

ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನ ಉಮ್ಮಚ್ಗಿ ಪಂಚಾಯತ ವ್ಯಾಪ್ತಿಯ ಗ್ರಾಮಗಳಲ್ಲಿ ಎಳೆ ಅಡಿಕೆಗಳನ್ನೇ ತಿಂದು ರೈತರಿಗೆ ಅಪಾರ ಪ್ರಮಾಣದ ನಷ್ಟ ಉಂಟು ಮಾಡುತ್ತಿರುವ ಬಿಳಿ ಮಂಗಗಳ ಹತೋಟಿಗಾಗಿ ಮಂಚೀಕೇರಿ ಅರಣ್ಯಾಧಿಕಾರಿ ಅವರನ್ನು ಭೇಟಿ ಮಾಡಿ ರೈತರು ಮನವಿಯನ್ನು ಸಲ್ಲಿಸಿದರು.

ಉಮ್ಮಚ್ಗಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಜಿ.ಭಟ್ಟ ಸಂಕದಗುಂಡಿ ಮತ್ತು ತೋಟದಕಲ್ಲಳ್ಳಿಯ ಪ್ರಗತಿಪರ ರೈತ ವೆಂಕಟರಮಣ ಹೆಗಡೆ ಇವರ ನೇತ್ರತ್ವದಲ್ಲಿ ಅರಣ್ಯಾಧಿಕಾರಿಗಳನ್ನು ಭೇಟಿಯಾದ ಈ ತಂಡದಲ್ಲಿ ಉದಯ ಭಟ್ಟ ಕಲ್ಲಳ್ಳಿ, ನಾಗ್ಪತಿ ಹೆಗಡೆ ಶೀಗೆಮನೆ, ಸುಬ್ರಾಯ ಭಾಸ್ಕರ ಹೆಗಡೆ ಕನೇನಳ್ಳಿ, ಜಿ.ಟಿ.ಹೆಗಡೆ, ಪರಮೇಶ್ವರ ಹೆಗಡೆ, ಕೃಷ್ಣ ಹೆಗಡೆ, ವೆಂಕಣ್ಣ ಹೆಗಡೆ, ಸತೀಶ ಹೆಗಡೆ, ಉಮ್ಮಚ್ಗಿ ಗ್ರಾ.ಪಂ.ಸದಸ್ಯ ಗ.ರಾ.ಭಟ್ಟ ಮೊದಲಾದವರು ಉಪಸ್ಥಿತರಿದ್ದರು.

ರೈತರ ಮನವಿಯನ್ನು ಆಲಿಸಿದ ಮಂಚೀಕೇರಿ ವಲಯ ಅರಣ್ಯಾಧಿಕಾರಿ ಅಮಿತ್ ಅವರು ಈ ಸಂದರ್ಭದಲ್ಲಿ ಮಾತನಾಡಿ, ವಿಷಯವನ್ನು ಮೇಲಧಿಕಾರಿಗಳ ಗಮನಕ್ಕೆ ತಂದು, ಅವರ ಮಾರ್ಗದರ್ಶನದಂತೆ ಇನ್ನೊಂದು ವಾರದೊಳಗೆ ಮಂಗಗಳಿಂದ ಬೆಳೆ ಹಾನಿ ಅನುಭವಿಸುತ್ತಿರುವ ಉಮ್ಮಚ್ಗಿ ಭಾಗದ ರೈತರನ್ನು ಭೇಟಿ ಮಾಡಿ ಸೂಕ್ತ ಪರಿಶೀಲನೆ ಮಾಡುವುದಾಗಿ ತಿಳಿಸಿದರು.

