
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ಅಂದು ಕಾಂಗ್ರೆಸ್ ಪಕ್ಷಕ್ಕೆ ಕೈ ಕೊಟ್ಟು ಹೋದ ಹೆಬ್ಬಾರ್ ಅವರನ್ನು ಪುನಃ ಪಕ್ಷಕ್ಕೆ ಸೇರಿಸಿ ಶಾಸಕರನ್ನಾಗಿಸುವುದಕ್ಕೆ ನಮ್ಮ ವಿರೋದವಿದೆ ಅಂತಹ ಸನ್ನಿವೇಶ ಬಂದರೆ ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಎಂಎಲ್ಎ ಬೇಡವೆ ಬೇಡ ನಾವೆ ಅವರ ವಿರುದ್ದ ಪ್ರಚಾರಕ್ಕಿಳಿಯಲಿದ್ದೇವೆ ಎಂಬ ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯ ವಿಡಿಯೋ ಒಂದು ಸಕತ್ ವೈರಲ್ ಆಗುತ್ತಿದೆ.
ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲವುದಿನಗಳಿಂದ ಕಾಂಗ್ರೆಸ್ ಘರ್ ವಾಪ್ಸಿ ವಿಚಾರದಲ್ಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಬಲವಾಗಿ ಕೇಳಿಬರುತ್ತಿದೆ ಆದರೆ ಹೆಬ್ಬಾರ್ ನಿರಾಕರಿಸುತ್ತಲೆ ಬರುತ್ತಿದ್ದಾರೆ.
ಈ ಮದ್ಯೆ ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಅಧ್ಯಕ್ಷ ಡಿ.ಎನ್.ಗಾಂವ್ಕರ್ ಅಧ್ಯಕ್ಷತೆಯಲ್ಲಿ ಪ್ರಮುಖರಾದ ಉಲ್ಲಾಸ್ ಶಾನಬಾಗ್, ರವಿನಾಯ್ಕ್ ಇಂಜಿನಿಯರ್, ಅನಿಲ್ ನಾಯ್ಕ್ ಇಡಗುಂದಿ, ಪ್ರಶಾಂತ ಸಭಾಹಿತ, ದಿಲೀಪ್ ರೋಕಡೆ ಹಾಗು ಇನ್ನಿತರ ಪ್ರಮುಖರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಕಾರ್ಯಕರ್ತರೊಬ್ಬರು ಎದ್ದುನಿಂತು ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆ ವಿಚಾರ ಪ್ರಸ್ಥಾಪಿಸಿ ಈ ರೀತಿ ಹೇಳಿದ್ದಾರೆ.
ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಚಾರ ನನ್ನ ಗಮನಕ್ಕು ಬಂದಿದೆ. ನಮ್ಮ ಪಕ್ಷದ ಕಚೇರಿಯಲ್ಲಿ ನಡೆದ ಸಭೆ ಪಕ್ಷದ ಸಂಘಟನೆಯ ಕುರಿತಾದ ಸಭೆಯಾಗಿತ್ತೆ ವಿನಃ ಬೇರೆ ಯಾವುದೆ ವಿಚಾರಕ್ಕಾಗಿ ನಡೆದ ಸಭೆಯಲ್ಲ ಆದರೆ ಸಭೆಯ ಮದ್ಯದಲ್ಲಿ ಕಾರ್ಯಕರ್ತರೊಬ್ಬರು ತಮ್ಮ ನೋವನ್ನು ಹೇಳಿದ್ದಂತು ಸತ್ಯ ಆದರೆ ನಮ್ಮ ಪಕ್ಷದಲ್ಲಿ ವರಿಷ್ಟರ ತೀರ್ಮಾನಕ್ಕೆ ತಲೆ ಬಾಗುವ ಸಂಸ್ಕೃತಿ ಇದ್ದು ಅವರ ತೀರ್ಮಾನಕ್ಕೆ ಬದ್ದರಾಗಿರುತ್ತೇವೆ.
ಡಿ.ಎನ್.ಗಾಂವ್ಕರ್
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ಯಲ್ಲಾಪುರ






