
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ಕ್ಷೇತ್ರ ವ್ಯಾಪ್ತಿಯಲ್ಲಿ ಗೌಳಿ ಸಮುದಾಯ ಅತಿ ದೊಡ್ಡ ಸಮುದಾಯಗಳಲ್ಲಿ ಒಂದಾಗಿದ್ದು ನನ್ನ ರಾಜಕೀಯ ಜೀವನದ ಏಳಿಗೆಯಲ್ಲಿ ಅತಿ ದೊಡ್ಡ ಪಾತ್ರ ಗೌಳಿ ಸಮುದಾಯದವರಾಗಿದೆ. ಈ ಎಲ್ಲ ಹಿನ್ನೆಲೆಯಲ್ಲಿ ನಾನು ಅಧಿಕಾರದಲ್ಲಿದ್ದಾಗಲೂ ಇಲ್ಲದಿದ್ದಾಗಲೂ ಅವರೊಂದಿಗಿನ ಸಂಪರ್ಕ ಕಡಿಮೆ ಮಾಡಿಲ್ಲ. ಅಭಿವೃದ್ಧಿ ಕಾರ್ಯಗಳನ್ನೂ ಸಹ ಕೊರತೆ ಮಾಡಿಲ್ಲ. ಮುಂದೆಯೂ ನಿಮ್ಮೆಲ್ಲರ ಆಶೀರ್ವಾದದ ಮತಗಳಿಂದ ಮತ್ತೆ ವಿಧಾನಸಭೆ ಪ್ರವೇಶಿಸಿ ಕ್ಷೇತ್ರದ ಮತ್ತಷ್ಟು ಅಭಿವೃದ್ಧಿಗೆ ಪಣ ತೊಡಲಿದ್ದೇನೆ. ಈ ನನ್ನ ಜನಪರ ಯೋಜನೆಗಳ ಅನುಷ್ಠಾನದ ಯಜ್ಞಕ್ಕೆ ನಿಮ್ಮೆಲ್ಲರ ಹವಿಸ್ಸಿನ ರೂಪದ ಮತಗಳನ್ನು ದಾನ ಮಾಡಬೇಕಿದೆ ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
ಅವರ ಮತಯಾಚನೆಯ ಭಾಷಣವನೊಮ್ಮೆ ಕೇಳಿ!!!
ಅವರು ತಾಲೂಕಿನ ಚಿಕ್ಕಮಾವಳ್ಳಿ, ಕೋಳಿಕೇರಿ ಹಾಗೂ ದೇಶಪಾಂಡೆ ನಗರದಲ್ಲಿ ಕಾರ್ಯಕರ್ತರ ಸಭೆಯೊಂದಿಗೆ ಮತದಾರರಲ್ಲಿ ಮತಯಾಚಿಸುತ್ತಾ ಹೇಳಿದರು.
ಕಳೆದ ಬಾರಿಗಿಂತ ಅತ್ಯಧಿಕ ಮತಗಳಿಂದ ಕ್ಷೇತ್ರದ ಜನರು ಆಶೀರ್ವದಿಸಿ ಗೆಲ್ಲಿಸುತ್ತಾರೆಂಬ ಅಚಲವಾದ ನಂಬಿಕೆ ಇದ್ದು ವಿರೋಧ ಪಕ್ಷದ ಸುಳ್ಳು ಭರವಸೆಗಳಿಗೆ ಮರುಳಾಗದೇ ಅಭಿವೃದ್ಧಿ ಪರ ಸರ್ಕಾರ ಸ್ಪಷ್ಟ ಬಹುಮತದ ಸರ್ಕಾರಕ್ಕಾಗಿ ಭಾರತೀಯ ಜನತಾಪಕ್ಷದ ಕಮಲದ ಗುರುತಿಗೆ ಮತ ಹಾಕಬೇಕೆಂದು ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಯಲ್ಲಾಪುರ ತಾಲೂಕು ಮಂಡಲಾಧ್ಯಕ್ಷ ಗೋಪಾಲಕೃಷ್ಣ ಎನ್ ಗಾಂವ್ಕರ್, ತಾ.ಪಂ ಮಾಜಿ ಅಧ್ಯಕ್ಷ ರವಿ ಕೈಟ್ಕರ್, ಪ್ರಮುಖರಾದ ಮಾಕು ಕೊಕರೆ, ನಾಗೇಶ್, ಮಹೇಶ್ ಕಾಸರಕರ, ಸ್ಥಳಿಯ ಕಾರ್ಯಕರ್ತರು, ಪ್ರಮುಖರು, ಸಾರ್ವಜನಿಕರು ಉಪಸ್ಥಿತರಿದ್ದರು.

ಚುನಾವಣ ಸಂದರ್ಭದಲ್ಲಿ ಕೇವಲ ತನ್ನ ಅಭಿವೃದ್ಧಿ ಕಾರ್ಯಗಳು ಮುಂದೆ ಹಾಕಿಕೊಳ್ಳುವ ಯೋಜನೆಗಳು. ವಿರೋಧ ಪಕ್ಷದವರ ಬಗ್ಗೆ ಟೀಕೆ ಜಾತಿ,ಮತ,ಧರ್ಮದ ವಿಚಾರಗಳನ್ನು ಅನವಶ್ಯಕ ವಾಗಿ ಎಳೆದುತಂದು ತನ್ನ ಲಾಭಕ್ಕಾಗಿ ಭಾಷಣಮಾಡುವವರ ಮದ್ಯೆ ಶಿವರಾಮ ಹೆಬ್ಬಾರ್ ವಿಬಿನ್ನರಾಗಿ ಕಾಣುತ್ತಾರೆ.
ರಾಜಕಾರಣದಲ್ಲಿ ಚುನಾವಣೆಗಳು ಬರುತ್ತವೆ ಹೋಗುತ್ತ ವೆ ಆದರೆ ಕ್ಷೇತ್ರದ ಜನರ ಒಳಿತಿನ ಬಗ್ಗೆ ಆಲೋಚಿಸಿ ಜಾಗೃತಿಯ ಮತುಗಳನ್ನಾಡುವುದು ಅಪರೂಪದಲ್ಲಿ ಅಪರೂಪವಾಗಿದ್ದು ತಾನೊಬ್ಬ ವಿಭಿನ್ನ ರಾಜಕಾರಣಿ ಮತ್ತು ಶಿಕ್ಷಣ ಪ್ರೇಮಿ ಎಂಬುದನ್ನು ಹೆಬ್ಬಾರ್ ತನ್ನ ನಡೆನುಡಿಯ ಮೂಲಕ ತೋರಿಸಿದ್ದು ನೆರೆದವರ ಸಂತಸಕ್ಕೆ ಕಾರಣವಾಗಿತ್ತು.


ಸೃಷ್ಟಿಕರ್ತ ಭಗವಂತ ಬಡವರಿಗಾಗಲಿ ಶ್ರೀಮಂತರಿಗಾಗಲಿ ಎರಡು ಕಣ್ಣುಗಳನ್ನು ನೀಡಿದ್ದು ಅಕ್ಷರ ಜ್ಞಾನ ಬೆಳೆಸಿಕೊಳ್ಳಬೇಕಿದೆ. ಗೌಳಿ ಸಮುದಾಯದಲ್ಲಿ ಶಿಕ್ಷಣದ ಕ್ರಾಂತಿಯಾಗಬೇಕು ಭವಿಷ್ಯದ ಪೀಳಿಗೆಯಲ್ಲಿ ಅತ್ಯಂತ ಬುದ್ದಿವಂತ ವಿದ್ಯಾವಂತ ಸಮಾಜ ಇದಾಗಬೇಕಿದೆ ಎಂಬುದು ಹೆಬ್ಬಾರ್ ಮನದಾಳದ ಮಾತಾಗಿತ್ತು. ಒಂದು ಸಾಲಿನಲ್ಲಿ ಮತ ಯಾಚಿಸುವುದು ಇನ್ನುಳಿದಷ್ಟು ಮಾತುಗಳೂ ಜಾಗೃತಿಯ ಮಾತುಗಳಾಗಿದ್ದವು.