


ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ – ಬುಧವಾರ ಯಲ್ಲಾಪುರದ ಎಪಿಎಂಸಿ ರೈತಭವನದಲ್ಲಿ ಲೋಕಸಭಾ2024 ರ ಚುನಾವಣೆ ನಿಮಿತ್ತ ಭಾರತೀಯ ಜನತಾ ಪಕ್ಷದ ಚುನಾವಣ ಪೂರ್ವ ಸಿದ್ದತಾ ಸಭೆ ನಡೆಯಿತು.

ಸಭೆಯಲ್ಲಿ ಅನೇಕ ಗಣ್ಯರು ಉಪಸ್ಥಿತರಿದ್ದು ಹಾಲಿ ಮಾಜಿ ಶಾಸಕರು , ಎಂ.ಎಲ್.ಸಿ ಇನ್ನಿತರ ಪ್ರಮುಖರು ಮಾತನಾಡಿ ದರು.


ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಖಾನಾಪುರ ಶಾಸಕ ವಿಠ್ಠಲ ಹಲಗೀಕರ ಮತ್ತು ಕಿತ್ತೂರಿನ ಮಾಜಿ ಶಾಸಕ ಅರಂವಿದ ಪಾಟೀಲ್ ಅವರು ತಮ್ಮ ಬೆಂಬಲಿಗರು ಮತ್ತು ಹಿತೈಷಿಗಳ ಸಂತೋಷಕ್ಕಾಗಿ ಘಟಾನುಘಟಿಗಳು ಕುಳಿತಂತಹ ವೇದಿಕೆಯಲ್ಲಿ ಮರಾಠಿ ಮಾತುಗಳನ್ನಾಡುವ ಮೂಲಕ ಮರಾಠಿ ಪ್ರೇಮವನ್ನು ಪ್ರದರ್ಶಿಸಿದರು ಇದರಿಂದ ಕನ್ನಡದ ಮನಸ್ಸುಗಳಿಗೆ ಘಾಸಿ ಮಾಡಿದಂತಾಗಿದೆ.
ಹೇಳಿ ಕೇಳಿ ಮಹಾರಾಷ್ಟ್ರದ ಗಡಿ ಖ್ಯಾತೆ ಇನ್ನೂ ಬಗೆಹರಿದಿಲ್ಲ ಇಂತಹ ಸಂದರ್ಭದಲ್ಲಿ ಕನ್ನಡದ ವೇದಿಕೆಯಲ್ಲಿ ಮರಾಠಿ ಭಾಷೆಯಲ್ಲಿ ಭಾಷಣ ಎಂದರೆ ಅದರಲ್ಲೂ ಮಾಜಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಸಮ್ಮುಖದಲ್ಲಿ ಈ ಘಟನೆ ನಡೆದರು ತುಟಿ ಬಿಚ್ಚದೆ ಮೌನವಾಗಿರುವುದು ಕಿತ್ತೂರು–ಖಾನಾಪುರದಲ್ಲಿ ಮರಾಠಿಗರ ಮತಗಳು ಹೆಚ್ಚಿರುವುದರಿಂದ ಇಲ್ಲಿ ಮರಾಠಿ ಸಹ್ಯವಾಗುತ್ತಿದೆ ಆದರೆ ಸಭೆ,ಸಮಾರಂಭ, ವೇದಿಕೆಯಲ್ಲಿ ಕನ್ನಡದ ಪರ ಮಾತನಾಡುವ ಘಟಾನುಘಟಿಗಳು ವೇದಿಕೆಯ ಮೇಲಿದ್ದರು ಯಾರೊಬ್ಬರು ಆಕ್ಷೇಪ ವ್ಯಕ್ತಪಡಿಸದಿರುವುದು ಕನ್ನಡ ನೆಲದ ದೌರ್ಭಾಗ್ಯವಾಗಿದೆ ಎಂಬುದು ಕನ್ನಡ ಮನಸ್ಸುಗಳ ಅಳಲಾಗಿದೆ.
ಮತಗಳಿಕೆಯ ಉದ್ದೇಶದಿಂದ ಈಗ ಕನ್ನಡದ ವೇದಿಕೆಯಲ್ಲಿ ಅನ್ಯ ಭಾಷೆಯ ಪ್ರಭಾವ ಬಳಸಿ ಮತಗಳಿಸಿದ ನಂತರ ಮುಂದೆ ಕನ್ನಡದ ನೆಲ,ಜಲ,ಭಾಷೆಯ ವಿಚಾರ ಬಂದಾಗ ಮುಲಾಜಿಗೆ ಒಳಗಾಗುವ ಸನ್ನಿವೇಶ ಎದುರಾಗಲಿದೆ ಹಾಗಾಗಿ ಭಾಷೆ ವಿಚಾರದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ನಾಯಕರು ಜಾಗ್ರತೆ ವಹಿಸಬೇಕು ಎಂಬುದು ಕನ್ನಡಾಭಿಮಾನಿಗಳ ಅನಿಸಿಕೆಯಾಗಿದೆ.