
ಪ್ರತಿಧ್ವನಿ,ಯಲ್ಲಾಪುರ : ತಾಲ್ಲೂಕಿನ ಅತ್ಯಂತ ಹಳೆಯ ಹಾಗು ಪ್ರಥಮ ಗಜಾನನೋತ್ಸವ ನಡೆಸುತ್ತಾ ಬಂದಿರುವ ಪ್ರತಿಷ್ಠಿತ ತಿಲಕ್ ಚೌಕ್ ಸಾರ್ವಜನಿಕ ಗಜಾನನೋತ್ಸವ ಆವಾರದಲ್ಲಿ ಮಂಗಳವಾರ ಮಹಾ ಅನ್ನ ಪ್ರಸಾದ ಸೇವೆ ಯಶಸ್ವಿಯಾಗಿ ನೆರವೇರಿತು.

ವರ್ಷಂ ಪ್ರತಿ ನಡೆಸುವ ಚೌತಿ ಗಣಪತಿ ಸಂಭ್ರಮೋತ್ಸವದಲ್ಲಿ ತಿಲಕ್ ಚೌಕ್ ಸಮಿತಿ ಆವಾರದಲ್ಲಿ ವಿಶೇಷ ಅನ್ನ ಸಂತರ್ಪಣೆ ಶ್ರದ್ದಾ ಭಕ್ತಿಯಿಂದ ನೆರವೇರುತ್ತ ಹೆಸರುವಾಸಿಯಾಗಿದೆ ಈ ಬಾರಿಯು ಸಹಸ್ರಾರು ಸಂಖ್ಯೆಯಲ್ಲಿ ತಾಲ್ಲೂಕಿನ ಜನತೆ ಅನ್ನ ಪ್ರಸಾದ ಸ್ವೀಕರಿಸಿ ಕೃತಾರ್ಥರಾದರು.

ಪ್ರತಿ ವರ್ಷದಂತೆ ಈ ಬಾರಿಯು ಶಾಸಕ ಶಿವರಾಮ ಹೆಬ್ಬಾರ್ ತಿಲಕ್ ಚೌಕ್ ಸಾರ್ವಜನಿಕ ಗಜಾನನೋತ್ಸವ ಸಮಿತಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಕ್ಷೇತ್ರದ ಸರ್ವ ಜನತೆಯ ಒಳಿತಿಗಾಗಿ ಭಗವಂತನಲ್ಲಿ ಪ್ರಾರ್ಥಿಸಿದರು.

ನಂತರ ತಿಲಕ್ ಚೌಕದ ಸಾರ್ವಜನಿಕ ಗಜಾನನೋತ್ಸವ ಸಮಿತಿಯ ವತಿಯಿಂದ ಹಮ್ಮಿಕೊಂಡ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಅನ್ನಪ್ರಸಾದವನ್ನು ಬಡಿಸುವ ಕಾರ್ಯದಲ್ಲಿ ಭಕ್ತಾದಿಗಳೊಂದಿಗೆ ಪಾಲ್ಗೊಂಡರು.
Prathidvani Yellapura