


ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ಸಂಬಂಧಗಳ ಗಟ್ಟಿತನ ಅರ್ಥಗರ್ಭಿತ ಬಾಂಧವ್ಯ ಭಾರತೀಯ ಸನಾತನ ಸಂಸ್ಕೃತಿಯೊಂದಿಗೆ ಬೆರೆತು ಬಂದ ಸಹೋದರತ್ವ ಬಾಂಧವ್ಯದ ಶ್ರೀರಕ್ಷೆಯ ಬಂಧನವಾದ “ರಕ್ಷಾ ಬಂಧನ” ಹಬ್ಬವು ಸಂಸ್ಕಾರಯುತ ಆಲೋಚನೆಗೆ ಪ್ರೇರೇಪಣೆಯಾಗಿದೆ. ಇಂತಹ ಪರಂಪರೆ ಭವಿಷ್ಯದ ಪೀಳಿಗೆಗೆ ಚಾಚೂತಪ್ಪದೇ ವರ್ಗಾಯಿಸಬೇಕಿದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವಿದ್ಯಾಲಯ, ಶಾರದಾಗಲ್ಲಿ ಘಟಕದ ಶಿವಲೀಲಾ ಅಕ್ಕನವರು ಹೇಳಿದರು.

ಅವರು ಪಟ್ಟಣದ ಶಾರದಾಗಲ್ಲಿಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವಿದ್ಯಾಲಯದ ಘಟಕದಲ್ಲಿ ಹಮ್ಮಿಕೊಳ್ಳಲಾದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಪತ್ರಕರ್ತರಿಗೆ ರಾಖಿ ಕಟ್ಟಿ ಶುಭಕೋರಿದರು.

ಹಿರಿಯ ಪತ್ರಕರ್ತ ಶಂಕರ ಭಟ್ಟ ತಾರೀಮಕ್ಕಿ ಮಾತನಾಡಿ , ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವಿದ್ಯಾಲಯದೊಂದಿಗಿನ ಸಂಬಂಧ ಕಳೆದೆರಡು ದಶಕಗಳಿಂದಲೂ ಉತ್ತಮವಾಗಿದ್ದು ಸಂಸ್ಕಾರಯುತ ಕಾರ್ಯಕ್ರಮಗಳೊಂದಿಗೆ ಆದ್ಯಾತ್ಮದ ಸೇವೆ ಸಲ್ಲಿಸುತ್ತಿರುವ ಸಹೋದರಿಯರ ಕಾರ್ಯ ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ವಾಣಿಶ್ರೀ ಅಕ್ಕನವರು ಸೇರಿದಂತೆ ಪತ್ರಕರ್ತರಾದ ಸುಬ್ರಾಯ ಬಿದ್ರೆಮನೆ, ಶ್ರಿಧರ ಅಣಲಗಾರ, ವಿಶ್ವೇಶ್ವರ ಗಾಂವ್ಕರ, ಕೇಬಲ್ ನಾಗೇಶ್ ಉಪಸ್ಥಿತರಿದ್ದು ರಾಖಿ ಸ್ವೀಕರಿಸಿದರು.
