
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ

ಪ್ರತಿಧ್ವನಿ,ಯಲ್ಲಾಪುರ : ಪ್ರಸಕ್ತ ಸಾಲಿನಲ್ಲಿ ಮುಂಗಾರು ಪ್ರವೇಶ ತಡವಾಗಿದೆ ಇದರಿಂದ ರೈತರ ಕೃಷಿ ಚಟುವಟಿಕೆಗಳು ಎಂದಿನಂತೆ ನಡೆಯದೆ ತೊಡಕಾಗಿದೆ. ಈ ವೇಳೆಗೆ ಹೊಲ ಗದ್ದೆಗಳೆಲ್ಲ ಹಸಿರು ಸಿಂಗಾರದೊಂದಿಗೆ ಮದುವಣಗಿತ್ತಿಯಂತೆ ನಳನಳಿಸುತ್ತಿರಬೇಕಿತ್ತು. ಆದರೆ ತಾಲೂಕಿನ ಹೊಲಗದ್ದೆಗಳು ಮಳೆರಾಯನ ಆಗಮನಕ್ಕಾಗಿ ಮೊರೆ ಇಟ್ಟಂತಿದೆ.
ಸದ್ಯ ಬೀಳುತ್ತಿರುವ ಮಳೆಗೆ ಭೂಮಿ ಕೊಂಚ ತಂಪಾಗಿದೆ ಇಲ್ಲದಿದ್ದರೆ ಮಳೆ ಬೀಳುವುದಕ್ಕು ಮೊದಲು ಉಷ್ಣತೆಯಿಂದ ತೋಟಗಳೆಲ್ಲ ಒಣಗಿದಂತಾಗಿ ಸಿಂಗಾರದ ಅಡಿಕೆ ಮಿಳ್ಳೆಗಳೆಲ್ಲ ತೋಟದ ತುಂಬಾ ಉದುರಿ ಬಿದ್ದು ರೈತರು ಸಂಕಷ್ಟಕ್ಕೆ ಸಿಲುಕಿ ಸರ್ಕಾರದ ಪರಿಹಾರಕ್ಕು ಆಗ್ರಹಿಸಿದ್ದರು.

ಕೃಷಿ ಇಲಾಖೆ ಮಾಹಿತಿ ಪ್ರಕಾರ
ವಾಡಿಕೆ ಮಳೆ ಇಲ್ಲಿಯವರೆಗೆ 353 ಮಿ.ಮೀ ಬರಬೇಕಿತ್ತು ಆದರೆ ಬಂದಿರುವುದು 157 ಮಿ.ಮೀ ಮಳೆಯಾಗಿದೆ
ಒಟ್ಟಿನಲ್ಲಿ ವಾಡಿಕೆಗಿಂತ 61.14℅ ಮಳೆ ಕೊರತೆಯಾಗಿದೆ.
ಇದರಿಂದ ರೈತರ ಕೃಷಿ ಚಟುವಟಿಕೆ ಮೇಲೆ ಗಂಭೀರ ಪರಿಣಾಮ ಬೀರಿದೆ.
ತಾಲೂಕಿನಲ್ಲಿ 2424 ಹೆಕ್ಟೇರ್ ಪ್ರದೇಶದಲ್ಲಿ ಭತ್ತಬೆಳೆಯಬೇಕಿತ್ತು ಆದರೆ ಇನ್ನ 338 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಈ ಚಟುವಟಿಕೆಗಳು ನಡೆದಿದೆ.ಇನ್ನುಳಿದಂತೆ ಮೆಕ್ಕೆ ಜೋಳ 90 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆ 373 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲು ಸಿದ್ದತೆ ನಡೆದಿದೆ. ಒಟ್ಟಿನಲ್ಲಿ ತಾಲೂಕಿನ 2878 ಹೆಕ್ಟೇರ್ ಕೃಷಿ ಭೂಮಿಯಲ್ಲಿ 801 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಕೃಷಿ ಚಟುವಟಿ ನಡೆದಿರುವುದು ಭವಿಷ್ಯದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಅಲ್ಲ.
ಕೃಷಿ ಇಲಾಖೆಯಂತು ರೈತರಿಗೆ ಕಾಲಕಾಲಕ್ಕೆ ಮಾಹಿ ನೀಡಿ
ಬೆನ್ನಿಗೆ ನಿಂತು ಪ್ರೋತ್ಸಹಿಸಿಸುತ್ತಿದ್ದಾರೆ.
ಇನ್ನಾದರು ಮಳೆರಾಯ ಧರೆಗೆ ಸುರಿಯಲಿ ರೈತರ ಬವಣೆ ನೀಗಲಿ.

ಮುಂಗಾರು ತಡವಾಯಿತೆಂದು ಯಾವ ರೈತರು ಆತಂಕ ಪಡಬೇಕಿಲ್ಲ ಮುಂದೆ ಉತ್ತಮ ಮಳೆ ನಿರೀಕ್ಷೆ ಇದೆ. ಹಾಗು ರೈತರು ಅಲ್ಪಾವಧಿ ಬೆಳೆಯಕಡೆಗೆ ಗಮನ ಹರಿಸುವುದು ಸೂಕ್ತವಾಗಿದೆ. ಕಿರವತ್ತಿ ಮದನೂರು ಭಾಗದಲ್ಲಿ ಮೆಕ್ಕೆಜೋಳ ಬೆಳೆಯಲು ವಾತಾವರಣ ಉತ್ತಮವಾಗಿದ್ದು ರೈತರು ಗಮನಹರಿಸಬಹುದಾಗಿದೆ. ಈಗಾಗಲೆ ಬೀಜದ ಭತ್ತ ಕೊಂಡೊಯ್ದವರು ಮಡಿಕಟ್ಟಿ ಸಸಿ ಸಿದ್ದತೆಯಲ್ಲಿ ತೊಡಗಿಕೊಳ್ಳಬಹುದಾಗಿದೆ. ಮಳೆ ತಡವಾಗಿದಕ್ಕೆಬದೃತಿಗೆಡದೆ ಸಮಸ್ಯೆಗಳೇನೆ ಇದ್ದರು ಕೃಷಿ ಇಲಾಖೆಯಲ್ಲಿ ಮಾಹಿತಿ ಪಡೆಯಿರಿ. ಇಲಾಖೆ ಸದಾ ರೈತ ರೊಂದಿಗೆ ಇರಲಿದೆ.
ನಾಗರಾಜ ನಾಯ್ಕ್
ಸಹಾಯಕ ಕೃಷಿ ಅಧಿಕಾರಿ, ಯಲ್ಲಾಪುರ

ಕಾಡು ಪ್ರಾಣಿಗಳ ಕಾಟ ಮಳೆರಾಯನ ಆಟ ಇದು ಕೃಷಿಕರ ಬದುಕಿನೊಡನೆ ಚೆಲ್ಲಾಟ. ಮೊದಲೆ ತೋಟ ಗದ್ದೆ ಹೊಲಗಳಲ್ಲಿ ಮಂಗಗಳು, ಹಂದಿಗಳ ಕಾಟದಿಂದಾಗಿ ಬೆಳೆದ ಬೆಳೆ ಕೈ ಸೇರದೆ ತೊಂದರೆ ಅನುಭವಿಸುತ್ತಿದ್ದರೆ ಸಮಯಕ್ಕೆ ಸರಿಯಾಗಿ ಮಳೆಯಾಗದಿದ್ದರೆ ಬಡ ರೈತರ ಗೋಳು ಹೇಳತೀರದಾಗಿದೆ ಸರಿ ಪ್ರಮಾಣದ ಮಳೆಯಗದಿದ್ದರೆ ಮುಂದೆ ಗತಿ ಏನು ಎಂಬುವಂತಾಗಿದೆ.
ಗೋಪಾಲಕೃಷ್ಣ ಭಟ್ಟ ಕೃಷಿಕ ಯಲ್ಲಾಪುರ

