

ಪ್ರತಿಧ್ವನಿ,ಯಲ್ಲಾಪುರ : ಯಲ್ಲಾಪುರ ವಿಭಾಗದ ಅರಣ್ಯ ಇಲಾಖೆ ವತಿಯಿಂದ ಸೋಮವಾರ ಮಾದ್ಯಮಗಳಿಗಾಗಿ ” ಸಸ್ಯ ಕ್ಷೇತ್ರ ದರ್ಶನ ” ಎಂಬ ತಮ್ಮ ವಿಭಾಗದ ವ್ಯಾಪ್ತಿಯಲ್ಲಿ ಬೆಳೆದ ಸಸಿಗಳ ಸಂಪೂರ್ಣ ಮಾಹಿತಿ ನೀಡುವ ವಿನೂತನ ಕಾರ್ಯ ಹಮ್ಮಿಕೊಳ್ಳಲಾಗಿತ್ತು.

ಯಲ್ಲಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಜಿಹೆಗಡೆ ಮಾತನಾಡಿ ರಾಜ್ಯಾದ್ಯಂತ ಅರಣ್ಯ ಇಲಾಖೆ ಅಡಿಯಲ್ಲಿ 2023-24 ನೆ ಸಾಲಿನಲ್ಲಿ 5 ಕೋಟಿ ಸಸಿಗಳನ್ನು ನೆಡುವ ಗುರಿ ಹೊಂದಿದ್ದು ಯಲ್ಲಾಪುರ ವಿಭಾಗದಿಂದ 9.95 ಲಕ್ಷ ಸಸಿಗಳನ್ನು ನೆಡುವ ಪಣತೊಟ್ಟಿದ್ದೇವೆ.

ಹಸಿರು ಕರ್ನಾಟಕ ಯೋಜನೆ ಅಡಿಯಲ್ಲಿ ಬೀಜ ಬಿತ್ತನೆ ಅಭಿಯಾನ ಹಮ್ಮಿಕೊಂಡಿದ್ದು ಶಾಲಾ ಮಕ್ಕಳಿಂದ ಹಿಡಿದು ವಿವಿಧ ಸಂಘ ಸಂಸ್ಥೆಗಳ ಸಾರ್ವಜನಿಕರ ಸಹಕಾರದಿಂದ ಯಶಸ್ವಿಗೊಳಿಸಲು ಪ್ರಯತ್ನ ಸಾಗಿದೆ.
ವಾತವರಣಕ್ಕೆ ಪೂರಕವಾದ ಸಸ್ಯಗಳನ್ನೆ ಬೆಳೆದಿದ್ದು ಅರಣ್ಯ ಇಲಾಖೆಯ ಸರ್ವ ಪ್ರತ್ನಕ್ಕೆ ನಾಗರಿಕರು ಸಹಕರಿಸಬೇಕಿದೆ ಎಂದರು.

ತಾಲೂಕಿನಲ್ಲಿ 6 ವಲಯಗಳಿಂದ 9 ಸಸ್ಯ ಪಾಲನ ಕ್ಷೇತ್ರಗಳಿದ್ದು಼ ಸ್ಥಳೀಯ ಹವಾಮಾನಕ್ಕೆ ಹೊಂದಿಕೆಯಾಗುವ 9.95 ಲಕ್ಷ ಸಸಿಗಳನ್ನು ಬೆಳೆಸಲಾಗಿದೆ.

ಪಟ್ಟಣದ ಸಬಗೇರಿ ಸಸ್ಯ ಕ್ಷೇತ್ರದಲ್ಲಿ ಸಸ್ಯಗಳ ಕುರಿತು ಮಹಿತಿ ನೀಡಿದರು.

ಈ ಸಂದರ್ಭದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಆನಂದ್ ಹೆಚ್.ಎ ಮತ್ತು ಹಿಮವತಿ ಭಟ್, ವಲಯ ಅರಣ್ಯಾಧಿಕಾರಿ ಎಲ್.ಎ.ಮಠ, ಉಪ ವಲಯ ಅರಣ್ಯಾಧಿಕಾರಿಗಳಾದ ಸಂಜಯ್ ಬರಗೋಳಿ ಅಲ್ತಾಫ್ ಹಾಗೂ ಇನ್ನಿತರ ಅರಣ್ಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
