


ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ಪ್ರಕೃತಿಯ ಜೊತೆ ಬದುಕಲು ನಾವು ಕಲಿತರೆ ಉತ್ತಮ ಫಲ ಸಿಗಬಲ್ಲದು.
ಪರಿಸರದ ಮೇಲಿನ ಕಾಳಜಿ ನಮ್ಮ ಕಾಳಜಿಯೂ ಹೌದು. ನಮ್ಮ ಸುತ್ತ ಮುತ್ತಲಿನ ಕಾಡಿನ ಜೀವ ವೈವಿಧ್ಯತೆ ಯನ್ನು ಅರಿಯುವ ಮೂಲಕ ಈ ನೆಲದ ಶ್ರೇಷ್ಠತೆಯನ್ನು ಮುಂದಿನ ತಲೆಮಾರಿಗೆ ಪರಿಚಯಿಸಿವಂತೆ ಕಾಡಿನ ಕೌತುಕವನು ಕಾಪಿಡೋಣ. ಎಂದು ತಾಲ್ಲೂಕಿನ ಇಡಗುಂದಿ ವಲಯ ಅರಣ್ಯಾಧಿಕಾರಿ ಶಿಲ್ಪಾ ನಾಯ್ಕ ಅಭಿಪ್ರಾಯಪಟ್ಟರು.

ಅವರು ತಾಲ್ಲೂಕಿನ ವಜ್ರಳ್ಳಿಯ ಸರ್ವೋದಯ ಪ್ರೌಢಶಾಲೆಯ ಆವರಣದಲ್ಲಿ ಬುಧವಾರ ಸ್ಥಳೀಯ ಅರಣ್ಯ ಇಲಾಖೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಸರ್ವೋದಯ ಪ್ರೌಢಶಾಲೆಯ ಪರಿಸರ ಸಂವರ್ಧಿನಿ ಇಕೋ ಕ್ಲಬ್ ಸಂಯುಕ್ತವಾಗಿ ಏರ್ಪಡಿಸಿದ ವನಮಹೋತ್ಸವ ಕಾರ್ಯಕ್ರಮದಲ್ಲಿ ಹಣ್ಣಿನ ಗಿಡ ನೆಡುವ ಮೂಲಕ ಹಸಿರೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಭೆಯ ಅಧ್ಯಕ್ಷತೆವಹಿಸಿದ್ದ ಸರ್ವೋದಯ ಶಿಕ್ಷಣ ಸಮಿತಿಯ ಉಪಾಧ್ಯಕ್ಷ ಟಿ ಸಿ ಗಾಂವ್ಕರ್ ಮಾತನಾಡಿ
ಪಶ್ಚಿಮಘಟ್ಟಗಳಲ್ಲಿ ಅಪರೂಪದ ಅರಣ್ಯವಿರುವುದುವುದರಿಂದ ಜಗತ್ತಿಗೆಲ್ಲ ತನ್ನ ಸೋಜಿಗ ಇರಿಸಿಕೊಂಡಿದೆ. ಪರಿಸರಕ್ಕೆ ಅಸಹ್ಯವಾಗಿ ಬದುಕಬಾರದು. ಪ್ಲಾಸ್ಟಿಕ್ ನಮಗೆ ವಿಷವಾಗುತ್ತಿರುವ ಬಗ್ಗೆ ಎಚ್ಚರಿಕೆವಹಿಸಬೇಕಾಗಿದೆ.
ಪರಿಸರದ ಉಳುವಿಗೆ ನಮ್ಮ ಆಸಕ್ತಿ ದೃಢವಾಗಬೇಕು. ಪ್ರತಿ ಮನೆಯ ಸದಸ್ಯರು ಸುತ್ತಮುತ್ತಲಿನ ಕಾಡಿನ ರಕ್ಷಣೆಯ ಭಾಗವಾಗಬೇಕು. ಎಂದು ತಿಳಿಸಿದರು.

ಸ.ಶಿ.ಸಮಿತಿಯ ಗೌರವ ಕಾರ್ಯದರ್ಶಿ ಆರ್ ಎ ಭಟ್ಟ ತೋಟ್ಮನೆ ಮಾತನಾಡಿ ಪ್ರತಿಯೊಬ್ಬರೂ ತಮ್ಮ ಹುಟ್ಟು ಹಬ್ಬದ ದಿನ ಒಂದೊಂದು ಗಿಡಗಳನ್ನು ನೆಟ್ಟರೆ ಸಸ್ಯ ಸಂಪತ್ತು ವೃದ್ಧಿಯಾಗಬಲ್ಲದು. ಅಂತಹ ಹಸಿರು ಸಂಕಲ್ಪಕ್ಕೆ ನಾವು ಅಣಿಯಾಗೋಣ ಎಂದರು.
ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಇಡಗುಂದಿ ವಲಯ ಮೇಲ್ವಿಚಾರಕ ವೆಂಕಟೇಶ ಗೌಡ ,ಉಪ ವಲಯ ಅರಣ್ಯಾಧಿಕಾರಿ ಪ್ರಶಾಂತ, ಗಸ್ತು ಅರಣ್ಯ ಪಾಲಕರಾದ ಗೌಡಪ್ಪ ಸುಳ್ಳದ್, ದತ್ತಾತ್ರೇಯ, ವನಪಾಲಕ ಶಿವಣ್ಣ ಉಪಸ್ಥಿತರಿದ್ದರು.


ದಿಶಾ ಹೆಬ್ಬಾರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಮುಖ್ಯಾಧ್ಯಾಪಕ ಎಮ್ ಕೆ ಭಟ್ಟ ಸ್ವಾಗತಿಸಿದರು. ಪರಿಸರ ಸಂವರ್ಧಿನಿ ಇಕೋ ಕ್ಲಬ್ ನ ಮಾರ್ಗದರ್ಶಕಿ, ಶಿಕ್ಷಕಿ ಸರೋಜಾ ಪಿ ಭಟ್ಟ ,ಕಾರ್ಯಕ್ರಮ ನಿರ್ವಹಿಸಿದರು. ಗ್ರಾಮಾಭಿವೃದ್ಧಿ ಯೋಜನೆಯ ರಾಜೇಶ್ವರಿ ಹೆಗಡೆ ಕೊನೆಯಲ್ಲಿ ವಂದಿಸಿದರು.
