Breaking News

ಕಾಡಿನ ಕೌತುಕ ಕಾಪಾಡೋಣ- ಆರ್.ಎಫ್.ಒ ಶಿಲ್ಪಾ ನಾಯ್ಕ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ

ಪ್ರತಿಧ್ವನಿ,ಯಲ್ಲಾಪುರ : ಪ್ರಕೃತಿಯ ಜೊತೆ ಬದುಕಲು ನಾವು ಕಲಿತರೆ ಉತ್ತಮ ಫಲ ಸಿಗಬಲ್ಲದು.
ಪರಿಸರದ ಮೇಲಿನ ಕಾಳಜಿ ನಮ್ಮ ಕಾಳಜಿಯೂ ಹೌದು. ನಮ್ಮ ಸುತ್ತ ಮುತ್ತಲಿನ ಕಾಡಿನ ಜೀವ ವೈವಿಧ್ಯತೆ ಯನ್ನು ಅರಿಯುವ ಮೂಲಕ ಈ ನೆಲದ ಶ್ರೇಷ್ಠತೆಯನ್ನು ಮುಂದಿನ ತಲೆಮಾರಿಗೆ ಪರಿಚಯಿಸಿವಂತೆ ಕಾಡಿನ ಕೌತುಕವನು ಕಾಪಿಡೋಣ. ಎಂದು ತಾಲ್ಲೂಕಿನ ಇಡಗುಂದಿ ವಲಯ ಅರಣ್ಯಾಧಿಕಾರಿ ಶಿಲ್ಪಾ ನಾಯ್ಕ ಅಭಿಪ್ರಾಯಪಟ್ಟರು.


ಅವರು ತಾಲ್ಲೂಕಿನ ವಜ್ರಳ್ಳಿಯ ಸರ್ವೋದಯ ಪ್ರೌಢಶಾಲೆಯ ಆವರಣದಲ್ಲಿ ಬುಧವಾರ ಸ್ಥಳೀಯ ಅರಣ್ಯ ಇಲಾಖೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಸರ್ವೋದಯ ಪ್ರೌಢಶಾಲೆಯ ಪರಿಸರ ಸಂವರ್ಧಿನಿ ಇಕೋ ಕ್ಲಬ್ ಸಂಯುಕ್ತವಾಗಿ ಏರ್ಪಡಿಸಿದ ವನಮಹೋತ್ಸವ ಕಾರ್ಯಕ್ರಮದಲ್ಲಿ ಹಣ್ಣಿನ ಗಿಡ ನೆಡುವ ಮೂಲಕ ಹಸಿರೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.


ಸಭೆಯ ಅಧ್ಯಕ್ಷತೆವಹಿಸಿದ್ದ ಸರ್ವೋದಯ ಶಿಕ್ಷಣ ಸಮಿತಿಯ ಉಪಾಧ್ಯಕ್ಷ ಟಿ ಸಿ ಗಾಂವ್ಕರ್ ಮಾತನಾಡಿ
ಪಶ್ಚಿಮಘಟ್ಟಗಳಲ್ಲಿ ಅಪರೂಪದ ಅರಣ್ಯವಿರುವುದುವುದರಿಂದ ಜಗತ್ತಿಗೆಲ್ಲ ತನ್ನ ಸೋಜಿಗ ಇರಿಸಿಕೊಂಡಿದೆ. ಪರಿಸರಕ್ಕೆ ಅಸಹ್ಯವಾಗಿ ಬದುಕಬಾರದು. ಪ್ಲಾಸ್ಟಿಕ್ ನಮಗೆ ವಿಷವಾಗುತ್ತಿರುವ ಬಗ್ಗೆ ಎಚ್ಚರಿಕೆವಹಿಸಬೇಕಾಗಿದೆ.
ಪರಿಸರದ ಉಳುವಿಗೆ ನಮ್ಮ ಆಸಕ್ತಿ ದೃಢವಾಗಬೇಕು. ಪ್ರತಿ ಮನೆಯ ಸದಸ್ಯರು ಸುತ್ತಮುತ್ತಲಿನ ಕಾಡಿನ ರಕ್ಷಣೆಯ ಭಾಗವಾಗಬೇಕು. ಎಂದು ತಿಳಿಸಿದರು.


ಸ.ಶಿ.ಸಮಿತಿಯ ಗೌರವ ಕಾರ್ಯದರ್ಶಿ ಆರ್ ಎ ಭಟ್ಟ ತೋಟ್ಮನೆ ಮಾತನಾಡಿ ಪ್ರತಿಯೊಬ್ಬರೂ ತಮ್ಮ ಹುಟ್ಟು ಹಬ್ಬದ ದಿನ ಒಂದೊಂದು ಗಿಡಗಳನ್ನು ನೆಟ್ಟರೆ ಸಸ್ಯ ಸಂಪತ್ತು ವೃದ್ಧಿಯಾಗಬಲ್ಲದು. ಅಂತಹ ಹಸಿರು ಸಂಕಲ್ಪಕ್ಕೆ ನಾವು ಅಣಿಯಾಗೋಣ ಎಂದರು.
ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಇಡಗುಂದಿ ವಲಯ ಮೇಲ್ವಿಚಾರಕ ವೆಂಕಟೇಶ ಗೌಡ ,ಉಪ ವಲಯ ಅರಣ್ಯಾಧಿಕಾರಿ ಪ್ರಶಾಂತ, ಗಸ್ತು ಅರಣ್ಯ ಪಾಲಕರಾದ ಗೌಡಪ್ಪ ಸುಳ್ಳದ್, ದತ್ತಾತ್ರೇಯ, ವನಪಾಲಕ ಶಿವಣ್ಣ ಉಪಸ್ಥಿತರಿದ್ದರು.


ದಿಶಾ ಹೆಬ್ಬಾರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಮುಖ್ಯಾಧ್ಯಾಪಕ ಎಮ್ ಕೆ ಭಟ್ಟ ಸ್ವಾಗತಿಸಿದರು. ಪರಿಸರ ಸಂವರ್ಧಿನಿ ಇಕೋ ಕ್ಲಬ್ ನ ಮಾರ್ಗದರ್ಶಕಿ, ಶಿಕ್ಷಕಿ ಸರೋಜಾ ಪಿ ಭಟ್ಟ ,ಕಾರ್ಯಕ್ರಮ ನಿರ್ವಹಿಸಿದರು. ಗ್ರಾಮಾಭಿವೃದ್ಧಿ ಯೋಜನೆಯ ರಾಜೇಶ್ವರಿ ಹೆಗಡೆ ಕೊನೆಯಲ್ಲಿ ವಂದಿಸಿದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರ ಪೊಲೀಸರ ಕಾರ್ಯ ಕ್ಷಮತೆ – ವರ್ಷದ ಹಿಂದಿನ ಡಕಾಯಿತಿ ಪ್ರಕರಣ ಆರೋಪಿಗಳು ಸ್ವತ್ತಿನ ಸಹಿತ ಅಂದರ್.!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ತಾಲೂಕಿನ ಅರಬೈಲ್ ಘಟ್ಟದಲ್ಲಿ ಕಾರು ಅಡ್ಡಗಟ್ಟಿ …

Leave a Reply

Your email address will not be published. Required fields are marked *