
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ

ಪ್ರತಿಧ್ವನಿ ಯಲ್ಲಾಪುರ – ಸದ್ಯದ ಪರಿಸ್ಥಿತಿಯಲ್ಲಿ ಕರ್ನಾಟಕದಲ್ಲಿ ಹಿಂದುತ್ವದ ಗಟ್ಟಿಧ್ವನಿ ಅಂಜದೆ ಅಳುಕದೆ ತನ್ನ ಸನಾತನ ಪದ್ದತಿ ಪರಂಪರೆಯನ್ನು ಪ್ರತಿಪಾಧಿಸುತ್ತ ನೇರ ನುಡಿಯೊಂದಿಗೆ ಹಿಂದುತ್ವದ ಪರ ಧ್ವನಿಎತ್ತಿ ಅದನ್ನು ಗಟ್ಟಿಯಾಗಿ ಸಮರ್ಥಿಸಿಕೊಳ್ಳುವ ಛಾತಿ ಎದೆಗಾರಿಕೆ ಇರುವುದು ಕೆನರಾ ಲೋಕಸಭಾ ಕ್ಷೇತ್ರದ ಹಿಂದು ಫೈರ್ ಬ್ರಾಂಡ್ ಸಂಸದ ಅನಂತ್ ಕುಮಾರ್ ಹೆಗಡೆಯವರಲ್ಲಿ ಮಾತ್ರ ಅದಕ್ಕಾಗಿಯೆ ಅನಂತ್ ಕುಮಾರ್ ಹೆಗಡೆ ಕರ್ನಾಟಕದ ಯೋಗಿ ಆಧಿತ್ಯನಾಥ್ ಎನ್ನುವುದು ಎಂದು ಬಿಜೆಪಿ ಹಿರಿಯ ಮುಖಂಡ ಗಣಪತಿ ಮುದ್ದೇಪಾಲ್ ಹೇಳಿದರು.
ಅವರು ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ಜೊತೆ ಮಾತನಾಡಿ ಇತ್ತೀಚೆಗೆ ಅನಂತ್ ಕುಮಾರ್ ಹೆಗಡೆಯವರ ಮೇಲೆ ಇಲ್ಲಸಲ್ಲದ ಮತ್ತು ಕ್ಷುಲ್ಲಕ ಕಾರಣಗಳಿಗೆ ಸುಳ್ಳು ಕೇಸ್ ದಾಖಲಿಸುತ್ತಿರುವುದು ಅವರ ವರ್ಚಸ್ಸಿಗೆ ದಕ್ಕೆ ತರುವ ಪ್ರಯತ್ನವಾಗಿದೆ ಹೊರತು ಮತ್ತೇನು ಅಲ್ಲ.

ಅನಂತ್ ಕುಮಾರ್ ಹೆಗಡೆಯವರು ಕೆಲವು ಸಮಯದವರೆಗೆ ಆರೋಗ್ಯದ ಸಂಬಂಧ ಕ್ರಿಯಾಶೀಲತೆ ಯಿಂದ ದೂರ ಉಳಿದಿದ್ದರೆ ವಿನಃ ತಮಗೆ ಸಂಬಂಧಿಸಿದ ಕಾರ್ಯದಿಂದಲ್ಲ. ವಿಶೇಷವಾಗಿ ಕ್ಷೇತ್ರದ ಜನಮಾನಸದಲ್ಲಿ ಇಂದಿಗು ಅದೇ ಗೌರವದ ಸ್ಥಾನದಲ್ಲಿದ್ದಾರೆ. ಕಾರಣ ಅನಂತ್ ಕುಮಾರ್ ಹೆಗಡೆ ಕೇವಲ ರಾಜಕೀಯದ ರಾಜಕಾರಣಿಯಲ್ಲ ಅವರೊಬ್ಬ ಪ್ರಖರ ಹಿಂದುತ್ವ ಪ್ರತಿಪಾದಕ ಅಲ್ಲದೆ ತನ್ನ ಧರ್ಮವನ್ನು ಸಮರ್ಥಿಸುವ ವಿಚಾರದಲ್ಲಿ ಎಂದಿಗು ಹಿಂದೆ ಬಿದ್ದವರಲ್ಲ ತನ್ನ ಎಲ್ಲಾ ಹೇಳಿಕೆಗು ಬದ್ದರಾಗಿಯೆ ನಿಲ್ಲುವವರು. ಅದಕ್ಕಾಗಿಯೆ ಕ್ಷೇತ್ರದ ಜನ ಸುದೀರ್ಘ ಸಮಯದಿಂದ ಗೆಲ್ಲಿಸುತ್ತಿರುವುದು ಅಲ್ಲದೆ ಅತ್ಯಧಿಕ ಬಹುಮತಗಳಿಂದ ಗೆಲ್ಲಿಸುತ್ತಿರುವುದು.
ಸಂಸದ ಅನಂತ್ ಕುಮಾರ್ ಹೆಗಡೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಏಕವಚನದಲ್ಲಿ ಮಾತನಾಡಿದ್ದಾರೆ ಎಂದು ದೂಷಿಸುವುದು ಸರಿ ಎನಿಸಿದರೆ ಅದೇ ಸಿದ್ದರಾಮಯ್ಯನವರು ದೇಶದ ಪ್ರಧಾನಿಯವರನ್ನು ಏಕವಚನದಲ್ಲಿ ಸಂಬೋಧಿಸಿದ್ದು ಸಹ ಅಕ್ಷಮ್ಯವಾಗಲಿದೆ ಎನ್ನುವುದು ವಾಸ್ತವ ಅಲ್ಲವೇ..? ಸಂಸದರ ಮೇಲೆ ಸರ್ಕಾರ ಸುಮೊಟೊ ಕೇಸ್ ದಾಖಲಿಸುವುದಾದರೆ ಬೇರೆಯವರ ಮೇಲೆ ಏಕೆ ಕೇಸ್ ಇಲ್ಲ..? ಹಾಗಾದರೆ ವಿರೋದಿಗಳಿಗೆ ಅನಂತ್ ಕುಮಾರ್ ಹೆಗಡೆ ಸಿಂಹ ಸ್ವಪ್ನ ಆಗಿರಲೆಬೇಕು ಅಲ್ಲವೆ. ಗಣಪತಿ ಮುದ್ದೇಪಾಲ್
ಕೇಂದ್ರದಲ್ಲಿ ಕರ್ನಾಟಕದ ಪರವಾದ ಗಟ್ಟಿಯಾದ ಹಿಂದುತ್ವದ ಪ್ರತಿಪಾದಕ ಬೇಕೆಂದರೆ ಅದಕ್ಕೆ ಅನಂತ್ ಕುಮಾರ್ ಹೆಗಡೆ ಸೂಕ್ತವಾದವರು ಅವರನ್ನು ಧರ್ಮದ ಪರ ನಿಲ್ಲುವುದಕ್ಕಾಗಿಯೆ ಪ್ರತಿ ಭಾರಿ ಗೆಲ್ಲಿಸುತ್ತಾರೆ.

ಮೇಲಿನ ಎಲ್ಲಾ ಕಾರಣಗಳಿಂದ ಕೆನರಾ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮತ್ತೆ ಅವರೇ ಆಗುತ್ತಾರೆಂಬ ಸುದ್ದಿ ಹರಡುತ್ತಿದ್ದಂತೆ ಅವರ ವಿರುದ್ದದ ಷಡ್ಯಂತ್ರ ಬಲವಾಗುತ್ತಿದೆ. ಈಗಲೂ ಲೋಕಸಭಾ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದರೆ ತಿಳಿಯುತ್ತದೆ ಪ್ರಖರ ಹಿಂದುತ್ವವಾದಿ ಅನಂತ್ ಕುಮಾರ್ ಹೆಗಡೆ ಪರಬಹುದೊಡ್ಡ ಸಂಖ್ಯೆಯ ಮತದಾರರ ಒಲವಿದೆ.

ಒಂದು ಮೂಲದ ಮಾಹಿತಿಯಂತೆ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಕೆನರಾ ಕ್ಷೇತ್ರಕ್ಕೆ ಅನಂತ್ ಕುಮಾರ್ ಹೆಗಡೆ ಹೆಸರು ಫೈನಲ್ ಆದರೆ ಅವರ ವಿರುದ್ದ ನಿಲ್ಲುವ ಅಭ್ಯರ್ಥಿಗಳ ಹೆಸರೆ ಹೊರಬರುತ್ತಿಲ್ಲ ಅದೇ ಅಭ್ಯರ್ಥಿ ಬೇರೆ ಎಂದಾದರೆ ಎಲ್ಲಾ ಪಕ್ಷದಲ್ಲಿನ ಟಿಕೆಟ್ ಆಕಾಂಕ್ಷಿತರ ಪಟ್ಟಿ ಹನುಮಂತನ ಬಾಲದಂತೆ ಬೆಳೆಯಲಿದೆ. ಇದೆಲ್ಲವು ಕ್ಷೇತ್ರದ ರಾಜಕೀಯ ಪಂಡಿತರು,ವಿಶ್ಲೇಷಕರು, ಎಲ್ಲಾ ಪಕ್ಷದ ಕಾರ್ಯಕರ್ತರಿಗು ತಿಳಿದಿರುವ ಸತ್ಯವಾಗಿದೆ.

ಒಟ್ಟಿನಲ್ಲಿ ವಿಶ್ರಾಂತಿಯಲ್ಲಿದ್ದ ಹಿಂದು ಹುಲಿ ಅಖಾಡಕ್ಕಿಳಿದಿದ್ದು ಎದುರಾಳಿಗಳ ಎದೆಯಲ್ಲಿ ನಡುಕ ಪ್ರಾರಂಭವಾಗಿದೆ ಅದು ರಾಜಕೀಯವಾಗಿಯು ಹೌದು ಧಾರ್ಮಿಕವಾಗಿಯು ಹೌದು ಎಂದು ಬಿಜೆಪಿ ಪ್ರಮುಖ ಗಣಪತಿ ಮುದ್ದೇಪಾಲ್ ಅಭಿಪ್ರಾಯವಾಗಿದೆ.