
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿಯಲ್ಲಾಪುರ : ಕಾಂಗ್ರೆಸ್ ಪಕ್ಷ ಬಡವರ ಪಕ್ಷ ಇನ್ನೂ ನಾಲ್ಕು ವಾರಗಳಲ್ಲಿ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಬರುವುದು ನಿಶ್ಚಿತ, ಕಿರವತ್ತಿಯ ಜನತೆ ಗುಂಡಾಗಿರಿಯನ್ನು ಕಿತ್ತೋಗೆದು ಗಾಂಧಿಗಿರಿ ವ್ಯಕ್ತಿತ್ವದ ವಿ.ಎಸ್ ಪಾಟೀಲ್ ಅವರಿಗೆ ತಾವೆಲ್ಲರೂ ಹೆಚ್ಚಿನ ಮತಗಳಿಂದ ಆರಿಸಿ ತರಬೇಕೆಂದು ಮಾಜಿ ಸಚಿವ ಸಂತೋಷ ಲಾಡ್ ಹೇಳಿದರು.

ಅವರು ತಾಲೂಕಿನ ಕಿರವತ್ತಿ ಘಟಕದ ಹೊಸಳ್ಳಿಯ ಮಾರುತಿ ಮಂದಿರ ಮೈದಾನದಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಅಭ್ಯರ್ಥಿ ವಿ.ಎಸ್ ಪಾಟೀಲ ಪರ ಮತ ಯಾಚಿಸುತ್ತಾ ಮಾತನಾಡಿದರು.

ನನ್ನ ಅಧಿಕಾರ ಅವಧಿಯಲ್ಲಿ ಕಿರವತ್ತಿ ಪಂಚಾಯತಗೆ ೧೪೦೦ ಮನೆ ನೀಡಿದ್ದೆನೆ ಹಾಗೂ ಮೂಲಭೂತ ಸೌಕರ್ಯದ ಕಡೆ ಹೆಚ್ಚಿನ ನಿಗಾ ವಹಿಸಿ ಕ್ಷೇತ್ರಕ್ಕೆ ಅನುದಾನ ತಂದು ಕಾಮಗಾರಿಗಳನ್ನು ಮಾಡಿಸಿದ್ದೇನೆ. ಮತ್ತೊಮ್ಮೆ ಕ್ಷೇತ್ರದ ಜನರ ಸೇವೆ ಮಾಡುವ ಅವಕಾಶ ನೀಡಬೇಕೆಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಪಾಟೀಲ್ ಮತದಾರರಲ್ಲಿ ವಿನಂತಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ ಎನ್ ಗಾಂವ್ಕರ , ಪ್ರಮುಖರಾದ ಶ್ರೀನಿವಾಸ ಭಟ್ ಧಾತ್ರಿ, ಎಚ್.ಎಂ ನಾಯ್ಕ, ಕೃಷ್ಣಾ ಹಿರೇಹಳ್ಳಿ, ದಿಲೀಪ್ ರೋಖಡೆ, ಪ್ರಶಾಂತ ಸಬಾಹಿತ, ರವಿ ನಾಯ್ಕ ಇಂಜಿನಿಯರ್, ಎನ್.ಕೆ ಭಟ್ಟ ಮೆಣಸುಮನೆ, ಮಾಜಿ ಜಿಲ್ಲಾ ಪಂಚಾಯತ ಸದಸ್ಯ ರಾಘವೇಂದ್ರ ಭಟ್ ಹಾಗೂ ಪಕ್ಷದ ಪದಾಧಿಕಾರಿಗಳು, ಗ್ರಾಮ ಪಂಚಾಯತಿ ಸದಸ್ಯರು ಮತ್ತು ಮಾಜಿ ಸದಸ್ಯರು, ಕಾರ್ಯಕರ್ತರು ಮತ್ತು ಸಾರ್ವಜನಿಕರು ಉಪಸ್ಥಿತಿತರಿದ್ದರು..