Breaking News

ಮತಗಳಿಕೆಗಾಗಿ ಮರಾಠಿ ಭಾಷಣ ಮಾಜಿ ವಿಧಾನಸಭಾಧ್ಯಕ್ಷ ಉತ್ತರ ಕನ್ನಡ ಲೋಕಸಭಾ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಸಮ್ಮುಖದಲ್ಲೆ ..??

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಪ್ರತಿಧ್ವನಿ ಯಲ್ಲಾಪುರ – ಬುಧವಾರ ಯಲ್ಲಾಪುರದ ಎಪಿಎಂಸಿ ರೈತಭವನದಲ್ಲಿ ಲೋಕಸಭಾ2024 ರ ಚುನಾವಣೆ ನಿಮಿತ್ತ ಭಾರತೀಯ ಜನತಾ ಪಕ್ಷದ ಚುನಾವಣ ಪೂರ್ವ ಸಿದ್ದತಾ ಸಭೆ ನಡೆಯಿತು.


    ಸಭೆಯಲ್ಲಿ ಅನೇಕ ಗಣ್ಯರು ಉಪಸ್ಥಿತರಿದ್ದು ಹಾಲಿ ಮಾಜಿ ಶಾಸಕರು , ಎಂ.ಎಲ್.ಸಿ ಇನ್ನಿತರ ಪ್ರಮುಖರು ಮಾತನಾಡಿ ದರು.

ಜನರ ಮತ ಸೆಳೆಯಲು  ಮರಾಠಿ ಭಾಷೆಯಲ್ಲಿ ಭಾಷಣ ಮಾಡಿ ತಮ್ಮವರ ಚಪ್ಪಾಳೆ  ಗಿಟ್ಟಿಸಿಕೊಂಡ ಖಾನಾಪುರ ವಿಠ್ಠಲ ಹಲಗೀಕರ 
ಅರ್ಧದಷ್ಟು ಮರಾಠಿ ಭಾಷಣ ನಂತರ ಕನ್ನಡ ಭಾಷಣ ಮುಂದುವರೆಸಿದ ಕಿತ್ತೂರು ಮಾಜಿ ಶಾಸಕ ಅರವಿಂದ ಪಾಟೀಲ್

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಖಾನಾಪುರ ಶಾಸಕ ವಿಠ್ಠಲ ಹಲಗೀಕರ  ಮತ್ತು ಕಿತ್ತೂರಿನ ಮಾಜಿ ಶಾಸಕ ಅರಂವಿದ ಪಾಟೀಲ್ ಅವರು ತಮ್ಮ ಬೆಂಬಲಿಗರು ಮತ್ತು ಹಿತೈಷಿಗಳ ಸಂತೋಷಕ್ಕಾಗಿ ಘಟಾನುಘಟಿಗಳು ಕುಳಿತಂತಹ  ವೇದಿಕೆಯಲ್ಲಿ ಮರಾಠಿ ಮಾತುಗಳನ್ನಾಡುವ  ಮೂಲಕ ಮರಾಠಿ ಪ್ರೇಮವನ್ನು ಪ್ರದರ್ಶಿಸಿದರು ಇದರಿಂದ  ಕನ್ನಡದ ಮನಸ್ಸುಗಳಿಗೆ ಘಾಸಿ ಮಾಡಿದಂತಾಗಿದೆ.

ವಿಡಿಯೋ ದೃಶ್ಯಾವಳಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ ಪ್ರತಿಧ್ವನಿ ಯೂ-ಟ್ಯೂಬ್ ಚಾನೆಲ್‌ ಸಬ್ ಸ್ಕೈಬ್ ಮಾಡಿ  ಪ್ರೋತ್ಸಾಹಿಸಿ


     ಹೇಳಿ ಕೇಳಿ ಮಹಾರಾಷ್ಟ್ರದ ಗಡಿ ಖ್ಯಾತೆ ಇನ್ನೂ ಬಗೆಹರಿದಿಲ್ಲ ಇಂತಹ ಸಂದರ್ಭದಲ್ಲಿ  ಕನ್ನಡದ ವೇದಿಕೆಯಲ್ಲಿ ಮರಾಠಿ ಭಾಷೆಯಲ್ಲಿ ಭಾಷಣ ಎಂದರೆ ಅದರಲ್ಲೂ  ಮಾಜಿ ವಿಧಾನಸಭಾಧ್ಯಕ್ಷ   ವಿಶ್ವೇಶ್ವರ ಹೆಗಡೆ ಕಾಗೇರಿಯವರ ಸಮ್ಮುಖದಲ್ಲಿ ಈ ಘಟನೆ ನಡೆದರು ತುಟಿ ಬಿಚ್ಚದೆ ಮೌನವಾಗಿರುವುದು ಕಿತ್ತೂರು–ಖಾನಾಪುರದಲ್ಲಿ ಮರಾಠಿಗರ ಮತಗಳು ಹೆಚ್ಚಿರುವುದರಿಂದ ಇಲ್ಲಿ ಮರಾಠಿ ಸಹ್ಯವಾಗುತ್ತಿದೆ ಆದರೆ ಸಭೆ,ಸಮಾರಂಭ, ವೇದಿಕೆಯಲ್ಲಿ ಕನ್ನಡದ ಪರ ಮಾತನಾಡುವ ಘಟಾನುಘಟಿಗಳು ವೇದಿಕೆಯ ಮೇಲಿದ್ದರು ಯಾರೊಬ್ಬರು ಆಕ್ಷೇಪ ವ್ಯಕ್ತಪಡಿಸದಿರುವುದು ಕನ್ನಡ ನೆಲದ ದೌರ್ಭಾಗ್ಯವಾಗಿದೆ ಎಂಬುದು ಕನ್ನಡ ಮನಸ್ಸುಗಳ ಅಳಲಾಗಿದೆ.


      ಮತಗಳಿಕೆಯ ಉದ್ದೇಶದಿಂದ ಈಗ ಕನ್ನಡದ ವೇದಿಕೆಯಲ್ಲಿ ಅನ್ಯ ಭಾಷೆಯ ಪ್ರಭಾವ ಬಳಸಿ ಮತಗಳಿಸಿದ ನಂತರ ಮುಂದೆ ಕನ್ನಡದ ನೆಲ,ಜಲ,ಭಾಷೆಯ ವಿಚಾರ ಬಂದಾಗ ಮುಲಾಜಿಗೆ ಒಳಗಾಗುವ ಸನ್ನಿವೇಶ ಎದುರಾಗಲಿದೆ ಹಾಗಾಗಿ ಭಾಷೆ ವಿಚಾರದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ನಾಯಕರು ಜಾಗ್ರತೆ ವಹಿಸಬೇಕು ಎಂಬುದು ಕನ್ನಡಾಭಿಮಾನಿಗಳ ಅನಿಸಿಕೆಯಾಗಿದೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರ ಪೊಲೀಸರ ಕಾರ್ಯ ಕ್ಷಮತೆ – ವರ್ಷದ ಹಿಂದಿನ ಡಕಾಯಿತಿ ಪ್ರಕರಣ ಆರೋಪಿಗಳು ಸ್ವತ್ತಿನ ಸಹಿತ ಅಂದರ್.!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ತಾಲೂಕಿನ ಅರಬೈಲ್ ಘಟ್ಟದಲ್ಲಿ ಕಾರು ಅಡ್ಡಗಟ್ಟಿ …

Leave a Reply

Your email address will not be published. Required fields are marked *