
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ: ನಿರ್ಜೀವ ವಸ್ತುಗಳನ್ನು ಕೊಳ್ಳುವಾಗ ಅದರ ಗುಣಮಟ್ಟ ಮತ್ತು ಬಾಳಿಕೆಯ ಬಗ್ಗೆ ಕೂಲಂಕಷವಾಗಿ ಪರೀಕ್ಷಿಸುವ ನಾವು ದೇಶದ ಅಥವ ರಾಜ್ಯದ ಚುಕ್ಕಾಣಿ ಹಿಡಿದು ನಮ್ಮ ಭವಿಷ್ಯದ ದಿನಗಳನ್ನು ನಿರ್ಧರಿಸುವ ಶಾಸಕರನ್ನು ಅದೆಷ್ಟುಬಾರಿ ವಿಮರ್ಶಿಸಿ ಪರಿಶೀಲಿಸಿ ನಿರ್ಣಯ ತೆಗೆದುಕೊಳ್ಳಬೇಕಿದೆ. ಈ ದಿಸೆಯಲ್ಲಿ ಸಾಮನ್ಯರಲ್ಲಿ ಸಾಮಾನ್ಯರಂತೆ ಪ್ರತಿಯೊಬ್ಬ ನಾಗರಿಕನ ಕಷ್ಟ ಕಾರ್ಪಣ್ಯಗಳನ್ನು ನೇರವಾಗಿ ಹೇಳಿಕೊಳ್ಳಬಲ್ಲ ವ್ಯವಸ್ಥೆ ಕಲ್ಪಿಸಿರುವ ರಾಜ್ಯದ ಏಕೈಕ ನಾಯಕರೆಂದರೆ ಅದು ಸಚಿವ ಹೆಬ್ಬಾರ್ ಅವರಾಗಿದ್ದಾರೆ ಇಂತಹ ಜನಪರ ನಾಯಕರನ್ನು ಕ್ಷೇತ್ರದ ಜನತೆ ತಮ್ಮ ಆಶಿರ್ವಾದ ಸಮಾನ ಪವಿತ್ರ ಮತ ನೀಡುವ ಮೂಲಕ ಮತ್ತೊಮ್ಮೆ ತಮ್ಮ ಸೇವೆಗೆ ಅವಕಾಶ ಕಲ್ಪಿಸಬೇಕಿದೆ. ಪಟ್ಟಣದ ಅಭಿವೃದ್ಧಿ ಕಾರ್ಯಗಳೆ ಅವರ ಸಾಧನೆ ಸೇವೆ ಹೇಳಬಲ್ಲದ್ದಾಗಿದೆ ಮತ್ತು ವಿಶೇಷವಾಗಿ ಮಂಜುನಾಥ ನಗರದ ಅಭಿವೃದ್ಧಿ ಕಾರ್ಯಗಳೆ ಅವರಿಗೆ ಶ್ರೀರಕ್ಷೆಯಾಗಲಿದೆ ಎಂದು ಯುವ ನಾಯಕ ವಿವೇಕ್ ಹೆಬ್ಬಾರ್ ಹೇಳಿದರು.

ಅವರು ಪಟ್ಟಣದ ಮಂಜುನಾಥ ನಗರ ವಾಡ್೯ನಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ 18 ತುಂಬಿ ಹೊಸ ಮತದಾರರಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯ ಮತದಾನದ ಹಕ್ಕನ್ನು ತಮ್ಮದಾಗಿಸಿಕೊಂಡ ಯುವ ಮತದಾರರನ್ನು ವಿವೇಕ್ ಹೆಬ್ಬಾರ್ ಗುಲಾಬಿ ಹೂ ನೀಡಿ ಸ್ವಾಗತಿಸಿ ಮಾತನಡಿದರು.

ಭಾರತ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು ಅಂಬೇಡ್ಕರ್ ರಚಿತ ಸಂವಿಧಾನದ ಅಡಿಯಲ್ಲಿ ಚುನಾವಣೆಗಳು ನಡೆಯುತ್ತಿದ್ದು ದೇಶನಡೆಸುವ ಉತ್ತಮರನ್ನು ಆಯ್ಕೆ ಮಾಡುವ ಪರಮಾಧಿಕಾರ ಮತದಾನವೆಂಬ ಕಾರ್ಯದಲ್ಲಿ ಇಟ್ಟಿದ್ದು 18 ತುಂಬಿದ ಯುವ ಮತದಾರರು ದೇಶದ ರಾಜ್ಯದ ಉಜ್ವಲ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಮತ ಚಲಾಯಿಸಬೇಕಿದೆ ಪರಮ ಪವಿತ್ರ ಪ್ರಜಾಪ್ರಭುತ್ವಕ್ಕೆ ಪಾದಾರ್ಪಣೆ ಮಾಡಿದ ತಮಗೆಲ್ಲಾ ಶುಭ ಸ್ವಾಗತ ಎಂದು ನೂತನ ಮತದಾರರಾದ ಯುವಕರಿಗೆ ಗುಲಾಭಿ ನೀಡಿ ಸ್ವಾಗತಿಸಿದರು.

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಚುನಾವಣಾ ಕಾವು ಏರುತ್ತಿದ್ದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಚುನಾವಣೆಯ ರಂಗು ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಕ್ಷೇತ್ರದಾದ್ಯಂತ ಸಂಚರಿಸುತ್ತಿರುವ ಸಚಿವ ಹೆಬ್ಬಾರ್ ಬೆನ್ನಿಗೆ ನಿಂತಿರುವ ಅತಿ ದೊಡ್ಡ ಶಕ್ತಿ ಎಂದರೆ ಪುತ್ರ ವಿವೇಕ್ ಹೆಬ್ಬಾರ್. ತಂದೆಯಂತೆಯೆ ಜನರೊಂದಿಗೆ ಬೆರೆಯುತ್ತಿರುವ ವಿವೇಕ್ ವಿನೂತನ ಮಾದರಿಯಲ್ಲಿ ಮತಪ್ರಚಾರದೊಂದಿಗೆ ಗಮನ ಸೆಳೆದಿದ್ದಾರೆ.

ಮಂಜುನಾಥ ನಗರ ಸುತ್ತಮುತ್ತಲಿನ ನೂರಾರು ಸಂಖ್ಯೆಯ ಸಾರ್ವಜನಿಕರು ಕಾರ್ಯಕರ್ತರು ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.
