Breaking News

ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಗೆ ಸಮಗ್ರ ವೀರಾಗ್ರಣಿ ಪ್ರಶಸ್ತಿ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಕಾಳಮ್ಮನಗರದ ತಾಲೂಕಾಕ್ರೀಡಾಂಗಣದಲ್ಲಿಅಗಸ್ಟ್ 23 ಮತ್ತು 24 ರಂದು ನಡೆದ 2023-24 ನೇ ಸಾಲಿನ ಯಲ್ಲಾಪುರ ವಲಯ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಇಲಾಖಾಕ್ರೀಡಾಕೂಟದಲ್ಲಿ ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯು ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಬಾಲಕರ ವೈಯಕ್ತಿಕ ವಿಭಾಗದಲ್ಲಿ ಮಂಜುನಾಥ ಮರಾಠಿ 110 ಮೀ ಹರ್ಡಲ್ಸ್ ಪ್ರಥಮ,
200 ಮೀ ಓಟ ದ್ವಿತೀಯ, 100 ಮೀ ಓಟತೃತೀಯ,

ಬಾಲಚಂದ್ರಕುಣಬಿ 800 ಮೀ ಓಟ ಪ್ರಥಮ,
ಸಂಕೇತ ನಾಯ್ಕ 110 ಮೀ ಹರ್ಡಲ್ಸ್ ದ್ವಿತೀಯ, ಉದ್ದಜಿಗಿತ ದ್ವಿತೀಯ, ಚಕ್ರಎಸೆತತೃತೀಯ,
ಕೃಷ್ಣ ಕಾರುಂಡೆ ಹ್ಯಾಮರ್‍ಎಸೆತ ಪ್ರಥಮ,
ಭೂಮೇಶಗೌಡ 100 ಮೀ ಓಟದ್ವಿತೀಯ,
ಸೂರಜ್ ಸಿದ್ದಿ 5 ಕಿ ಮೀ ನಡಿಗೆ ದ್ವಿತೀಯ, ಜ್ಞಾನೇಶ್ವರ ಜಂಗ್ಲೆ ಪೋಲ್ ವಾಲ್ಟ್‍ತೃತೀಯ,
ನವೀನ ಸಿದ್ದಿ ಎತ್ತರಜಿಗಿತ ಪ್ರಥಮ, ಪೋಲ್ ವಾಲ್ಟ್ ಪ್ರಥಮ ಹಾಗೂ 5 ಕಿ ಮೀ ನಡಿಗೆಪ್ರಥಮ,

ಬಾಲಕಿಯರ ವೈಯಕ್ತಿಕ ವಿಭಾಗದಲ್ಲಿ ಮಹಾಲಕ್ಷ್ಮೀ ಕಟ್ಟಿಮನಿ ಉದ್ದಜಿಗಿತ ಪ್ರಥಮ, 100 ಮೀ ಓಟ ಪ್ರಥಮ,
ಸಾನಿಯಾ ಬನ್ನೂರ 1500 ಮೀ ಓಟ ಪ್ರಥಮ, 200 ಮೀ ಓಟತೃತೀಯ, ಹರ್ಷಿತಾ ಪಟಗಾರ 3000 ಮೀ ಓಟ ಪ್ರಥಮ,
ಪ್ರಜ್ಞಾ ಬಾಂದೇಕರ ಗುಂಡುಎಸೆತ ಪ್ರಥಮ, ಜಾವಲಿನ್ ಎಸೆತ ದ್ವೀತೀಯ, ಎತ್ತರಜಿಗಿತ ತೃತೀಯ,
ಪ್ರಿಯಾಂಕಾ ಗೌಡಾ ಗುಂಡು ಎಸೆತ ದ್ವಿತೀಯ,
ಅನಿಶಾ ಮರಾಠಿ ಚಕ್ರಎಸೆತ ದ್ವಿತೀಯ,
ಶ್ವೇತಾ ಉಡುಪಿ 110 ಮೀ ಹರ್ಡಲ್ಸ್ ದ್ವಿತೀಯ,
ಬಾಲಕರ ವಿಭಾಗದ ಗುಂಪು ಆಟದಲ್ಲಿ4*100 ಮೀ ರಿಲೇ ಪ್ರಥಮ, ವಾಲಿಬಾಲ್ ಪ್ರಥಮ, ಥ್ರೋಬಾಲ್ ಪ್ರಥಮ, ಖೋ ಖೋ ಪ್ರಥಮ
ಬಾಲ್ ಬ್ಯಾಡ್ಮಿಂಟನ್ ಪ್ರಥಮ, ಕಬಡ್ಡಿ ದ್ವಿತೀಯ,

ಬಾಲಕಿಯರ ವಿಭಾಗದ ಗುಂಪು ಆಟದಲ್ಲಿ ವಾಲಿಬಾಲ್ ಪ್ರಥಮ, ಥ್ರೋಬಾಲ್ ಪ್ರಥಮ, ಬಾಲ್ ಬ್ಯಾಡ್ಮಿಂಟನ್ ದ್ವಿತೀಯ ಸ್ಥಾನವನ್ನು ಪಡೆದುಕೊಳ್ಳುವ ಮೂಲಕ ಕ್ರೀಡಾಕೂಟದ ಸಮಗ್ರ ವೀರಾಗ್ರಣಿ ಶಾಲೆ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಕುಮಾರ ನವೀನ್‍ಸಿದ್ದಿ ವೈಯಕ್ತಿಕ 3 ಸ್ಫರ್ಧೆಯಲ್ಲಿ ಪ್ರಥಮ ಬಹುಮಾನ ಪಡೆಯುವ ಮೂಲಕ ಬಾಲಕರ ವಿಭಾಗದ ವೈಯಕ್ತಿಕಚಾಂಪಿಯನ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾನೆ.

ವಿಜೇತ ರಾದ ಎಲ್ಲ ವಿದ್ಯಾರ್ಥಿಗಳಿಗೆ ಹಾಗೂ ತರಬೇತುದಾರರಿಗೆ ಶಾಲಾ ಆಡಳಿತ ಮಂಡಳಿಯವರು, ಮುಖ್ಯಾಧ್ಯಾಪಕರು ಹಾಗೂ ಶಿಕ್ಷಕ ವೃಂದದವರು ಶುಭ ಹಾರೈಸಿದ್ದಾರೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರ ಪೊಲೀಸರ ಕಾರ್ಯ ಕ್ಷಮತೆ – ವರ್ಷದ ಹಿಂದಿನ ಡಕಾಯಿತಿ ಪ್ರಕರಣ ಆರೋಪಿಗಳು ಸ್ವತ್ತಿನ ಸಹಿತ ಅಂದರ್.!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ತಾಲೂಕಿನ ಅರಬೈಲ್ ಘಟ್ಟದಲ್ಲಿ ಕಾರು ಅಡ್ಡಗಟ್ಟಿ …

Leave a Reply

Your email address will not be published. Required fields are marked *