Breaking News

ಮತಯಾಚನೆಗು ಮಿಗಿಲಾಗಿ ಮತದಾರರಲ್ಲಿ ಶಿಕ್ಷಣ ಜಾಗೃತಿಯ ಅರಿವು ಮೂಡಿಸುತ್ತಿರುವ ಶಿಕ್ಷಣ ಪ್ರೇಮಿ ಸಚಿವ ಹೆಬ್ಬಾರ್

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ

ಪ್ರತಿಧ್ವನಿ,ಯಲ್ಲಾಪುರ : ಕ್ಷೇತ್ರ ವ್ಯಾಪ್ತಿಯಲ್ಲಿ ಗೌಳಿ ಸಮುದಾಯ ಅತಿ ದೊಡ್ಡ ಸಮುದಾಯಗಳಲ್ಲಿ ಒಂದಾಗಿದ್ದು ನನ್ನ ರಾಜಕೀಯ ಜೀವನದ ಏಳಿಗೆಯಲ್ಲಿ ಅತಿ ದೊಡ್ಡ ಪಾತ್ರ ಗೌಳಿ ಸಮುದಾಯದವರಾಗಿದೆ. ಈ ಎಲ್ಲ ಹಿನ್ನೆಲೆಯಲ್ಲಿ ನಾನು ಅಧಿಕಾರದಲ್ಲಿದ್ದಾಗಲೂ ಇಲ್ಲದಿದ್ದಾಗಲೂ ಅವರೊಂದಿಗಿನ ಸಂಪರ್ಕ ಕಡಿಮೆ ಮಾಡಿಲ್ಲ. ಅಭಿವೃದ್ಧಿ ಕಾರ್ಯಗಳನ್ನೂ ಸಹ ಕೊರತೆ ಮಾಡಿಲ್ಲ. ಮುಂದೆಯೂ ನಿಮ್ಮೆಲ್ಲರ ಆಶೀರ್ವಾದದ ಮತಗಳಿಂದ ಮತ್ತೆ ವಿಧಾನಸಭೆ ಪ್ರವೇಶಿಸಿ ಕ್ಷೇತ್ರದ ಮತ್ತಷ್ಟು ಅಭಿವೃದ್ಧಿಗೆ ಪಣ ತೊಡಲಿದ್ದೇನೆ. ಈ ನನ್ನ ಜನಪರ ಯೋಜನೆಗಳ ಅನುಷ್ಠಾನದ ಯಜ್ಞಕ್ಕೆ ನಿಮ್ಮೆಲ್ಲರ ಹವಿಸ್ಸಿನ ರೂಪದ ಮತಗಳನ್ನು ದಾನ ಮಾಡಬೇಕಿದೆ ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.

ಚುನಾವಣೆಯಲ್ಲಿ ಕೇವಲ ಮತಯಾಚಿಸಿದರೆ ಸಾಕು ಎನ್ನುವ ಅಭ್ಯರ್ಥಿಗಳ ಮದ್ಯೆ ಇಲ್ಲೊಬ್ಬರು ಅಭ್ಯರ್ಥಿ ಶಿಕ್ಷಣದ ಮಹತ್ವ ಸಾರುತ್ತ ಅಕ್ಷರ ಸಂತರಾಗಿದ್ದಾರೆ ಅವರೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರಬೈಲ್ ಶಿವರಾಮ ಹೆಬ್ಬಾರ್.
ಅವರ ಮತಯಾಚನೆಯ ಭಾಷಣವನೊಮ್ಮೆ ಕೇಳಿ!!!

ಅವರು ತಾಲೂಕಿನ ಚಿಕ್ಕಮಾವಳ್ಳಿ, ಕೋಳಿಕೇರಿ ಹಾಗೂ ದೇಶಪಾಂಡೆ ನಗರದಲ್ಲಿ ಕಾರ್ಯಕರ್ತರ ಸಭೆಯೊಂದಿಗೆ ಮತದಾರರಲ್ಲಿ ಮತಯಾಚಿಸುತ್ತಾ ಹೇಳಿದರು.
ಕಳೆದ ಬಾರಿಗಿಂತ ಅತ್ಯಧಿಕ ಮತಗಳಿಂದ ಕ್ಷೇತ್ರದ ಜನರು ಆಶೀರ್ವದಿಸಿ ಗೆಲ್ಲಿಸುತ್ತಾರೆಂಬ ಅಚಲವಾದ ನಂಬಿಕೆ ಇದ್ದು ವಿರೋಧ ಪಕ್ಷದ ಸುಳ್ಳು ಭರವಸೆಗಳಿಗೆ ಮರುಳಾಗದೇ ಅಭಿವೃದ್ಧಿ ಪರ ಸರ್ಕಾರ ಸ್ಪಷ್ಟ ಬಹುಮತದ ಸರ್ಕಾರಕ್ಕಾಗಿ ಭಾರತೀಯ ಜನತಾಪಕ್ಷದ ಕಮಲದ ಗುರುತಿಗೆ ಮತ ಹಾಕಬೇಕೆಂದು ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಯಲ್ಲಾಪುರ ತಾಲೂಕು ಮಂಡಲಾಧ್ಯಕ್ಷ ಗೋಪಾಲಕೃಷ್ಣ ಎನ್ ಗಾಂವ್ಕರ್, ತಾ.ಪಂ ಮಾಜಿ ಅಧ್ಯಕ್ಷ ರವಿ ಕೈಟ್ಕರ್, ಪ್ರಮುಖರಾದ ಮಾಕು ಕೊಕರೆ, ನಾಗೇಶ್, ಮಹೇಶ್ ಕಾಸರಕರ, ಸ್ಥಳಿಯ ಕಾರ್ಯಕರ್ತರು, ಪ್ರಮುಖರು, ಸಾರ್ವಜನಿಕರು ಉಪಸ್ಥಿತರಿದ್ದರು.

ಚುನಾವಣ ಸಂದರ್ಭದಲ್ಲಿ ಕೇವಲ ತನ್ನ ಅಭಿವೃದ್ಧಿ ಕಾರ್ಯಗಳು ಮುಂದೆ ಹಾಕಿಕೊಳ್ಳುವ ಯೋಜನೆಗಳು. ವಿರೋಧ ಪಕ್ಷದವರ ಬಗ್ಗೆ ಟೀಕೆ ಜಾತಿ,ಮತ,ಧರ್ಮದ ವಿಚಾರಗಳನ್ನು ಅನವಶ್ಯಕ ವಾಗಿ ಎಳೆದುತಂದು ತನ್ನ ಲಾಭಕ್ಕಾಗಿ ಭಾಷಣಮಾಡುವವರ ಮದ್ಯೆ ಶಿವರಾಮ ಹೆಬ್ಬಾರ್ ವಿಬಿನ್ನರಾಗಿ ಕಾಣುತ್ತಾರೆ.
ರಾಜಕಾರಣದಲ್ಲಿ ಚುನಾವಣೆಗಳು ಬರುತ್ತವೆ ಹೋಗುತ್ತ ವೆ ಆದರೆ ಕ್ಷೇತ್ರದ ಜನರ ಒಳಿತಿನ ಬಗ್ಗೆ ಆಲೋಚಿಸಿ ಜಾಗೃತಿಯ ಮತುಗಳನ್ನಾಡುವುದು ಅಪರೂಪದಲ್ಲಿ ಅಪರೂಪವಾಗಿದ್ದು ತಾನೊಬ್ಬ ವಿಭಿನ್ನ ರಾಜಕಾರಣಿ ಮತ್ತು ಶಿಕ್ಷಣ ಪ್ರೇಮಿ ಎಂಬುದನ್ನು ಹೆಬ್ಬಾರ್ ತನ್ನ ನಡೆನುಡಿಯ ಮೂಲಕ ತೋರಿಸಿದ್ದು ನೆರೆದವರ ಸಂತಸಕ್ಕೆ ಕಾರಣವಾಗಿತ್ತು.

ಸೃಷ್ಟಿಕರ್ತ ಭಗವಂತ ಬಡವರಿಗಾಗಲಿ ಶ್ರೀಮಂತರಿಗಾಗಲಿ ಎರಡು ಕಣ್ಣುಗಳನ್ನು ನೀಡಿದ್ದು ಅಕ್ಷರ ಜ್ಞಾನ ಬೆಳೆಸಿಕೊಳ್ಳಬೇಕಿದೆ. ಗೌಳಿ ಸಮುದಾಯದಲ್ಲಿ ಶಿಕ್ಷಣದ ಕ್ರಾಂತಿಯಾಗಬೇಕು ಭವಿಷ್ಯದ ಪೀಳಿಗೆಯಲ್ಲಿ ಅತ್ಯಂತ ಬುದ್ದಿವಂತ ವಿದ್ಯಾವಂತ ಸಮಾಜ ಇದಾಗಬೇಕಿದೆ ಎಂಬುದು ಹೆಬ್ಬಾರ್ ಮನದಾಳದ ಮಾತಾಗಿತ್ತು. ಒಂದು ಸಾಲಿನಲ್ಲಿ ಮತ ಯಾಚಿಸುವುದು ಇನ್ನುಳಿದಷ್ಟು ಮಾತುಗಳೂ ಜಾಗೃತಿಯ ಮಾತುಗಳಾಗಿದ್ದವು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರ ಪೊಲೀಸರ ಕಾರ್ಯ ಕ್ಷಮತೆ – ವರ್ಷದ ಹಿಂದಿನ ಡಕಾಯಿತಿ ಪ್ರಕರಣ ಆರೋಪಿಗಳು ಸ್ವತ್ತಿನ ಸಹಿತ ಅಂದರ್.!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ತಾಲೂಕಿನ ಅರಬೈಲ್ ಘಟ್ಟದಲ್ಲಿ ಕಾರು ಅಡ್ಡಗಟ್ಟಿ …

Leave a Reply

Your email address will not be published. Required fields are marked *