

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿ ದ್ವನಿ ಯಲ್ಲಾಪುರ
ಯಲ್ಲಾಪುರ : ಈ ವರ್ಷ ಯುಗಾದಿ ಉತ್ಸವವನ್ನು ವಿವಿಧ ಬಗೆಯ ಕಾರ್ಯಕ್ರಮಗಳೊಂದಿಗೆ ವಿಜ್ರಂಭಣೆಯಿಂದ ಆಚರಿಸಲಾಗುವುದು ಎಂದು ಯುಗಾದಿ ಉತ್ಸವ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಎನ್ ಗಾಂವ್ಕರ ಹೇಳಿದರು.

ಅವರು ಪಟ್ಟಣದ ಅಡಿಕೆ ಭವನದಲ್ಲಿ ಯುಗಾದಿ ಉತ್ಸವಾಚರಣೆ ಕುರಿತು ಕರೆಯಲಾದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.


ಮಾ.27 ರಂದು ಸಂಜೆ 4.30 ಕ್ಕೆ ಉತ್ಸವದ ಜಾಗೃತಿಗಾಗಿ ಬೈಕ್ ರ಼್ಯಾಲಿ ನಡೆಯಲಿದೆ. ಮಾ.30 ರಂದು ಯುಗಾದಿಯ ದಿನ ಸಂಜೆ ಭವ್ಯ ಶೋಭಾಯಾತ್ರೆ ನಡೆಯಲಿದ್ದು. ಪವಿತ್ರ ಪಂಚಾಂಗ ಪಠಣ ನಡೆಯಲಿದೆ.
ಏ.4 ರಂದು ಸಂಜೆ 4 ಕ್ಕೆ ವೈಟಿಎಸ್ಎಸ್ ಮೈದಾನದಲ್ಲಿ ಹಿಂದು ಸಮಾವೇಶ ನಡೆಯಲಿದ್ದು, ಶಿರಳಗಿಯ ಶ್ರೀ ಆಶೀರ್ವಚನ ನೀಡುವರು. ಹಿಂದುತ್ವದ ಪ್ರಖರ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಭಾಗವಹಿಸುತ್ತಾರೆ ಎಂದರು.
ಪ್ರಮುಖರಾದ ಸೋಮೇಶ್ವರ ನಾಯ್ಕ, ಪ್ರದೀಪ ಯಲ್ಲಾಪುರಕರ್, ಶ್ರೀನಿವಾಸ ಗಾಂವ್ಕರ, ಸುರೇಶ ಹೆಗಡೆ, ನಮಿತಾ ಬೀಡಿಕರ್, ಶ್ಯಾಮಿಲಿ ಪಾಟಣಕರ್, ಸಿದ್ಧಾರ್ಥ ನಂದೊಳ್ಳಿಮಠ, ಕೇಶವ ಗಾಂವ್ಕರ ಇದ್ದರು.



