
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ

ಯಲ್ಲಾಪುರ : ಅರಣ್ಯ ಇಲಾಖೆಯ ಯಲ್ಲಾಪುರ ವಿಭಾಗದ ಇಡುಗುಂದಿ ವಲಯದ ಮಾಗೋಡು ಗ್ರಾಮದಲ್ಲಿ ಹಲವಾರು ತಿಂಗಳುಗಳಿಂದ ಚಿರತೆಯೊಂದು ದನ ಮತ್ತು ನಾಯಿಗಳನ್ನು ಹಿಡಿದು ತಿನ್ನುತ್ತಿದ್ದ ಬಗ್ಗೆ ಪ್ರಕರಣಗಳು ಬಲವಾಗಿ ಕೇಳಿ ಬಂದಿತ್ತು. ಇದಕ್ಕೆ ಸ್ಪಂದಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಗ್ರಾಮ ಅರಣ್ಯ ಸಮಿತಿ ಸದಸ್ಯರು ಹಲವಾರು ಬಾರಿ ಕೋಂಬಿಂಗ್ ಕಾರ್ಯಚರಣೆ ಮಾಡಿದ್ದರು ಆದರೆ ಚಿರತೆ ಸಿಗಲು ಇಲ್ಲ ಮತ್ತೆ ದಾಳಿ ನಿಲ್ಲಲಿಲ್ಲ.

ನಂತರ ಹಿರಿಯ ಅಧಿಕಾರಿಗಳ ಆದೇಶದಂತೆ ಏ,25 ರಂದು ಮಾಗೋಡು ಗ್ರಾಮದ ವ್ಯಾಪ್ತಿಯಲ್ಲಿ ಚಿರತೆಯನ್ನು ಸೆರೆ ಹಿಡಿಯಲು ಬೋನನ್ನು ಇಡಲಾಗಿತ್ತು,


ಅದೃಷ್ಟ ಎಂಬಂತೆ ಒಂದೇ ದಿನಕ್ಕೆ ಗ್ರಾಮಕ್ಕೆ ಜಾನುವಾರಿಗೆ ಕಂಟಕವಾಗಿದ್ದ ಚಿರತೆ ಬೋನಿಗೆ ಬಿದ್ದಿತ್ತು. ಅರಣ್ಯ ಇಲಾಖೆಯ ಅಧಿಕಾರಿಗಳು ಮುಂದಿನ ಕಾನೂನಾತ್ಮಕ ಕ್ರಮ ಕೈಗೊಂಡು ಚಿರತೆಯನ್ನು ಹಿರಿಯ ಅರಣ್ಯ ಅಧಿಕಾರಿಗಳ ಆದೇಶದಂತೆ KTR (ಕಾಳಿ ಟೈಗರ್ ರಿಸರ್ವ್) ದಟ್ಟ ಅರಣ್ಯದಲ್ಲಿ ಬಿಡಲಾಗಿತ್ತು.

ಇದು ನಡೆದು ಸುಮಾರು ಎರಡು ತಿಂಗಳಿಂದ ಮಾಗೋಡು ಗ್ರಾಮದಲ್ಲಿ ಹಾಗೂ ಸುತ್ತಮುತ್ತಲಿನಲ್ಲಿ ಯಾವುದೇ ರೀತಿಯ ಮಾನವ ಹಾಗೂ ವನ್ಯಜೀವಿ ಸಂಘರ್ಷ ಕಂಡುಬಂದಿರಲಿಲ್ಲ. ಆದರೆ ಜೂ,28 ರಂದು ಮಾಗೋಡು ಗ್ರಾಮದ ಹೆಬ್ಬಾರ್ ಮನೆಯ ನಾಗೇಶ್ ಭಾಗವತ್ ಎಂಬುವರ ಕೊಟ್ಟಿಗೆಯಲ್ಲಿದ್ದ ಆಕಳಿನ ಕರುವನ್ನು ಚಿರತೆಯು ಹಿಡಿದು ತಿಂದಿರುವ ಪ್ರಸಂಗ ನಡೆದಿದೆಬವಿಷಯ ತಿಳಿಯುತ್ತಲೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಂಡಿರುತ್ತಾರೆ.
ಅರಣ್ಯ ಇಲಾಖೆಯ ಅಭಯ
ಗ್ರಾಮದ ಜನರು ಯಾವುದೇ ರೀತಿಯ ಭಯಭೀತರಾಗುವ ಅವಶ್ಯಕತೆ ಇಲ್ಲ, ಸದರಿ ಚಿರತೆಯ ಬಗ್ಗೆ ಅರಣ್ಯ ಇಲಾಖೆಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗುವುದು.


