವಾರ ನಡೆದ ಭಾರತೀಯ ಜನತಾ ಪಕ್ಷದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣ ಪೂರ್ವಸಿದ್ದತಾ ಸಭೆಯಲ್ಲಿ ಸ್ಥಳೀಯ ಶಾಸಕ ಶಿವರಾಮ್ ಹೆಬ್ಬಾರ್ ಅನುಪಸ್ಥಿತಿ ಎದ್ದು ಕಾಣುತ್ತಿತ್ತು ಮತ್ತು ಅವರ ಆಪ್ತ ಬಳಗದವರು ಕೂಡ ಯಾರು ಇಲ್ಲದಾಗಿತ್ತು.


‌ ‌  ವೇದಿಕೆಯಲ್ಲಿ ಕಾರವಾರ ಶಾಸಕಿ ರೂಪಾಲಿ ನಾಯಕ್ ಮಾತನಾಡಿ ಪರೋಕ್ಷವಾಗಿ ಶಾಸಕ ಹೆಬ್ಬಾರ್ ನಡೆಯನ್ನು ಟೀಕಿಸಿ ನಮ್ಮ ಪಕ್ಷ ಎಲ್ಲವನ್ನು ಕೊಟ್ಟಿದೆ ಆದರು ಈ ರೀತಿ ನಡೆ ಭಾರತೀಯ ಜನತಾ ಪಕ್ಷಕ್ಕೆ ಶೋಭೆಯಲ್ಲ ಅವರು ಇದ್ದರೆ ಇರಬಹುದು ಹೋದರೆ ಹೋಗಬಹುದು ನಮ್ಮ ಸಂಘಟಿತ ಪ್ರಯತ್ನದಿಂದ ಕಾಗೇರಿಬಾವರನ್ನು ಗೆಲ್ಲುಸಿಕೊಂಡು ಬರುತ್ತೇವೆ ಡೇಟ್ ಮತ್ತು ಟೈಮ್ ಬರೆದಿಟ್ಟುಕೊಳ್ಳಿ ಎಂದು ಹೆಬ್ಬಾರ್ ಹೆಸರು ಹೇಳದೆ ಸವಾಲು ಎಸೆದರು.
      ಈ ಸುದ್ದಿ ಹೆಬ್ಬಾರ್ ಆಪ್ತ ಬಳಗಕ್ಕೆ ತಿಳಿಯುತ್ತಲೆ ಕೆಂಡಾಮಂಡಲರಾಗಿ ತಮ್ಮ ನಾಯಕರ ಬಗ್ಗೆ ಮಾತನಾಡುವ‌ ನೈತಿಕತೆ  ಮಾಜಿ ಶಾಸಕಿ ರೂಪಾಲಿ ನಾಯಕ್ ಅವರಿಗಿಲ್ಲ ಎಂದು ಆಕ್ರೋಶ ಹೊರ ಹಾಕಿ ಸಾಮಾಹಿಕ ಜಾಲ ತಾಣದಲ್ಲಿ ಪ್ರಕಟಣೆಯೊಂದನ್ನು ಬಿಡುಗಡೆಗೊಳಿಸಿದ್ದಾರೆ.


     *ಮೋದಿ ಪ್ರಚಾರ ಮಾಡಿದರು ಗೆಲ್ಲದ ಜನ ತಿರಸ್ಕರಿಸಿದ ರೂಪಾಲಿ ನಾಯಕ್ ಗೆ ಹೆಬ್ಬಾರ್ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ.*
  ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಸ್ವತಹ ಕ್ಷೇತ್ರಕ್ಕೆ ಆಗಮಿಸಿ ಚುನಾವಣಾ ಪ್ರಚಾರ ನಡೆಸಿದರು ಸಹ ಗೆಲುವು ಸಾಧಿಸುವುದಕ್ಕೆ ಸಾಧ್ಯವಾಗದ ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರಿಗೆ ನಮ್ಮ ನಾಯಕರ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದು ಶಾಸಕ ಹೆಬ್ಬಾರ್ ಆಪ್ತ ಅಭಿಮಾನಿ ಬಳಗ ಉಗ್ರವಾಗಿ ಟೀಕಿಸಿ ಮಾಧ್ಯಮ ಪ್ರಕಟಣೆ ಬಿಡುಗಡೆಗೊಳಿಸಿದ್ದಾರೆ.
     ನಾಲ್ಕು ಭಾರಿ ಜನರ ಪ್ರೀತಿ ವಿಶ್ವಾಸದಿಂದ ಶಾಸಕರಾಗಿ ಆಯ್ಕೆಯಾಗಿರುವ  ನಮ್ಮ ನಾಯಕರಾದ ಶಿವರಾಮ ಹೆಬ್ಬಾರ್ ಅವರ ರಾಜಕೀಯದ ನಡೆಯ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಹಾಗೂ ಮಾಜಿ ಶಾಸಕಿಯಾದ ನಿಮಗೆ  ಇಂತಹ ಹೇಳಿಕೆ ಗೌರವ ನೀಡುವುದಿಲ್ಲ.

ಕಳೆದ ಬಾರಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸ್ವತಹ ಮಾನ್ಯ ಪ್ರಧಾನ ಮಂತ್ರಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಅವರು ಅಂಕೋಲಾಕ್ಕೆ ಆಗಮಿಸಿ ಚುನಾವಣಾ ಪ್ರಚಾರ ನಡೆಸಿದರು ಸಹ ತಾವು ಗೆಲುವು ಸಾಧಿಸುವುದಕ್ಕೆ ಸಾಧ್ಯವಾಗಿಲ್ಲ ಎಂಬುವುದು ನಿಮ್ಮ ಕ್ಷೇತ್ರದಲ್ಲಿ ಕಾರ್ಯಕರ್ತರಿಗೆ ಹಾಗೂ ಮತದಾರಿಗೆ ನಿಮ್ಮ ಮೇಲಿರುವ ಕೋಪ ಎತ್ತಿ ತೋರಿಸುತ್ತದೆ ಹಾಗೂ ಕಳೆದ ಬಾರಿ ನಡೆದ ವಿಧಾನಸಭೆಯ ಚುನಾವಣೆಯಲ್ಲಿ ಜಿಲ್ಲೆಯ ಪಕ್ಷದ ಅಭ್ಯರ್ಥಿಗಳ ಸೋಲಿಗೆ ಹಾಗೂ ಈ ಬಾರಿ ಸಂಸದರಾದ ಅನಂತ ಕುಮಾರ ಹೆಗಡೆ ಅವರಿಗೆ ಟಿಕೆಟ್ ತಪ್ಪಿಸುವುದಕ್ಕೆ ತಾವು ಮಾಡಿದ ಸಾಹಸ ಇಂದು ಎಲ್ಲರಿಗೂ ತಿಳಿದಿದ್ದೆ.

ತಾವು ಅಧಿಕಾರದ ಆಸೆಗಾಗಿ ಕಾಂಗ್ರೆಸ್ ಪಕ್ಷದಿಂದ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿರುವುದು ತಮಗೆ ಇಂದು ನೆನಪಿದೆ ಎಂದು ಭಾವಿಸುತ್ತೇವೆ.ಅಂದು ಜಿಲ್ಲಾ ಪಂಚಾಯತ ಚುನಾವಣೆಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡದ ಸಂದರ್ಭದಲ್ಲಿ ನೀವು ಬಂಡಾಯವಾಗಿ ಸ್ಪರ್ಧೆ ಮಾಡಿ ಅಧಿಕಾರ ನೀಡಿದ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಿ ಅಧಿಕಾರಕೋಸ್ಕರ ಪಕ್ಷ ಬದಲಾವಣೆ ಮಾಡಿರುವ ನಿಮ್ಮಂತವರಿಂದ ಸಿದ್ಧಾಂತ, ಪಕ್ಷನಿಷ್ಠೆ ಕಲಿಯುವ ಅವಶ್ಯಕತೆ ನಮಗೆ ಇಲ್ಲ ಕಳೆದ ನಾಲ್ಕು ದಶಕಗಳಿಂದ ಜಿಲ್ಲೆಯ ರಾಜಕೀಯದ ಆಳ ಅಗಲ ತಿಳಿದಿರುವ ನಮ್ಮ ನಾಯಕರಿಗೆ ಯಾವ ಪಕ್ಷ ಸೇರಬೇಕು ಸೇರಬಾರದು ಎಂದು ಅವರಿಗೆ ತಿಳಿದಿದ್ದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಮೊದಲ ಭಾರಿಗೆ ಚುನಾಯಿತ ಜನಪ್ರತಿನಿಧಿಗಳ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯ ಗೆಲುವು ಸೇರಿದಂತೆ ಸತತ ಎರಡು ಬಾರಿ 1994 ರಿಂದ 2000 ರವರೆಗೆ ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷರಾಗಿ  ಜವಾಬ್ದಾರಿಯನ್ನು ನಿರ್ವಹಿಸಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷವನ್ನು ತಳಮಟ್ಟದಿಂದ ಬಲಪಡಿಸಲುವಲ್ಲಿ ಹಗಲಿರುಳು ಶ್ರಮಿಸಿದ ನಮ್ಮ ನಾಯಕರಾದ ಶ್ರೀ ಶಿವರಾಮ ಹೆಬ್ಬಾರ್ ಅವರ ರಾಜಕೀಯದ ನಡೆಯ ಬಗ್ಗೆ ಮಾತನಾಡುವ ಯಾವುದೇ ಅಧಿಕಾರ ಸಹ ನಿಮಗೆ ಇಲ್ಲಾ.

ನಿಮ್ಮಂತಹ ಅವಕಾಶವಾದಿ ವೈಯಕ್ತಿಕ ದ್ವೇಷ ಹೊಂದಿರುವ ರಾಜಕಾರಣಿಗಳಿಂದ ಇಂದು ಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷವು ಹಳ್ಳ ಹಿಡಿದಿದೆ ಮೊದಲು ತಾವು ಪಕ್ಷದ ಕಾರ್ಯಕರ್ತರಿಗೆ ಗೌರವ ನೀಡುವುದನ್ನು ಹಾಗೂ ಅವರ ನೋವಿಗೆ ಸ್ಪಂದಿಸಿವುದನ್ನು ಕಲಿತುಕೊಳ್ಳಿ ಇಲ್ಲವಾದಲಿ ಮುಂದೆಯು ಸಹ ಸೋಲಿನ ರುಚಿ ಕಾಣಬೇಕಾದಿತ್ತು ನೆನಪಿರಲಿ ಎಂದು  ಇಡಗುಂದಿ ಗ್ರಾಮಪಂಚಾಯತ ಅಧ್ಯಕ್ಷ
ಶ್ರೀಕಾಂತ್ ಡಿ. ಶೆಟ್ಟಿ ,ಯಲ್ಲಾಪುರ ಪ.ಪಂ ಮಾಜಿ ಅಧ್ಯಕ್ಷರು  ಸುನಂದಾ ದಾಸ್ , ಯಲ್ಲಾಪುರ ಮಂಡಳದ ಮಾಜಿ  ಪ್ರಧಾನ ಕಾರ್ಯದರ್ಶಿ ಡಾ.ರವಿ ಭಟ್ ಬರಗದ್ದೆ, ಮಾಜಿ  ಖಜಾಂಚಿ ಮುರಳಿ ಹೆಗಡೆ, ಮಾಜಿ ಉಪಾಧ್ಯಕ್ಷರು ಶಿರಿಷ್ ಪ್ರಭು , ಯಲ್ಲಾಪುರ ಪ.ಪಂ ಸದಸ್ಯ ಪ.ಪಂ ಸದಸ್ಯ ಸತೀಶ್ ನಾಯ್ಕ
ಕಂಪ್ಲಿ ಮಹಾಶಕ್ತಿಕೇಂದ್ರದ ಅಧ್ಯಕ್ಷ ದತ್ತು ನಾಯ್ಕ ಕುಂದರಗಿ  ಯವರು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ
  

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರ ಪೊಲೀಸರ ಕಾರ್ಯ ಕ್ಷಮತೆ – ವರ್ಷದ ಹಿಂದಿನ ಡಕಾಯಿತಿ ಪ್ರಕರಣ ಆರೋಪಿಗಳು ಸ್ವತ್ತಿನ ಸಹಿತ ಅಂದರ್.!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ತಾಲೂಕಿನ ಅರಬೈಲ್ ಘಟ್ಟದಲ್ಲಿ ಕಾರು ಅಡ್ಡಗಟ್ಟಿ …

Leave a Reply

Your email address will not be published. Required fields are marked *