Breaking News

ಪತ್ರಕರ್ತ ಸುಬ್ರಾಯ ಬಿದ್ರೆಮನೆ ರಚಿತ ” ಹೊಸ ಭಾವದ ತೇರು ” ಕವನ ಸಂಕಲನ ಬಿಡುಗಡೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾ ಭವನದಲ್ಲಿ ಪತ್ರಕರ್ತ ಬರಹಗಾರ ಸುಬ್ರಾಯ ಬಿದ್ರೆಮನೆ ರಚಿಸಿದ ” ಹೊಸ ಭಾವದ ತೇರು ” ಎಂಬ ಕವನ ಸಂಕಲನವನ್ನು ಹಿರಿಯ ಸಾಹಿತಿ, ನಿವೃತ್ತ ಪ್ರಾಚಾರ್ಯ ಆರ್ ಡಿ.ಹೆಗಡೆ ಆಲ್ಮನೆ ಬಿಡುಗಡೆ ಮಾಡಿ ಮಾತನಾಡಿದರು.


ಬೆಳೆಯುತ್ತಿರುವ ಜಗತ್ತಿನ ಭರಾಟೆಯ ನಡುವೆಯು ತಂತ್ರಜ್ಞಾನದ ಪೈಪೋಟಿ ನಡುವೆ ಓದುಗರ ಮನಃಮುಟ್ಟುವ ಕವನ ಸಂಕಲನ ಬರೆದು ಸಮಾಜಕ್ಕೆ ನೀಡುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿ. ಹಿಂದೆ ಇದ್ದಂತಹ ಬದ್ದತೆ ಶಿಸ್ತು ಓದುಗರು ಮತ್ತು ಸಾಹಿತ್ಯ ಕ್ಷೇತ್ರದ ಆಸಕ್ತರಲ್ಲಿ ಕ್ಷೀಣಿಸುತ್ತಿರುವುದು ಅತ್ಯಂತ ವಿಷಾಧಕರ. ಇತ್ತೀಚಿನ ದಿನಗಳಲ್ಲಿ ಓದುಗರು ವಿಮರ್ಶಕರಾಗಿ ಓದಿರುವ ಯಾವುದೆ ಸಾಹಿತ್ಯ ಪ್ರಾಕಾರಗಳನ್ನು ಮತ್ತೊಬ್ಬರೊಂದಿಗೆ ಹಂಚಿಕೊಳ್ಳಬೇಕಿದೆ ಎಂದು ಹೇಳಿದರು.


ವಿಶ್ರಾಂತ ಪ್ರಾಂಶುಪಾಲ ಬೀರಣ್ಣ ನಾಯಕ ಮೊಗಟ ಕವನ ಸಂಕಲನವನ್ನು ಪರಿಚಯಿಸಿ ಮಾತನಾಡಿ ಇಷ್ಟೊಂದು ತಂತ್ರಜ್ಞಾನದ ಸ್ಪರ್ಧೆಯ ನಡುವೆಯು ಬಿದ್ರೆಮನೆ ಅವರ ಸಾಹಿತ್ಯ ಪ್ರೇಮ ಮೆಚ್ಚುವಂತಹದ್ದು. ನಿಜ ಜೀವನದ ಮೌಲ್ಯಗಳಿಗೆ ಬಹಳ ಹತ್ತಿರವಾದ ಕವನಗಳು ಹೊತ್ತಿಗೆಯಲ್ಲಿ ಅಡಕವಾಗಿವೆ ಅಲ್ಲದೆ ಹೆಚ್ಚು ಪ್ರೀತಿ ಪ್ರೇಮ ಮತ್ತು ಹೆಣ್ಣಿನ ಸುತ್ತ ಕವನ ಸಂಕಲನದ ಸಾಲುಗಳು ಹರಿದಾಡಿವೆ ಎಂದರು.

ಪತ್ರಕರ್ತ ಶ್ರೀಧರ ಅಣಲಗಾರ ಕವನ ಸಂಕಲನದ ರಚನಾಕಾರ ಬಿದ್ರೆಮನೆ ಪ್ರಯತ್ನದ ಕುರಿತು ಮಾತನಾಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್.ವಾಸರೆ ಕೃತಿಕಾರ ಬಿದ್ರೆಮನೆಯವರನ್ನು ಶಾಲು ಹೊದೆಸಿ ಗೌರವಿಸಿ ಸನ್ಮಾನಿಸಿ ಮಾತನಾಡಿದರು.
ಪ್ರಸಕ್ತ ದಿನಮಾನಗಳಲ್ಲಿ ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಕವನ, ಕಥೆ, ಲೇಖನಗಳು ಹೊರಬರಬೇಕಿದೆ. ಯಾವುದೆ ಸರ್ಕಾರಗಳು ಕನ್ನಡಕ್ಕೆ ಸಂಬAಧಿಸಿದ ಕಾರ್ಯಗಳಿಗೆ ಆರ್ಥಿಕ ಪ್ರೋತ್ಸಾಹ ನೀಡಬೇಕಿದೆ. ಇತ್ತೀಚೆಗೆ ಜ್ಞಾನಕ್ಕೆ ಸಂಬAಧಿಸಿದ ಸಾತ್ವಿಕ ಕಾರ್ಯಕ್ರಮಗಳಲ್ಲಿ ಆಸಕ್ತರ ಭಾಗವಹಿಸುವಿಕೆ ಕಡಿಮೆಯಾಗುತ್ತಿರುವ ನಡೆ ಒಳ್ಳೆಯ ಬೆಳವಣಿಗೆಯಲ್ಲ. ಕನ್ನಡ ಕಟ್ಟುವ ಕಾರ್ಯ ಸಂಘಟಿತರಾಗಿ ಮುಂದುವರೆಸಬೇಕಿದೆ ಎಂದರು.


ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಜಿ.ಎನ್. ಭಟ್ ತಟ್ಟೀಗದ್ದೆ ಸ್ವಾಗತಿಸಿದರು. ತಾಲೂಕಾ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ಟ ಪ್ರಾಸ್ತಾವಿಕ ನುಡಿದರು. ಜಿ.ಎಸ್ ಗಾಂವ್ಕರ ಕಂಚೀಪಾಲ ವಂದಿಸಿದರು. ಕ.ಸಾ.ಪ ಕಾರ್ಯದರ್ಶಿ, ಶಿಕ್ಷಕ ಸಂಜೀವಕುಮಾರ ಹೊಸ್ಕೇರಿ ನಿರೂಪಿಸಿದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರ ಪೊಲೀಸರ ಕಾರ್ಯ ಕ್ಷಮತೆ – ವರ್ಷದ ಹಿಂದಿನ ಡಕಾಯಿತಿ ಪ್ರಕರಣ ಆರೋಪಿಗಳು ಸ್ವತ್ತಿನ ಸಹಿತ ಅಂದರ್.!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ತಾಲೂಕಿನ ಅರಬೈಲ್ ಘಟ್ಟದಲ್ಲಿ ಕಾರು ಅಡ್ಡಗಟ್ಟಿ …

Leave a Reply

Your email address will not be published. Required fields are marked *