
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸ್ಥಳೀಯ ಶಾಸಕರೂ, ಕಾರ್ಮಿಕ ಸಚಿವರೂ ಆದ ಶಿವರಾಮ ಹೆಬ್ಬಾರ ಅಪಾರ ಪ್ರಮಾಣದ ಅನುದಾನವನ್ನು ತಮ್ಮ ಕ್ಷೇತ್ರಕ್ಕೆ ತಂದು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವ ಕಾರಣದಿಂದಲೇ ಕ್ಷೇತ್ರದ ಜನರ ಪ್ರೀತಿ, ವಿಶ್ವಾಸಗಳನ್ನು ಗಳಿಸಿದ್ದಾರಲ್ಲದೇ, ಪ್ರಸ್ತುತ ಚುನಾವಣೆಯಲ್ಲಿಯೂ ಅತ್ಯಧಿಕ ಮತಗಳ ಅಂತರದಿAದ ಗೆಲುವು ಸಾಧಿಸುವ ಆತ್ಮವಿಶ್ವಾಸ ಹೊಂದಿದ್ದಾರೆ ಎಂದು ಗೋವಾ ರಾಜ್ಯದ ಮಾಜಿ ಶಾಸಕ ಉಲ್ಲಾಸ ತುವೇಕರ್ ಹೇಳಿದರು.
ಅವರು ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದರು.
ಹೆಬ್ಬಾರ ಅವರು ವಿಶೇಷವಾಗಿ ಮಾಡಿದ ಪಟ್ಟಣದ ಬಸ್ ನಿಲ್ದಾಣ, ಮಿನಿ ವಿಧಾನಸೌಧ, ಪಟ್ಟಣ ಪಂಚಾಯಿತಿಯ ನೂತನ ಕಟ್ಟಡ, ಸರ್ಕಾರಿ ಆಸ್ಪತ್ರೆಯ ನವೀಕರಣ ಮತ್ತು ಸುಸಜ್ಜಿತ ವ್ಯವಸ್ಥೆಗಳ ಒದಗಣೆ ಹಾಗೂ ತಾಲೂಕಿನಾದ್ಯಂತ ನಿರ್ಮಿಸಿರುವ ಅನೇಕ ಸೇತುವೆ ಮತ್ತು ರಸ್ತೆ ಕಾಮಗಾರಿಗಳು ಅವರ ಸಾಧನೆಗೆ ಸಾಕ್ಷಿಯಾಗಿದ್ದು, ಮತದಾರರು ಹೆಬ್ಬಾರರ ಅಭಿವೃದ್ಧಿ ಕಾರ್ಯಗಳನ್ನು ಖಂಡಿತ ಮರೆಯಲಾರರು. ಈ ಹಿನ್ನೆಲೆಯಲ್ಲಿಯೇ ಹೆಬ್ಬಾರರ ಗೆಲುವು ನಿಶ್ಚಿತ ಎಂದ ಅವರು, ಎಲ್ಲ ಮತದಾರರೂ ತಮ್ಮ ಅಮೂಲ್ಯ ಮತವನ್ನು ಬಿಜೆಪಿಗೆ ನೀಡುವ ಮೂಲಕ ಹೆಬ್ಬಾರರ ಪ್ರಚಂಡ ವಿಜಯಕ್ಕೆ ಕಾರಣರಾಗಬೇಕು ಎಂದು ವಿನಂತಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಮಾತನಾಡಿ, ಈ ಬಾರಿಯ ಚುನಾವಣೆ ಹಿಂದೆAದಿಗಿAತಲೂ ವಿಶೇಷವಾಗಿದ್ದು, ಜಿಲ್ಲೆಯ ಎಲ್ಲ ೬ ವಿಧಾನಸಭಾ ಸ್ಥಾನಗಳನ್ನು ಗೆಲ್ಲುವುದಕ್ಕೆ ಅಗತ್ಯವಿರುವ ಸಂಘಟನಾತ್ಮಕ ಹೋರಾಟವನ್ನು ಬಿಜೆಪಿ ರೂಪಿಸಿದೆ. ಅಲ್ಲದೇ ರಾಜ್ಯದ ಬಹುಮತಕ್ಕೆ ಅಗತ್ಯವಾಗಿರುವ ಜಿಲ್ಲೆಯ ಕೊಡುಗೆ ಕುರಿತು ಚಿಂತಿಸಲಾಗುತ್ತಿದೆ. ಈ ನಡುವೆ ಬಿಜೆಪಿ ಪ್ರಭಾವವನ್ನು ಕುಗ್ಗಿಸಲು ಸುಳ್ಳು ಮತ್ತು ಕುತಂತ್ರಗಳನ್ನೇ ಕಾಂಗ್ರೆಸ್ ಪ್ರಚಾರದ ಸರಕನ್ನಾಗಿಸಿ ಬಳಸಿಕೊಳ್ಳುತ್ತಿದೆ ಎಂದು ಟೀಕಿಸಿದರು.
ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರಾಮು ನಾಯ್ಕ, ಗೋವಾ ದಕ್ಷಿಣ ಜಿಲ್ಲೆಯ ಜಿ.ಪಂ. ಸದಸ್ಯ ಪರೀಷ್ ನಾಯ್ಕ ಸುದ್ಧಿಗೋಷ್ಟಿಯಲ್ಲಿದ್ದರು.