
ಪ್ರತಿಧ್ವನಿ,ಯಲ್ಲಾಪುರ : ಪಟ್ಟಣ ಬಾಳಗಿಮನೆ ಮಾಗೋಡು ಕ್ರಾಸ್ ನಿವಾಸಿ ಪ್ರಮೋದ ಮಹಾಬಲೇಶ್ವರ ನಾಯ್ಕ ( 49) ಹೃದಯಾಘಾತದಿಂದ ನಿಧನರಾಗಿರುತ್ತಾರೆ.
ಪ್ರಮೋದ ಸುಮಾರು 10 ಕ್ಕು ಹೆಚ್ಚು ವರ್ಷಗಳಿಂದ ಯಲ್ಲಾಪುರ ತಾಲೂಕು ಸರ್ಕಾರಿ ಆಸ್ಪತ್ರೆ ಬುಲೆನ್ಸ್ ಚಾಲಕನಾಗಿ ಉತ್ತಮ ಸೇವೆ ಸಲ್ಲಿಸಿದ್ದರು. ಕಳೆದ ಕೆಲವು ವರ್ಷಗಳಿಂದ ಮನೆಯ ಹತ್ತಿರದಲ್ಲೆ ವಾಟರ್ ಸರ್ವಿಸ್ ಸೆಂಟರ್ ನಡೆಸುತ್ತ ಜೀವನ ಸಾಗಿಸುತ್ತಿದ್ದರು.
ಕೊರೊನ ಸಂಕಷ್ಟದ ಸಮಯದಲ್ಲಿ ಕೆಲವು ಸೋಂಕಿತರನ್ನು ಮುಟ್ಟಲು ಭಯಪಡುವ ಸಮಯದಲ್ಲಿ ಮಾನವೀಯತೆಯಿಙದ ಉಪಚರಿಸಿ. ಆಂಬುಲೆನ್ಸ್ ನಲ್ಲಿ ಕರೆತರುವುದು ಆಕಸ್ಮಿಕ ಸಾವನಪ್ಪಿದವರ ಮುಕ್ತಿ ಕಾರ್ಯದಲ್ಲು ಯಾವುದಕ್ಕು ಅಂಜದೆ ಸಹಾಯಕ್ಕೆ ಮುಂದೆ ಬರುವ ಉತ್ತಮ ಮಾನವೀಯ ಮೌಲ್ಯದ ವ್ಯಕ್ತಿಯಾಗಿದ್ದರು.
ಗುರುವಾರ ನಿಧನರಾಗಿದ್ದು ಹೆಂಡತಿ, ಒರ್ವ ಮಗಳು ಹಾಗು ಅಪಾರ ಬಂಧು ಬಳಗವನ್ನು ಅಗಲಿರುತ್ತಾರೆ.
ಆಂಬುಲೆನ್ಸ್ ಚಾಲಕ ಪ್ರಮೋದನ ಸಾವಿಗೆ ಯಲ್ಲಾಪುರ ಸರ್ಕಾರಿ ಆಸ್ಪತ್ರೆ ಎಲ್ಲಾ ಸಿಬ್ಬಂದಿಗಳು ಹಾಗು ಆಂಬುಲೆನ್ಸ್ ಚಾಲಕರ ಬಳಗ ಕಂಬನಿ ಮಿಡಿದಿದೆ.