



ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ – ಯಲ್ಲಾಪುರ ಲಯನ್ಸ್ ಕ್ಲಬ್ ಹಾಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಂಧತ್ವ ನಿವಾರಣ ಸಂಸ್ಥೆ ಕಾರವಾರ ಸಂಯುಕ್ತಾಶ್ರಯದಲ್ಲಿ ದಿನಾಂಕ 29-2-24 ರಂದು ಯಲ್ಲಾಪುರದ ಅಡಿಕೆ ಭವನದಲ್ಲಿ “ಕಣ್ಣಿನಪೊರೆ ಉಚಿತ ತಪಾಸಣಾ ಶಿಭಿರ ಮತ್ತು ಉಚಿತ ಶಸ್ತ್ರ ಚಿಕಿತ್ಸಾ ಶಿಭಿರ ” ಹಮ್ಮಿಕೊಳ್ಳಲಾಗಿದೆ.

ಕಣ್ಣಿನ ಸಂಬಂಧ ಸಮಸ್ಯೆ ಇದ್ದವರು ಶಿಭಿರದ ಸದುಪಯೋಗ ಪಡೆದುಕೊಳ್ಳಬೇಕಾಗಿ ಯಲ್ಲಾಪುರ ಲಯನ್ಸ್ ಕ್ಲಬ್ ಅಧ್ಯಕ್ಷ ಸುರೇಶ್ ಬೋರ್ಕರ್ ಮತ್ತು ತಂಡ ಕರೆನೀಡಿದ್ದಾರೆ.

ಲಯನ್ಸ್ ರೇವಣಕರ ಚಾರಿಟಬಲ್ ಕಣ್ಣಿನ ಆಸ್ಪತ್ರೆ ನೇತ್ರ ತಜ್ಞ ವೈಧ್ಯರುಗಳಾದ ಡಾ|| ಮನೋಜ ಎಂ.ಎನ್ ಮತ್ತು ಡಾ|| ರಾಜಶೇಖರ ಡಿ. ಶಿಭಿರದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸೂಚನೆ
⏯️ ಇದು ಕೇವಲ ಕಣ್ಣಿನ ಪೊರೆಯ ತಪಾಸಣಾ ಶಿಭಿರವಾಗಿದ್ದು ಇಲ್ಲಿ ಕನ್ನಡಕ ಪರೀಕ್ಷಿಸಲಾಗುವುದಿಲ್ಲ.
⏯️ ಶಿಭಿರಕ್ಕೆ ಬರುವವರು ರೇಶನ್ ಕಾಡ್೯ ಕಡ್ಡಾಯವಾಗಿ ತರಬೇಕು ಮತ್ತು ಮೊಬೈಲ್ ನಂಬರ್ ತಿಳಿಸಬೇಕು.
⏯️ ಕೇವಲ ಪೋರೆ ಇರುವ ವ್ಯಕ್ತಿಗಳ ಶಸ್ತ್ರ ಚಿಕಿತ್ಸೆ ಮಾಡಲಾಗುವುದು.
⏯️ ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾದವರು ಅದೇ ದಿನ ಕುಮುಟದ ಲಯನ್ಸ್ ರೇವಣಕರ ಚಾರಿಟಬಲ್ ಕಣ್ಣಿನ ಆಸ್ಪತ್ರೆಗೆ ಬರಲು ಸಿದ್ದರಿರಬೇಕು. ಈ ಕುರಿತು ಮನೆಯವರಿಗೆ ಮೊದಲೆ ಮಾಹಿತಿ ನೀಡಿರಬೇಕು.
⏯️ ಸಕ್ಕರೆ ಕಾಯಿಲೆ, ರಕ್ತದೊತ್ತಡ, ದಮ್ಮು ಇತ್ಯಾಧಿ ರೋಗ ಇರುವವರುಬಾದಕ್ಕೆ ಸಂಬಂಧಿಸಿದ ಔಷದ ಜೊತೆಯಲ್ಲಿ ತರಬೇಕು.
⏯️ ತಾಂತ್ರಿಕ ಅಥವ ಆಡಳಿತಾತ್ಮಕ ಅಡಚಣೆಗಳಿಂದ ಶಸ್ತ್ರ ಚಿಕಿತ್ಸೆ ಮಾಡಲಾಗದಿದ್ದಲ್ಲಿ ಮುಂದಿನ ಶಿಭಿರದಲ್ಲಿ ಮಾಡಲಾಗುವುದು.
⏯️ ಶಸ್ತ್ರ ಚಿಕಿತ್ಸೆಗೆ ಒಳಪಡುವವರಿಗೆ ವಸತಿ, ಊಟ, ಉಪಹಾರ ಉಚಿತವಾಗಿ ನೀಡಲಾಗುತ್ತದೆ.
ಇಷ್ಟೆಲ್ಲಾ ಮಾಹಿತಿ ತಿಳಿದು ಶಿಭಿರದಲ್ಲಿ ಪಾಲ್ಗೊಳ್ಳುವವರು ಈ ಕೆಳಗಿನ ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆ
ಲಯನ್ ಸುರೇಶ್ ಬೋರ್ಕರ್ – 9449286395
ಲಯನ್ ಎನ್.ಎ.ಭಟ್ – 9483068862
ಲಯನ್ ಶೇಷಗಿರಿ ಪ್ರಭು – 9448225867
ಲಯನ್ ನಂದನ್ ಬಾಳಗಿ – 9448023597
ಲಯನ್ ಮಂಜುನಾಥ ನಾಯ್ಕ – 9481905197
ಶಿಭಿರದ ಸದುಪಯೋಗ ಪಡಿಸಿಕೊಳ್ಳಿ ಧನ್ಯವಾದಗಳು


