
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ : ಕದಂಬರ ಕಾಲದಲ್ಲಿ ಪ್ರಸಿದ್ದಿ ಪಡೆದ ಧಾರ್ಮಿಕ ಕ್ಷೇತ್ರವಾಗಿದ್ದ ಯಲ್ಲಾಪುರದ ಈಶ್ವರ ಸಾನಿದ್ಯ ನಂಬಿ ಬಂದ ಭಕ್ತರ ಇಷ್ಟಾರ್ಥ ನೆರವೇರಿಸುವ ಪುಣ್ಯ ಕ್ಷೇತ್ರವಾಗಿದೆ. ಕಾಲ ಬದಲಾಗುತ್ತ ಬಂದಂತೆ ವಿಗ್ರಹ ಬಿನ್ನವಾಗಿದ್ದು ಪ್ರಸಕ್ತ ದೇವಾಲಯದ ಜವಬ್ದಾರಿ ಹೊತ್ತಿರುವ ಆಡಳಿತ ಮಂಡಳಿ ದೇವರ ಅಪ್ಪಣೆ ಪಡೆದು ವಿಗ್ರಹಗಳನ್ನು ಪುನರ್ ಪ್ರತಿಷ್ಟಾಪಿಸುವ ದೃಢ ಸಂಕಲ್ಪ ಹೊಂದಿದ್ದು ಮೇ,8,9,10 ಮೂರುದಿನಗಳ ಧಾರ್ಮಿಕ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದು ಆಡಳಿತ ಮಂಡಳಿ ಅಧ್ಯಕ್ಷ ಶೇಖರ್ ಶೇಟ್ ಹೇಳಿದರು.


ಅವರು ಪಟ್ಟಣದ ಗುಡಿಗಾರ ಕಲಾಕೇಂದ್ರದಲ್ಲಿ ಈಶ್ವರ ದೇವಸ್ಥಾನದ ವಿಗ್ರಹಗಳ ಪುನರ್ ಪ್ರತಿಷ್ಟಾಪನೆ ಕಾರ್ಯಕ್ರಮದ ಕುರಿತು ಹಮ್ಮಿಕೊಳ್ಳಲಾದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

ಗತಕಾಲದ ಧಾರ್ಮಿಕ ವೈಭವವನ್ನು ಮತ್ತೆ ಕಾಣುವ ಪ್ರಯತ್ನದಲ್ಲಿ ಕ್ರಿಯಾಶೀಲ ಚಟುವಟಿಕೆ ನಡೆಸಲಾಗುತ್ತಿದ್ದು ಭಕ್ತಾಧಿಗಳ ಸಹಕಾರ ಅವಶ್ಯವಾಗಿದೆ ಎನ್ನುವುದನ್ನು ಆಡಳಿತ ಮಂಡಳಿ ಖಜಾಂಚಿ ಸಂತೋಷ ಬಿಕ್ಕು ಗುಡಿಗಾರ, ದೇವಾಲಯದ ಪ್ರಧಾನ ಅರ್ಚಕ ನಾಗೇಂದ್ರ ಭಟ್, ಪ್ರಧಾನ ಕಾರ್ಯದರ್ಶಿ ಶಿವಪ್ರಕಾಶ್ ಕವಳಿ ಸದಸ್ಯ ನಾಗರಾಜ್ ಮದ್ಗುಣಿ ವಿವರಿಸಿದರು.

ಈ ಸಂದರ್ಭದಲ್ಲಿ ಪುನರ್ ಪ್ರತಿಷ್ಟಾಪನ ಮಹೋತ್ಸವದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಲಾಯಿತು. ಪಟ್ಟಣ ಪಂಚಾಯತ್ ಸದಸ್ಯ ಆದಿತ್ಯ ಗುಡಿಗಾರ್, ಘನಶ್ಯಾಮ ವರ್ಣೇಕರ್, ಅರುಣ್ ಬಿಕ್ಕು ಗುಡಿಗಾರ, ಶ್ಯಾಮ ಆಚಾರಿ ಉಪಸ್ಥಿತರಿದ್ದರು.





