
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ದಿ. ಮಾಜಿ ಮುಖ್ಯಮಂತ್ರಿ ಸಾರೆಕೊಪ್ಪ ಬಂಗಾರಪ್ಪ ನವರ ಜನ್ಮ ದಿನವನ್ನು ಶ್ರೀಗುರು ಸಹಕಾರಿ ಸಂಘ, ಸಮಗ್ರ ನಾಮಧಾರಿ ಅಭಿವೃದ್ಧಿ ಸಂಘ ಮತ್ತು ಬಂಗಾರಪ್ಪಾಜಿ ಅಭಿಮಾನಿ ಬಳಗ ಯಲ್ಲಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಗುರು ಸಹಕಾರಿ ಸಂಘದ ಕಚೇರಿಯಲ್ಲಿ ಅಭಿಮಾನಿಗಳೆಲ್ಲ ಸೇರಿ ಹುಟ್ಟು ಹಬ್ಬ ಆಚರಿಸಿದರು.

ಶ್ರೀ ಗುರು ಸಹಕಾರಿ ಸಂಘದ ಅಧ್ಯಕ್ಷ ರವಿ ನಾಯ್ಕ ಎಂಜನಿಯರ್ ಪ್ರಾಸ್ತಾವಿಕಾ ಭಾಷಣ ಹಾಗೂ ಬಂಗಾರಪ್ಪಾಜಿ ಅವರ ಬಗ್ಗೆ ತಮ್ಮ ಅನಿಸಿಕೆ ಹಂಚಿಕೆ ಮಾಡಿಕೊಂಡರು..

ಸಾಮಾಜಿಕ ಕಾರ್ಯಕರ್ತ ಉಲ್ಲಾಸ ಶಾನಭಾಗ್ ಬಂಗಾರಪ್ಪ ನವರ ಬಗ್ಗೆ ತಮ್ಮ ನುಡಿ ನಮನ ಸಲಿಸುತ್ತ ಬಂಗಾರಪ್ಪಾಜಿ ಬಡವರ ಶ್ರಮಿಕರ ಅಭಿವೃದ್ದಿಗೆ ಶ್ರಮಿಸಿದವರು ಹಾಗೆಯೇ ರಾಜಕೀಯವಾಗಿ ಎಲ್ಲಾ ವರ್ಗದ ಜನರು ಸ್ಮರಿಸುವ ಕೆಲಸ ಮಾಡಿರುವರು ಎಂದು ತಮ್ಮ ಅನಿಸಿಕೆ ಹಂಚಿಕೊಂಡರು..
ಈ ಕಾರ್ಯಕ್ರಮದಲ್ಲಿ ಶ್ರೀ ಗುರು ಸಹಕಾರಿ ಸಂಘದ ಉಪಾಧ್ಯಕ್ಷ ಗಜಾನನ ನಾಯ್ಕ್ ತಳ್ಳಿಕೇರಿ , ಸಮಗ್ರ ನಾಮಧಾರಿ ಸಂಘದ ಅಧ್ಯಕ್ಷ ಸತೀಶ್ ಶಿವಾನಂದ್ ನಾಯ್ಕ್, ಉಪಾಧ್ಯಕ್ಷ ನವೀನ್ ಗುಣವಂತ್ ನಾಯ್ಕ್, ಪ್ರಮುಖ ಸೋಮೇಶ್ವರ ಎಂ. ನಾಯ್ಕ್ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು..
ಸಮಗ್ರ ನಾಮಧಾರಿ ಸಂಘದ ಪರವಾಗಿ ಅಶೋಕ್ ಎಂ ನಾಯ್ಕ್ ಇವರು ಬಂಗಾರಪ್ಪ ನವರ ಬಗ್ಗೆ ತಮ್ಮ ಅನಿಸಿಕೆ ಅಭಿಪ್ರಾಯ ತಿಳಿಸುತ್ತಾ ಬಂಗಾರಪ್ಪ ಇವರು ಹಿಂದುಳಿದ ವರ್ಗಗಳ ಅಭಿವೃದ್ದಿಗೆ ಶ್ರಮಿಸಿದ ಧೀಮಂತ ನಾಯಕ ಹಗಲಿರಳು ಬಡವರ ಹಾಗೂ ದೀನ ದಲಿತರ ಎಳ್ಗೆಗೆ ಶ್ರಮಿಸಿದವರು ಎಂದರು.
ಶ್ರೀ ಗುರು ಸಹಕಾರಿ ಸಂಘದ ವ್ಯವಸ್ಥಾಪಕರಾದ ಶ್ರೀ ಚಂದನ ಕೇಶವ ನಾಯ್ಕ್ ವಂದಿಸಿದರು.


ಸಭಾ ಕಾರ್ಯಕ್ರಮದ ನಂತರದಲ್ಲಿ ಯಲ್ಲಾಪುರ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಬಂಗರಪ್ಪಾಜಿ ಜನುಮದಿನದ ನಿಮಿತ್ತ ಹಣ್ಣು ಹಂಪಲು ನೀಡಲಾಯಿತು. ಈ ಸಂದರ್ಭದಲ್ಲಿ ವೈದ್ಯ ರತ್ನಾಕಾರ ಕುರ್ಡೇಕರ್ ಹಾಗೂ ದೀಪಕ ವಿ ಭಟ ಇವರು ಉಪಸ್ಥಿರಿದ್ದರು.