
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ

ಪ್ರತಿಧ್ವನಿ,ಯಲ್ಲಾಪುರ : ಕನ್ನಡ ಸಾಹಿತ್ಯ ಪರಿಷತ್ತು ಯಲ್ಲಾಪುರ ತಾಲೂಕ ಘಟಕದ ಲೆಕ್ಕಪತ್ರ ಪರಿಶೀಲನಾ ಸಭೆಯು ಘಟಕದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆಯಲ್ಲಿ ನಡೆಯಿತು.
ಸಾಹಿತ್ಯ ಸಮ್ಮೇಳನಕ್ಕೆ ಬಿಡುಗಡೆಯಾದ ಅನುದಾನ, ಸಂಸ್ಥಾಪನ ದಿನಾಚರಣೆಯ ಖರ್ಚು ವೆಚ್ಚದ ಮಾಹಿತಿ ಹಾಗೂ ನಿರ್ವಹಣಾ ಅನುದಾನದ ಕುರಿತು ಖರ್ಚು ಭರಿಸಿದ ಮಾಹಿತಿಯನ್ನು ಜಿಲ್ಲಾ ಕಾರ್ಯದರ್ಶಿ ಪಿ.ಆರ್.ನಾಯ್ಕ ರವರಿಗೆ ಪರಿಶೀಲನೆ ಸಂದರ್ಭದಲ್ಲಿ ನೀಡಿದರು.
ಮಾಹಿತಿಗಳನ್ನು ಪರಿಶೀಲಿಸಿ ತಾಲೂಕಾ ಘಟಕದಲ್ಲಿ ನಿರ್ವಹಿಸಬೇಕಾದ ವಿವಿಧ ವಹಿಗಳ ಕುರಿತು ಅಧ್ಯಕ್ಷರೊಂದಿಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಆರ್.ಡಿ.ಹೆಗಡೆ ಆಲ್ಮನೆಯವರು ಉಪಸ್ಥಿತರಿದ್ದರು.




